ಕೆನಡಾದಲ್ಲಿ ಖಲಿಸ್ತಾನಿಗಳು ಹಿಂದೂ ದೇವಾಲಯವನ್ನು ಸುತ್ತುವರೆದು ಭಾರತ ವಿರೋಧಿ ಪ್ರತಿಭಟನೆ !

ಭಾರತದ ರಾಷ್ಟ್ರಧ್ವಜವನ್ನು ಕಾಲಿನಿಂದ ತುಳಿದರು !

ಒಟಾವಾ (ಕೆನಡಾ) – ನವೆಂಬರ್ 25 ರ ಸಂಜೆ, ಗಳು ಕೆನಡಾದ ಟೊರೊಂಟೊದ ಮಿಸ್ಸಿಸೌಗಾ ಪ್ರದೇಶದಲ್ಲಿನ ಕಾಲಿಬಾರಿ ದೇವಸ್ಥಾನವನ್ನು ಸುತ್ತುವರೆದ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಖಲಿಸ್ತಾನಿಗಳು ಭಾರತದ ರಾಷ್ಟ್ರಧ್ವಜವನ್ನು ತುಳಿದು ಅವಮಾನಿಸಿದ್ದಾರೆ. ಮುತ್ತಿಗೆ ಹಾಕಿದ ಖಲಿಸ್ತಾನಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಮತ್ತು ಅದರ ರಾಜತಾಂತ್ರಿಕರು ಭಾಗಿಯಾಗಿದ್ದಾರೆ ಎಂದು ಆರೋಪ ಮಾಡುತ್ತಿದ್ದರು. ಮತ್ತು ಅವರನ್ನು ಬೆಂಬಲಿಸುವಂತೆ ಭಾರತೀಯ ಹಿಂದೂಗಳಿಗೆ ಮನವಿ ಮಾಡಿದರು.

ಖಲಿಸ್ತಾನಿ ಚಳವಳಿಯನ್ನು ಹತ್ತಿಕ್ಕಲು ಸ್ಥಳೀಯ ಹಿಂದೂಗಳಿಂದ ಹಣ ಸಂಗ್ರಹಿಸಿ ಭಾರತೀಯ ರಾಜತಾಂತ್ರಿಕರಿಗೆ ನೀಡಲಾಗಿದೆ ಎಂದು ಖಲಿಸ್ತಾನಿಗಳು ಆರೋಪಿಸಿದ್ದಾರೆ.
(ಖಲಿಸ್ತಾನಿಗಳಿಗಾಗಿ ಭಾರತದಿಂದ ಎಷ್ಟು ಜನ ಹಣ ವಸೂಲಿ ಮಾಡಿದ್ದಾರೆ ಎಂದು ಭಾರತ ತನಿಖೆ ನಡೆಸಬೇಕು ಮತ್ತು ಸಂಬಂಧಿಸಿದವರನ್ನು ದೇಶದ್ರೋಹದ ಅಡಿಯಲ್ಲಿ ಜೈಲಿಗೆ ಹಾಕಬೇಕು ! – ಸಂಪಾದಕರು)

(ಸೌಜನ್ಯ : Republic World )

ಸಂಪಾದಕರ ನಿಲುವು

* ಕೆನಡಾದಲ್ಲಿನ ಭಾರತ ಮತ್ತು ಹಿಂದೂ ವಿರೋಧಿ ಖಲಿಸ್ತಾನಿಗಳನ್ನು ಭಾರತದಲ್ಲಿನ ಸಿಖ್ಖರು ಏಕೆ ಬಹಿರಂಗವಾಗಿ ವಿರೋಧಿಸುತ್ತಿಲ್ಲ ? ಭಾರತೀಯರಿಗೆ ಇದರ ಉತ್ತರ ಸಿಗಬೇಕು !