ಬಲಿಪಾಡ್ಯದಂದು (ನವಂಬರ ೧೪) ೫ ಬಣ್ಣಗಳ ರಂಗೋಲಿಯಿಂದ ಬಲಿ ಮತ್ತು ಅವನ ಪತ್ನಿ ವಿಂಧ್ಯಾವಲಿಯ ಚಿತ್ರಗಳನ್ನು ಬಿಡಿಸಿ ಅವರ ಪೂಜೆಯನ್ನು ಮಾಡುತ್ತಾರೆ. ನಂತರ ಬಲಿ ಪ್ರೀತ್ಯರ್ಥ ದೀಪ ಮತ್ತು ವಸ್ತ್ರಗಳ ದಾನವನ್ನು ಮಾಡುತ್ತಾರೆ. ಈ ದಿನ ಪ್ರಾತಃಕಾಲ ಅಭ್ಯಂಗಸ್ನಾನ ಮಾಡಿದ ನಂತರ ಸ್ತ್ರೀಯರು ತಮ್ಮ ಪತಿಗೆ ಆರತಿಯನ್ನು ಬೆಳಗುತ್ತಾರೆ. ಮಧ್ಯಾಹ್ನ ಬ್ರಾಹ್ಮಣರಿಗೆ ಭೋಜನವನ್ನು ನೀಡುತ್ತಾರೆ. ಈ ದಿನ ಪಕ್ವಾನ್ನದ ಭೋಜನವನ್ನು ಮಾಡುತ್ತಾರೆ. ಈ ದಿನ ಜನರು ಹೊಸ ಬಟ್ಟೆಬರೆಗಳನ್ನು ಧರಿಸಿಕೊಂಡು ಇಡೀ ದಿನವನ್ನು ಆನಂದ ದಲ್ಲಿ ಕಳೆಯುತ್ತಾರೆ. ಈ ದಿನ ಗೋವರ್ಧನ ಪೂಜೆಯನ್ನು ಮಾಡುವ ಪದ್ಧತಿಯಿದೆ. ಇದಕ್ಕಾಗಿ ಸೆಗಣಿಯ ಪರ್ವತವನ್ನು ಮಾಡಿ ಅದರ ಮೇಲೆ ಗರಿಕೆ ಮತ್ತು ಹೂವುಗಳನ್ನು ಚುಚ್ಚು ತ್ತಾರೆ. ಕೃಷ್ಣ, ಇಂದ್ರ, ಹಸು ಮತ್ತು ಕರುಗಳ ಚಿತ್ರ ಅಥವಾ ಮೂರ್ತಿಗಳನ್ನು ಜೊತೆಗಿಟ್ಟು, ಅವುಗಳನ್ನು ಪೂಜಿಸಿ ಮೆರವಣಿಗೆ ಮಾಡುತ್ತಾರೆ.
Diwali 2023 : ಬಲಿಪಾಡ್ಯ
ಸಂಬಂಧಿತ ಲೇಖನಗಳು
- ಹನುಮಂತ ಜಯಂತಿ (ಏಪ್ರಿಲ್ ೨೩)
- ಶ್ರೀರಾಮತತ್ತ್ವ ಮತ್ತು ಮಾರುತಿತತ್ತ್ವದ ಸ್ಪಂದನಗಳನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಗಳು
- ಹಿಂದೂಗಳ ಮತ್ತು ಭಾರತದ ದೃಷ್ಟಿಯಿಂದ ಶ್ರೀರಾಮನ ಅಸಾಧಾರಣ ಮಹತ್ವ !
- ಕೊನೆಯ ಕ್ಷಣದ ವರೆಗೆ ಶ್ರೀರಾಮನ ಜೊತೆಗೆ ನೆರಳಿನಂತಿದ್ದು ‘ರಾಮಸೇವೆ’ ಎಂಬ ಸಂಸಾರವನ್ನೇ ನಡೆಸಿದ ಸಹೋದರ ಲಕ್ಷ್ಮಣ !
- ಶ್ರೀರಾಮ ನವಮಿ (ಏಪ್ರಿಲ್ ೧೭)
- ಪ್ರಭು ಶ್ರೀರಾಮಚಂದ್ರನ ಅವತಾರಕ್ಕೆ ಸಂಬಂಧಿಸಿದ ಸ್ಥಳಗಳ ದರ್ಶನ !