‘ನಾನು ರಾಜಾ ಸಿಂಗ್‌ನನ್ನು ಕೊಲ್ಲುತ್ತೇನೆ !'(ಅಂತೆ)

ಸಂಸದ ಅಸಾದುದ್ದೀನ್ ಓವೈಸಿ ಮುಂದೆ ಮುಸ್ಲಿಂ ಮಹಿಳೆಯ ಬೆದರಿಕೆ !

ಭಾಗ್ಯನಗರ (ತೆಲಂಗಣಾ) – ತೆಲಂಗಣಾ ವಿಧಾನಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ಇಲ್ಲಿಯ ಗೋಶಾಮಹಲ ವಿಧಾನಸಭಾ ಚುನಾವಣಾ ಕ್ಷೇತ್ರದ ಎಮ್.ಐ.ಎಮ್.ನ ಅಧ್ಯಕ್ಷ ಹಾಗೂ ಸಾಂಸದ ಅಸದುದ್ದೀನ್ ಓವೈಸಿ ಮನೆ ಮನೆಗೆ ಹೋಗುತ್ತಿದ್ದರು. ಒಂದು ಸ್ಥಳದಲ್ಲಿ ಮಹಿಳೆಯೊಬ್ಬಳು ಭಾಜಪದ ಸ್ಥಳೀಯ ಶಾಸಕ ಮತ್ತು ಪ್ರಖರ ಹಿಂದುತ್ವನಿಷ್ಠ ಟಿ. ರಾಜಾ ಸಿಂಗ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಸಾದುದ್ದೀನ್ ಓವೈಸಿಯನ್ನು ಉದ್ದೇಶಿಸಿ ಮಾತನಾಡಿದ ಮಹಿಳೆ, “ಇವನು (ಅಸಾದುದ್ದೀನ್ ಓವೈಸಿ) ಹುಲಿಯ ಮಗ. ಎದುರಾಳಿಗಳನ್ನು ಮುಗಿಸಿ, ಇಡೀ ಜಗತ್ತು ನಿಮ್ಮ ಹಿಂದೆ ನಿಂತಿದೆ. ರಾಜಾ ಸಿಂಗ್ ವಿರುದ್ಧ ಯಾರನ್ನಾದರೂ ನಿಲ್ಲಿಸಿ. ಅವನ ವಿರುದ್ಧ ನನ್ನನ್ನು ನಿಲ್ಲಿಸಿ. ನಾನು ಅವನನ್ನು ಕೊಲ್ಲುತ್ತೇನೆ ಎಂದು ಹೇಳಿದ್ದಾರೆ.

(ಸೌಜನ್ಯ – Next to tv)

ಸಂಪಾದಕೀಯ ನಿಲುವು

ಪ್ರಖರ ಹಿಂದುತ್ವನಿಷ್ಠ ನಾಯಕರಿಗೆ ಯಾವಾಗಲೂ ಮತಾಂಧ ಮುಸ್ಲಿಮರಿಂದ ಅಪಾಯ ಇದೆ, ಎಂಬುದನ್ನು ಘಟನೆ ಮತ್ತೊಮ್ಮೆ ತೋರಿಸುತ್ತದೆ !

ಈ ಬೆದರಿಕೆ ಬಗ್ಗೆ ದೇಶದ ಜಾತ್ಯತೀತರು ಹಾಗೂ ಸ್ವತಃ ಓವೈಸಿಯೇ ಬಾಯಿ ಬಿಡದಿರುವುದರಿಂದ ಈ ಬೆದರಿಕೆಗೆ ಅವರೂ ಮೌನ ಬೆಂಬಲ ನೀಡುತ್ತಿದ್ದಾರೆ ಎಂದು ಯಾರಿಗಾದರು ಅನಿಸಿದರೆ ಆಶ್ಚರ್ಯವೇನು ?