Diwali 2023 : ನರಕ ಚತುರ್ದಶಿ

೧. ಈ ದಿನ (ನವೆಂಬರ್‌ ೧೨) ಆಕಾಶದಲ್ಲಿ ನಕ್ಷತ್ರ ಗಳಿರುವಾಗ ಬ್ರಾಹ್ಮೀ ಮುಹೂರ್ತದಲ್ಲಿ ಅಭ್ಯಂಗ ಸ್ನಾನವನ್ನು ಮಾಡುತ್ತಾರೆ. ಉತ್ತರಣೆಯ ಗೆಲ್ಲಿನಿಂದ ತಲೆಯಿಂದ ಕಾಲುಗಳ ವರೆಗೆ ಮತ್ತು ಪುನಃ ಕಾಲು ಗಳಿಂದ ತಲೆಯ ವರೆಗೆ ನೀರನ್ನು ಸಿಂಪಡಿಸಿ ಕೊಳ್ಳುತ್ತಾರೆ. ಇದಕ್ಕಾಗಿ ಬೇರಿರುವ ಉತ್ತರಣೆಯನ್ನು ಉಪಯೋಗಿಸುತ್ತಾರೆ.
೨. ಯಮತರ್ಪಣ : ಅಭ್ಯಂಗಸ್ನಾನದ ನಂತರ ಅಪಮೃತ್ಯುವಿನ ನಿವಾರಣೆಗಾಗಿ ಯಮತರ್ಪಣವನ್ನು ಮಾಡಬೇಕೆಂದು ಹೇಳಲಾಗಿದೆ. ವಿಧಿಯ ನಂತರ ತಾಯಿಯು ಮಕ್ಕಳಿಗೆ ಆರತಿ ಎತ್ತುತ್ತಾಳೆ. ನರಕಾಸುರನ ವಧೆಯ ಪ್ರತೀಕವೆಂದು ಕೆಲವರು (ಮಹಾಲಿಂಗದ ಬಳ್ಳಿಯ) ಹಿಂಡ್ಲಚ್ಚಿ ಕಾಯಿಯನ್ನು ಕಾಲಿನಿಂದ ಜಜ್ಜಿ ಕಾಲಿನಿಂದಲೇ ಬಿಸಾಡುತ್ತಾರೆ.
೩. ಬ್ರಾಹ್ಮಣರಿಗೆ ಭೋಜನ ನೀಡಿ ವಸ್ತ್ರದಾನ ಮಾಡುತ್ತಾರೆ.