
ಲಕ್ಷ್ಮಣಪುರಿ (ಉತ್ತರಪ್ರದೇಶ) – ಮೌಲಾನಾ ಸಯ್ಯದ್ ಅರ್ಶದ್ ಇವರು ಮುಸ್ಲಿಂ ಸಮಾಜದ ಹುಡುಗಿಯರಿಗಾಗಿ ಸ್ವತಂತ್ರ ಶಾಲೆ ಮತ್ತು ಕಾಲೇಜುಗಳನ್ನು ತೆರೆಯುವಂತೆ ಆಗ್ರಹಿಸಿದ್ದಾರೆ. ಮದನಿ, ೮ ನೇ ತರಗತಿಯಿಂದ ಮುಸ್ಲಿಂ ಹುಡುಗಿಯರಿಗಾಗಿ ಸ್ವತಂತ್ರ ಶಾಲೆ ತೆರೆಯಬೇಕು. ಜಮಿಯತ್ ಉಲೇಮಾ-ಏ-ಹಿಂದ (ಅರ್ಶದ ಮದನಿ ಗುಂಪು) ಇವರು ಆಯೋಜಿಸಿದ್ದ ಪರಿಷತ್ತಿನಲ್ಲಿ ಅವರು ಮಾತನಾಡುತ್ತಿದ್ದರು. ಈ ಪರಿಷತ್ತಿನಲ್ಲಿ ಎಂಟನೇ ತರಗತಿ ನಂತರ ಹೆಣ್ಣು ಮಕ್ಕಳಿಗಾಗಿ ಸ್ವತಂತ್ರ ಶಾಲೆ ತೆರೆಯಬೇಕು, ಮತದಾರ ಜನಜಾಗೃತಿ ಅಭಿಯಾನ ನಡೆಸಬೇಕು, ಮತದಾರರ ಪಟ್ಟಿಯಲ್ಲಿ ಹೊಸ ಹೆಸರು ಸೇರಿಸಬೇಕು, ಇದರ ಜೊತೆಗೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಈ ಸಮಯದಲ್ಲಿ ಪಶ್ಚಿಮ ಉತ್ತರ ಪ್ರದೇಶದಲ್ಲಿನ ೧೭ ಜಿಲ್ಲೆಗಳ ಅಧಿಕಾರಿ ಹಾಗೂ ಸದಸ್ಯರು ಸಹಭಾಗಿದ್ದರು.

ಈದ್ಗಾಹ ಮಾರ್ಗದಲ್ಲಿರುವ ಮದನಿ ಮೆಮೋರಿಯಲ್ ಸ್ಕೂಲಿನಲ್ಲಿ ಈ ಪರಿಷತ್ತಿನ ಆಯೋಜನೆ ಮಾಡಲಾಗಿತ್ತು. ಈ ಪರಿಷತ್ತಿನ ಅಧ್ಯಕ್ಷ ಸ್ಥಾನದಲ್ಲಿರುವ ಜಮಿಯತ್ ನ ಪ್ರಾಂತಿಯ ಅಧ್ಯಕ್ಷ ಮೌಲಾನಾ ಅಶಹದ್ ರಶೀದಿ ಇವರು, ಉಲೇಮಾ-ಎ-ಹಿಂದ ಇದರ ಸ್ಥಾಪನೆಯ ಮೂಲ ಉದ್ದೇಶ ರಾಷ್ಟ್ರ ಮತ್ತು ದೇಶ ಸೇವೆಯ ಜೊತೆಗೆ ಇಸ್ಲಾಮಿಕ ಮೌಲ್ಯದ ರಕ್ಷಣೆ ಮಾಡುವುದಾಗಿದೆ. ಪ್ರಜಾಪ್ರಭುತ್ವ ಸಶಕ್ತ ಗೊಳಿಸುವದಕ್ಕಾಗಿ ಜಮೀಯತ್ ನಿಂತಿದೆ ಎಂದು ಹೇಳಿದರು. ಆ ಸಮಯದಲ್ಲಿ ಮೌಲಾನಾ ಅಜಹರ್ ಮದನಿ, ಮೌಲಾನ ಹಬೀಬುಲ್ಲಾ ಮದನಿ ಮತ್ತು ಆಫೀಜ್ ಅಬ್ದುಲ್ಲ ಕದ್ದುಸ್ ಹಾದಿ ಸಹಿತ ಇತರ ವಕ್ತಾರರೂ ಭಾಷಣ ಮಾಡಿದರು.
ಸಂಪಾದಕೀಯ ನಿಲುವುಮುಸ್ಲಿಂ ಹುಡುಗ-ಹುಡುಗಿಯರು ಮುಖ್ಯ ವಾಹಿನಿಗೆ ಬಂದು ಶಿಕ್ಷಣ ಪಡೆಯಬೇಕು, ಇದಕ್ಕಾಗಿ ಸರಕಾರ ಪ್ರಯತ್ನ ಮಾಡುತ್ತಿರುವಾಗ ಮುಸ್ಲಿಂ ಹುಡುಗಿಯರಿಗಾಗಿ ಸ್ವತಂತ್ರ ಶಾಲೆ ತೆರೆಯಲು ಆಗ್ರಹಿಸುವುದೆಂದರೆ ರಸತಾಳಕ್ಕೆ ಹೋಗುವಂತಾಗುತ್ತದೆ. |
ಉತ್ತರ ಪ್ರದೇಶ: ದಲಿತರ ಮೇಲಿನ ದೌರ್ಜನ್ಯದಲ್ಲಿ ಮುಸ್ಲಿಮರೂ ಮುಂಚೂಣಿಯಲ್ಲಿ
ಮುಂಬಯಿ ವಿಮಾನ ನಿಲ್ದಾಣದ ಆವರಣದಲ್ಲಿ ಶಿಯಾ ಸಮುದಾಯದವರಿಂದ ಮಾತಮ್ ಆಚರಣೆ!
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!
ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
ಗೋಮಾಂಸ ಭಕ್ಷಣೆಯನ್ನು ಪ್ರಚಾರ ಮಾಡುವ ಸಂಸ್ಥೆ ಮತ್ತು ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ!
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!