|

ಭಾಗ್ಯನಗರ (ತೆಲಂಗಾಣ) – ಎಂ.ಐ.ಎಂ. ನ ಮುಖಂಡ ಅಕ್ಬರುದ್ದೀನ್ ಓವೈಸಿ ಇವರು ಬಹಿರಂಗ ಸಭೆಯಲ್ಲಿ ಪೊಲೀಸರಿಗೆ ಬೆದರಿಸಿದರು. ಪೊಲೀಸರು ಸಮಯಕ್ಕೆ ಸರಿಯಾಗಿ ಸಭೆ ನಿಲ್ಲಿಸಲು ಸೂಚನೆ ನೀಡಿರುವುದರಿಂದ ಚಾಕು ಮತ್ತು ಗುಂಡುಗಳನ್ನು ಎದುರಿಸಿರುವುದರಿಂದ ನಾನು ದುರ್ಬಲನಾಗಿದ್ದೇನೆ’, ಎಂದು ನಿಮಗೆ ಅನಿಸುತ್ತಿದೆಯೇ ? ನನ್ನಲ್ಲಿ ಈಗಲೂ ಧೈರ್ಯವಿದೆ. ಸಭೆಯ ಸಮಯ ಇನ್ನೂ ೫ ನಿಮಿಷ ಉಳಿದಿದೆ, ನಾನು ಇನ್ನೂ ೫ ನಿಮಿಷ ಮಾತನಾಡುವೆ. ನನ್ನನ್ನು ನಿಲ್ಲಿಸುವಂತಹ ಮಗನನ್ನು ಯಾರು ಹಡೆದಿಲ್ಲ ಈ ಶಬ್ದಗಳಲ್ಲಿ ಅಕ್ಬರುದ್ದೀನ್ ಇವರು ಪೊಲೀಸರಿಗೆ ತಾಕಿತ್ತು ಮಾಡಿದರು. ಅವರು ತೆಲಂಗಾಣದಲ್ಲಿನ ವಿಧಾನಸಭೆ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು. ಅಕ್ಬರುದ್ದೀನ್ ಓವೈಸಿ ಚಂದ್ರಯಾನಗುಟ್ಟ ಚುನಾವಣಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಕ್ಬರುದ್ದೀನ್ ಇವರ ಈ ಹೇಳಿಕೆಯ ನಂತರ ಪೊಲೀಸರು ಅವರ ವಿರುದ್ಧ ದೂರು ದಾಖಲಿಸಿದ್ದಾರೆ.
#WATCH | Telangana: AIMIM leader Akbaruddin Owaisi threatened a police inspector who was on duty and asked him to leave the spot while he was addressing a campaign in Lalitabagh, Hyderabad yesterday. The police inspector asked him to conclude the meeting on time as per the Model… pic.twitter.com/rf2tJAOk3b
— ANI (@ANI) November 22, 2023
ಅಕ್ಬರುದ್ದೀನ್ ಇವರು ಮಾತು ಮುಂದುವರಿಸಿ, ‘ನಾನು ಸರಿಯಾಗಿ ಮಾತನಾಡಿದೆನಲ್ಲವೇ ? ನಾನು ಕೇವಲ ಸನ್ನೇ ಮಾಡಿದರೆ ಆಗ ನೀವು (ಪೊಲೀಸರಿಗೆ) ಇಲ್ಲಿಂದ ಹೋಗಬೇಕಾಗುವುದು ಅಥವಾ ನಾನೇ ನಿಮ್ಮನ್ನು ಓಡಿಸಲೇ? ನಮ್ಮನ್ನು ದುರ್ಬಲಗೊಳಿಸುವುದಕ್ಕಾಗಿ ಈ ಜನರು ಇಲ್ಲಿ ಬರುತ್ತಿರುತ್ತಾರೆ.’ ಎಂದು ಹೇಳಿದರು.
ಸಂಪಾದಕೀಯ ನಿಲುವು೧೫ ನಿಮಿಷಗಳಿಗಾಗಿ ಪೊಲೀಸರನ್ನು ಸರಿಸಿದರೇ ೧೦೦ ಕೋಟಿದವರಿಗೆ ತೋರಿಸುತ್ತೇನೆ, ಈ ರೀತಿ ಹೇಳಿಕೆ ನೀಡಿ ನಿರಪರಾಧಿಯಾಗಿ ಬಿಡುಗಡೆ ಆಗಿದ್ದ ಅಕ್ಬರುದ್ದೀನ್ ಓವೈಸಿ ಇವರ ಮಾನಸಿಕತೆ ಹೇಗೆ ಇದೆ ? ಇದು ಮತ್ತೊಮ್ಮೆ ಕಾಣುತ್ತಿದೆ. ಈಗಲಾದರೂ ಅವರಿಗೆ ಶಿಕ್ಷೆ ವಿಧಿಸುವರೆ ? ಹಿಂದೂತ್ವನಿಷ್ಠರ ಮೇಲೆ ಇಲ್ಲಸಲ್ಲದ ದ್ವೇಷಪೂರಿತ ಹೇಳಿಕೆ ನೀಡಿರುವ (ಹೆಟ್ ಸ್ಪೀಚ್) ಪ್ರಕರಣದಲ್ಲಿ ದೂರು ದಾಖಲಿಸಿರುವ ಪೊಲೀಸರು ಪೊಲೀಸರಿಗೆ ಬೆದರಿಕೆ ನೀಡುವ ಅಕ್ಬರುದ್ದೀನ್ ಓವೈಸಿ ವಿರುದ್ಧ ‘ಹೆಟ್ ಸ್ಪೀಚ್’ ಅಡಿಯಲ್ಲಿ ದೂರು ದಾಖಲಿಸುವರೆ ? |
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ