‘ನಿಮಗೆ (ಪೊಲೀಸರಿಗೆ) ಇಲ್ಲಿಂದ ಹೋಗಬೇಕಾಗುವುದು ಅಥವಾ ನಾನೇ ನಿಮ್ಮನ್ನು ಓಡಿಸಲೆ ?(ಅಂತೆ)’ – ಅಕ್ಬರುದ್ದೀನ್ ಓವೈಸಿ

  • ಬಹಿರಂಗ ಸಭೆಯಲ್ಲಿ ಪೊಲೀಸರಿಗೆ ಬೆದರಿಕೆ ಎಂ.ಐ.ಎಂ. ನ ಮುಖಂಡ ಅಕ್ಬರುದ್ದೀನ್ ಓವೈಸಿ !

  • ಪೊಲೀಸರಿಂದ ದೂರು ದಾಖಲು

ಭಾಗ್ಯನಗರ (ತೆಲಂಗಾಣ) – ಎಂ.ಐ.ಎಂ. ನ ಮುಖಂಡ ಅಕ್ಬರುದ್ದೀನ್ ಓವೈಸಿ ಇವರು ಬಹಿರಂಗ ಸಭೆಯಲ್ಲಿ ಪೊಲೀಸರಿಗೆ ಬೆದರಿಸಿದರು. ಪೊಲೀಸರು ಸಮಯಕ್ಕೆ ಸರಿಯಾಗಿ ಸಭೆ ನಿಲ್ಲಿಸಲು ಸೂಚನೆ ನೀಡಿರುವುದರಿಂದ ಚಾಕು ಮತ್ತು ಗುಂಡುಗಳನ್ನು ಎದುರಿಸಿರುವುದರಿಂದ ನಾನು ದುರ್ಬಲನಾಗಿದ್ದೇನೆ’, ಎಂದು ನಿಮಗೆ ಅನಿಸುತ್ತಿದೆಯೇ ? ನನ್ನಲ್ಲಿ ಈಗಲೂ ಧೈರ್ಯವಿದೆ. ಸಭೆಯ ಸಮಯ ಇನ್ನೂ ೫ ನಿಮಿಷ ಉಳಿದಿದೆ, ನಾನು ಇನ್ನೂ ೫ ನಿಮಿಷ ಮಾತನಾಡುವೆ. ನನ್ನನ್ನು ನಿಲ್ಲಿಸುವಂತಹ ಮಗನನ್ನು ಯಾರು ಹಡೆದಿಲ್ಲ ಈ ಶಬ್ದಗಳಲ್ಲಿ ಅಕ್ಬರುದ್ದೀನ್ ಇವರು ಪೊಲೀಸರಿಗೆ ತಾಕಿತ್ತು ಮಾಡಿದರು. ಅವರು ತೆಲಂಗಾಣದಲ್ಲಿನ ವಿಧಾನಸಭೆ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು. ಅಕ್ಬರುದ್ದೀನ್ ಓವೈಸಿ ಚಂದ್ರಯಾನಗುಟ್ಟ ಚುನಾವಣಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಕ್ಬರುದ್ದೀನ್ ಇವರ ಈ ಹೇಳಿಕೆಯ ನಂತರ ಪೊಲೀಸರು ಅವರ ವಿರುದ್ಧ ದೂರು ದಾಖಲಿಸಿದ್ದಾರೆ.

ಅಕ್ಬರುದ್ದೀನ್ ಇವರು ಮಾತು ಮುಂದುವರಿಸಿ, ‘ನಾನು ಸರಿಯಾಗಿ ಮಾತನಾಡಿದೆನಲ್ಲವೇ ? ನಾನು ಕೇವಲ ಸನ್ನೇ ಮಾಡಿದರೆ ಆಗ ನೀವು (ಪೊಲೀಸರಿಗೆ) ಇಲ್ಲಿಂದ ಹೋಗಬೇಕಾಗುವುದು ಅಥವಾ ನಾನೇ ನಿಮ್ಮನ್ನು ಓಡಿಸಲೇ? ನಮ್ಮನ್ನು ದುರ್ಬಲಗೊಳಿಸುವುದಕ್ಕಾಗಿ ಈ ಜನರು ಇಲ್ಲಿ ಬರುತ್ತಿರುತ್ತಾರೆ.’ ಎಂದು ಹೇಳಿದರು.

ಸಂಪಾದಕೀಯ ನಿಲುವು

೧೫ ನಿಮಿಷಗಳಿಗಾಗಿ ಪೊಲೀಸರನ್ನು ಸರಿಸಿದರೇ ೧೦೦ ಕೋಟಿದವರಿಗೆ ತೋರಿಸುತ್ತೇನೆ, ಈ ರೀತಿ ಹೇಳಿಕೆ ನೀಡಿ ನಿರಪರಾಧಿಯಾಗಿ ಬಿಡುಗಡೆ ಆಗಿದ್ದ ಅಕ್ಬರುದ್ದೀನ್ ಓವೈಸಿ ಇವರ ಮಾನಸಿಕತೆ ಹೇಗೆ ಇದೆ ? ಇದು ಮತ್ತೊಮ್ಮೆ ಕಾಣುತ್ತಿದೆ. ಈಗಲಾದರೂ ಅವರಿಗೆ ಶಿಕ್ಷೆ ವಿಧಿಸುವರೆ ?

ಹಿಂದೂತ್ವನಿಷ್ಠರ ಮೇಲೆ ಇಲ್ಲಸಲ್ಲದ ದ್ವೇಷಪೂರಿತ ಹೇಳಿಕೆ ನೀಡಿರುವ (ಹೆಟ್ ಸ್ಪೀಚ್) ಪ್ರಕರಣದಲ್ಲಿ ದೂರು ದಾಖಲಿಸಿರುವ ಪೊಲೀಸರು ಪೊಲೀಸರಿಗೆ ಬೆದರಿಕೆ ನೀಡುವ ಅಕ್ಬರುದ್ದೀನ್ ಓವೈಸಿ ವಿರುದ್ಧ ‘ಹೆಟ್ ಸ್ಪೀಚ್’ ಅಡಿಯಲ್ಲಿ ದೂರು ದಾಖಲಿಸುವರೆ ?