24 ಗಂಟೆಗಳ ನಂತರ ಬಿಡುಗಡೆಯಾಗುವ ಸಾಧ್ಯತೆ

ಉತ್ತರಕಾಶಿ (ಉತ್ತರಾಖಂಡ) – ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯ ಸಿಲ್ಕ್ಯಾರಾ ಸುರಂಗದಲ್ಲಿ ಭೂಕುಸಿತದಿಂದ ಸಿಲುಕಿರುವ 40 ಕಾರ್ಮಿಕರನ್ನು ಇನ್ನೂ ರಕ್ಷಿಸಲಾಗಿಲ್ಲ. 5 ದಿನಗಳ ನಂತರವೂ ಅವರನ್ನು ಹೊರತೆಗೆಯುವ ಪ್ರಯತ್ನ ನಡೆಯುತ್ತಿದೆ. ಪ್ರಸ್ತುತ, ಈ ಕಾರ್ಮಿಕರಿಗೆ ಸಣ್ಣ ಪೈಪ್ ಮೂಲಕ ಆಮ್ಲಜನಕ ಮತ್ತು ಆಹಾರವನ್ನು ಪೂರೈಸಲಾಗುತ್ತಿದೆ. ಈ ಎಲ್ಲ ಕಾರ್ಮಿಕರು ಸುರಕ್ಷಿತವಾಗಿದ್ದಾರೆ. ಅವರನ್ನು ಸಂಪರ್ಕಿಸಲಾಗುತ್ತಿದೆ. ಅವರೊಂದಿಗೆ ಸಂಪರ್ಕಿಸಲು ಮಣ್ಣಿನ ಗುಡ್ಡೆಗಳನ್ನು ಸರಿಸಲು ವಿದೇಶದಿಂದ ಯಂತ್ರವನ್ನು ತರಿಸಲಾಗುತ್ತಿದೆ. ಸದ್ಯ ಸಿಲುಕಿರುವ ಕಾರ್ಮಿಕರ ಮಾನಸಿಕ ಸ್ಥಿತಿಯ ಮೇಲೆ ನಿಗಾ ಇಡಲಾಗಿದೆ. ಸುರಂಗದಿಂದ ಅವರನ್ನು ಹೊರತೆಗೆಯಲು ಇನ್ನೂ 24 ಗಂಟೆ ಬೇಕಾಗುವ ನಿರೀಕ್ಷೆಯಿದೆಯೆಂದು ಹೇಳಲಾಗುತ್ತಿದೆ.
#LIVE | Uttarakhand Tunnel Collapse Updates: High capacity machine begins drilling, 3 metres in tunnel after half hour
Click for live updates: https://t.co/g0E1UN3WfR
— The Indian Express (@IndianExpress) November 16, 2023
ಸುರಂಗವಿರುವ ಪರ್ವತದ ಸ್ಥಿತಿಯು ಅತ್ಯಂತ ನಾಜೂಕಾಗಿದೆ. ಈ ಹಿನ್ನೆಲೆಯಲ್ಲಿ ನಾರ್ವೆ ಮತ್ತು ಥಾಯ್ಲೆಂಡ್ನ ತಜ್ಞರಿಂದ ಮಾರ್ಗದರ್ಶನ ಪಡೆಯಲಾಗುತ್ತಿದೆ. ಕಾರ್ಮಿಕರನ್ನು ಹೊರಗೆ ತೆಗೆಯಲು 90 ಸೆಂ.ಮೀ ಅಗಲದ ಪೈಪ್ ಹಾಕಲು ಪ್ರಯತ್ನಿಸಲಾಗುವುದು. ಈ ಪೈಪ್ ನಲ್ಲಿ ‘ಎಕ್ಸೆಪ್ ಟನಲ್’ ಅಳವಡಿಸುವ ಸಾಧ್ಯತೆ ಇದೆ. ಆದುದರಿಂದ ಪೈಪ್ನಿಂದ ಹೊರಬರುವಾಗ ಕಾರ್ಮಿಕರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram