ಪುಣೆಯಲ್ಲಿ ‘ದೋ ಧಾಗೆ ಶ್ರೀ ರಾಮ್ ಕೆ ಲಿಯೇ’ ಕಾರ್ಯಕ್ರಮದ ಆಯೋಜನೆ !

(‘ತುಕಡೆ ತುಕಡೆ ಗ್ಯಾಂಗ್’ ಎಂದರೆ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಗ್ಯಾಂಗ್)
ಪುಣೆ – ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯವಾದ ಶ್ರೀರಾಮ ಮಂದಿರವನ್ನು ನಿರ್ಮಿಸಲಾಗುತ್ತಿದೆ. ಇಂತಹ ಸಮಯದಲ್ಲಿ ಹಳೆ ದೇವಸ್ಥಾನಗಳನ್ನು ಕೆಡವಿದಂತೆ ಈ ದೇವಸ್ಥಾನಕ್ಕೂ ಮಾಡಬೇಕು’ ಎಂದು ‘ತುಕಡೆ ತುಕಡೆ ಗ್ಯಾಂಗ್’ ಅಥವಾ ಇಂತಹ ಮನಸ್ಥಿತಿಯನ್ನು ಹೊಂದಿರುವ ಕೆಲವು ಚರ್ಚ್ ಗಳು ಸಂಚು ರೂಪಿಸಿವೆ. ಅವೆಲ್ಲವನ್ನೂ ಹೋಗಲಾಡಿಸಲು ಶ್ರೀರಾಮನ ಮಂದಿರ ನಿರ್ಮಾಣವಾಗುವುದಷ್ಟೇ ಅಲ್ಲ, ‘ಸಮರ್ಥ ರಾಷ್ಟ್ರ ಮಂದಿರ’ ನಿರ್ಮಾಣದ ಅಗತ್ಯವಿದೆ. ಈ ರಾಷ್ಟ್ರ ಸದೃಢವಾಗಬೇಕು ಎಂದು ಶ್ರೀರಾಮ ಜನ್ಮಭೂಮಿ ನ್ಯಾಸ ಕೋಶಾಧ್ಯಕ್ಷ ಡಾ. ಸ್ವಾಮಿ ಗೋವಿಂದದೇವ ಗಿರಿ ಹೇಳಿದರು. (ಹಿಂದೂಗಳು ಸಂತರ ಈ ಸೂಚಿತ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ರಾಮಮಂದಿರವನ್ನು ರಕ್ಷಿಸಲು ಸಿದ್ಧರಾಗಬೇಕು ! – ಸಂಪಾದಕರು) ಇಲ್ಲಿನ ಮಾಡರ್ನ್ ಕಾಲೇಜು ಮೈದಾನದಲ್ಲಿ ಸಾಮಾಜಿಕ ಕಾರ್ಯಕರ್ತ ಅನಘ ಘೈಸಾಸ್ ಅವರ ಸಹಯೋಗದಲ್ಲಿ ‘ದೋ ಧಾಗೇ ಶ್ರೀ ರಾಮ್ ಕೆ ಲಿಯೇ’ ಆಯೋಜಿಸಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ಸ್ವಾಮಿ ಗೋವಿಂದದೇವ ಗಿರಿ ಮಹಾರಾಜ ಅವರು ಈ ಹೇಳಿಕೆ ನೀಡಿದ್ದಾರೆ.
ಪ.ಪೂ. ಸ್ವಾಮಿ ಗೋವಿಂದ ದೇವಗಿರಿ ಮಹಾರಾಜರು ಮಾತನ್ನು ಮುಂದುವರೆಸುತ್ತಾ
1. ಈ ಹಿಂದೆ ಶ್ರೀರಾಮ ಮಂದಿರವನ್ನು ಕೆಡವಿ ಆ ಸ್ಥಳದಲ್ಲಿ ಮಸೀದಿ ನಿರ್ಮಿಸಲಾಗಿತ್ತು. ಆ ಬಳಿಕ ಮಸೀದಿಯನ್ನು ಕೆಡವಿ ಆ ಸ್ಥಳದಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ. ನಾವು ಭವ್ಯವಾದ ರಾಮಮಂದಿರವನ್ನು ನಿರ್ಮಿಸುತ್ತಿದ್ದೇವೆ; ಆದರೆ ಶ್ರೀರಾಮನ ಮೂರ್ತಿ ಪ್ರತಿಷ್ಠಾಪಿಸಿ ಮಂದಿರ ಕಟ್ಟುವುದು ಸಾಕಾಗುವುದಿಲ್ಲ, ಶ್ರೀರಾಮನ ಕೆಲಸ ಮತ್ತು ರಾಮಮಂದಿರದ ಅಸ್ತಿತ್ವವನ್ನು ಉಳಿಸಿಕೊಳ್ಳಲು ನಾವೆಲ್ಲರೂ ಶ್ರಮಿಸಬೇಕಾಗಿದೆ.
2. ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ದೇವಾಲಯಗಳನ್ನು ಕೆಡವಲಾಯಿತು. ಕೆಲವು ವರ್ಷಗಳ ನಂತರ ಈ ದೇವಾಲಯಗಳನ್ನು ಏಕೆ ನಿರಂತರವಾಗಿ ಕೆಡವಲಾಗುತ್ತದೆ ?, ಏಕೆ ನಾಶವಾಗುತ್ತಿವೆ? ಅದರ ವಿಮರ್ಷೆ ಮಾಡಬೇಕು.
ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜ್ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥಯಾತ್ರೆಯ ಖಜಾಂಚಿಯಾಗಿದ್ದಾರೆ. ಹೀಗಾಗಿ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾಜಿ ಸಹಯೋಗಿ ಹಾಗೂ ಶ್ರೀರಾಮಮಂದಿರ ಟ್ರಸ್ಟ್ನ ಮಾರ್ಗದರ್ಶಕ ಭಯ್ಯಾಜಿ ಜೋಶಿ, ಸಚಿವ ಚಂದ್ರಕಾಂತ ಪಾಟೀಲ, ಉಪಾಧ್ಯಕ್ಷ ನೀಲಂ ಗೊರ್ಹೆ ಉಪಸ್ಥಿತರಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ನಿಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಲ್ಲಿ ದೂರು
ನ್ಯಾಯಾಧೀಶರ ಮಾನಹಾನಿ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ! – ದೆಹಲಿ ಹೈಕೋರ್ಟ್
ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!
ಶೂಟರ್ ಜಸ್ಪಾಲ್ ರಾಣಾ ಅವರ 49ನೇ ವಯಸ್ಸಿನಲ್ಲಿ ನಿಧನ
ಬಾರೂಯಿಪುರ (ಬಂಗಾಳ): ‘ಜೈ ಶ್ರೀರಾಮ್’ ಎಂದಿದ್ದಕ್ಕೆ ಹಿಂದೂ ವಿದ್ಯಾರ್ಥಿ ಮೇಲೆ ಮುಸಲ್ಮಾನ್ ವಿದ್ಯಾರ್ಥಿಗಳಿಂದ ಅಮಾನುಷ ಹಲ್ಲೆ !
ಸಲ್ಮಾನ್ ಖಾನ್ ಅವರಿಂದ ಪರಿಸರ ನಿಯಮಗಳ ಉಲ್ಲಂಘನೆ! – ವಿಡಿಯೋ ಮೂಲಕ ನೆರೆಹೊರೆಯವರ ಆರೋಪ