ದೇವರು ಇಷ್ಠಾರ್ಥಗಳನ್ನು ಪೂರ್ಣಗೊಳಿಸಲಿಲ್ಲ ಎಂದು ದೇವಸ್ಥಾನದ ಮೇಲೆ ಪೆಟ್ರೋಲ್ ಬಾಂಬ್ ಎಸೆದವನ ಬಂಧನ !

ಚೆನ್ನೈ (ತಮಿಳುನಾಡು) ಇಲ್ಲಿಯ ವೀರಭದ್ರ ದೇವಸ್ಥಾನದಲ್ಲಿ ನಡೆದ ಘಟನೆ !

ಚೆನ್ನೈ (ತಮಿಳುನಾಡು) – ಇಲ್ಲಿಯ ಕೊಟ್ಟಾವಲಚಾವಡಿ ಪ್ರದೇಶದ ವೀರಭದ್ರ ದೇವಸ್ಥಾನದಲ್ಲಿ ಪೆಟ್ರೋಲ್ ಬಾಂಬ್ ಎಸೆದ ಪ್ರಕರಣದಲ್ಲಿ ಮುರಳಿಕೃಷ್ಣನ್ ಹೆಸರಿನ 39 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ‘ನನ್ನ ಆರೋಗ್ಯ ಸರಿಯಾಗಿಲ್ಲ. ನನ್ನ ಆರೋಗ್ಯವನ್ನು ಗುಣಪಡಿಸುವಂತೆ ನಾನು ಪ್ರತಿದಿನ ದೇವರನ್ನು ಪ್ರಾರ್ಥಿಸುತ್ತಿದ್ದೆನು; ಆದರೆ ದೇವರು ನನ್ನ ಇಚ್ಛೆಯನ್ನು ಪೂರ್ಣಗೊಳಿಸಲಿಲ್ಲ. ಆದ್ದರಿಂದ, ನಾನು ಸಿಟ್ಟಿನಲ್ಲಿ ದೇವಸ್ಥಾನದ ಮೇಲೆ ದಾಳಿ ಮಾಡಿದೆ’ ಎಂದು ಮುರಳಿಕೃಷ್ಣನ್ ಪೊಲೀಸರಿಗೆ ತಿಳಿಸಿದ್ದಾನೆ. “ಬಾಂಬ್ ಎಸೆಯುವಾಗ ಮುರಳಿಕೃಷ್ಣನ್ ಮತ್ತಿನಲ್ಲಿ ಇದ್ದನು”, ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅವನ ವಿರುದ್ಧ ಈ ಮೊದಲು ಹತ್ಯೆಯ ಪ್ರಯತ್ನ ಮತ್ತು ಇತರ ಅಪರಾಧಗಳು ದಾಖಲಾಗಿವೆ.