ಉತ್ತರ ಪ್ರದೇಶ ಸರಕಾರದ ಡೆಪ್ಯುಟಿ ರಿಜಿಸ್ಟ್ರಾರ್ ಉದ್ಯೋಗದಲ್ಲಿ ಉಳಿಯಲು ಉರ್ದು ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗಿಲ್ಲ !ಬ್ರಿಟಿಷರು ಮಾಡಿದ 115 ವರ್ಷಗಳ ಹಿಂದಿನ ಕಾನೂನು ಬದಲಾಗಲಿದೆ ! |

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಆಡಳಿತದ ವಿರುದ್ಧ ಭಾರತದ ಜಾತ್ಯತೀತವಾದಿಗಳು ವಾಗ್ದಾಳಿ ನಡೆಸಲು ಮತ್ತೊಂದು ಕಾರಣ ಸಿಕ್ಕಿದೆ. ಆದ್ದರಿಂದಲೇ ಈ ನಿರ್ಧಾರ ಸ್ವಾಗತಾರ್ಹ ಎಂದೇ ಹೇಳಬೇಕಾಗಬಹುದು. ರಾಜ್ಯದ ಉಪ ನೋಂದಣಾಧಿಕಾರಿಗಳು ಇನ್ನು ಮುಂದೆ ‘ಉರ್ದು ಇಮ್ಲಾ’ ಎಂಬ ಉರ್ದು ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗಿಲ್ಲ. ಏಕೆಂದರೆ ಸರಕಾರಿ ಕೆಲಸಗಳಲ್ಲಿ ಉರ್ದು ಮತ್ತು ಫಾರ್ಸಿ ಪದಗಳ ಅತಿಯಾದ ಬಳಕೆಯನ್ನು ನಿಷೇಧಿಸಲಾಗುವುದು.
ಇದುವರೆಗೆ ಉಪ ನೋಂದಣಾಧಿಕಾರಿಗಳು ರಾಜ್ಯ ಸರಕಾರಿ ಉದ್ಯೋಗಗಳಲ್ಲಿ ಉಳಿಸಿಕೊಳ್ಳಲು 2 ವರ್ಷಗಳ ಅವಧಿಯ ಉರ್ದು ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿತ್ತು; ಆದರೆ ಯೋಗಿ ಆದಿತ್ಯನಾಥ್ ಸರಕಾರವು 1908 ರಿಂದ ಜಾರಿಯಲ್ಲಿರುವ ಬ್ರಿಟಿಷ್ ನಿರ್ಮಿತ ಕಾನೂನನ್ನು ರದ್ದುಗೊಳಿಸಲು ನಿರ್ಧರಿಸಿದೆ. ಬ್ರಿಟಿಷರ ಈ ಕಾನೂನನ್ನು ‘ನೋಂದಣಿ ಕಾಯಿದೆ’ ಎಂದು ಕರೆಯಲಾಗುತ್ತದೆ. ಈ ಕಾಯಿದೆಯ ಅಡಿಯಲ್ಲಿ, ಸರಕಾರಿ ವ್ಯವಹಾರಗಳಲ್ಲಿ ಉರ್ದು ಮತ್ತು ಪರ್ಷಿಯನ್ ಪದಗಳನ್ನು ಹೆಚ್ಚು ಪ್ರೋತ್ಸಾಹಿಸಲಾಗಿತ್ತು.
ಸಾಮಾನ್ಯ ಜನರಿಗೂ ತಿಳಿಯದ ರಕ್ಬಾ, ಬೈನಾಮ, ರಹನ್, ಸಾಕಿನ್, ಖುರ್ದ್ ಮುಂತಾದ ಪದಗಳು ಸರಕಾರಿ ವ್ಯವಹಾರಗಳಲ್ಲಿ ನಡೆಯುತ್ತಿವೆ. ಈಗ ಅವುಗಳ ಸ್ಥಾನಕ್ಕೆ ಸಾಮಾನ್ಯ ಹಿಂದಿ ಪದಗಳು ಬರಲಿವೆ ಎಂದು ಸರಕಾರಿ ಮೂಲಗಳು ತಿಳಿಸಿವೆ. ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯ ಮೂಲಕ ಆಯ್ಕೆಯಾದ ಡೆಪ್ಯುಟಿ ರಿಜಿಸ್ಟ್ರಾರ್ಗಳಿಗೆ ಉರ್ದು ಪರೀಕ್ಷೆ ಕಡ್ಡಾಯವಾಗಿತ್ತು; ಆದರೆ ಈಗ ಸರಕಾರ ಕೈಗೊಂಡಿರುವ ಈ ನಿರ್ಧಾರದಿಂದ ಈ ಪರೀಕ್ಷೆ ನಡೆಸಬೇಕಾಗಿಲ್ಲ. ಈ ಕೋರ್ಸ್ ಅಡಿಯಲ್ಲಿ ಉರ್ದು ಬರವಣಿಗೆ, ಮಾತನಾಡುವುದು, ವ್ಯಾಕರಣ ಮತ್ತು ಅನುವಾದದಂತಹ ವಿಷಯಗಳನ್ನು ಕಲಿಯಬೇಕಾಗಿತ್ತು. ಸರಕಾರ ಈಗ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇದೆಲ್ಲವನ್ನೂ ಬದಲಾಯಿಸಲು ಹೊರಟಿದೆ.
ಇಲ್ಲಿ ಉರ್ದು ಮತ್ತು ಫಾರ್ಸಿ ಪದಗಳನ್ನು ಅತಿಯಾಗಿ ಬಳಸಲಾಗುತ್ತಿತ್ತು !
ತಾಲೂಕುಗಳಲ್ಲಿ ಸಂಪತ್ತು ನೋಂದಣಿ ಮಾಡುವಾಗ !
ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಾಗ !
ಪೊಲೀಸ್ ಠಾಣೆಯಲ್ಲಿ ಬರೆಯಲಾಗಿರುವ ದೂರುಗಳಲ್ಲಿ !
UP: No mandatory Urdu test for sub-registrar jobs now, Yogi Adityanath govt to replace Urdu and Persian words with Hindi on registry documentshttps://t.co/SwNRroM4d3
— OpIndia.com (@OpIndia_com) December 7, 2023
ಸಂಪಾದಕರ ನಿಲುವು* ಉತ್ತರ ಪ್ರದೇಶ ಸರಕಾರ ಮಾತ್ರ ಒಂದು ಸ್ಥಳದಲ್ಲಿ ಈ ಬದಲಾವಣೆಯನ್ನು ಮಾಡಿದೆ, ಈಗ ಇತರ ಸ್ಥಳಗಳಲ್ಲಿಯೂ ಅಂತಹ ಬದಲಾವಣೆಯನ್ನು ಮಾಡಬೇಕಾಗಿದೆ ! * ಯೋಗಿ ಆದಿತ್ಯನಾಥ್ ಸರಕಾರದ ಈ ಮತ್ತೊಂದು ಶ್ಲಾಘನೀಯ ನಿರ್ಧಾರವನ್ನು ಬಿಜೆಪಿ ಆಡಳಿತವಿರುವ ಇತರ ರಾಜ್ಯಗಳು ಅನುಸರಿಸಲಿ ಎಂದು ಹಿಂದೂಗಳ ನಿರೀಕ್ಷೆ ! |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath