Jaishankar Diplomacy : ಭಾರತ-ಕೆನಡಾ ವಿವಾದವನ್ನು ಬಗೆಹರಿಸಲು ರಾಜತಾಂತ್ರಿಕ ಮಾತುಕತೆಗೆ ಇನ್ನೂ ಅವಕಾಶವಿದೆ ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

ನವ ದೆಹಲಿ – ಭಾರತ ಮತ್ತು ಕೆನಡಾ ನಡುವಿನ ವಿವಾದವನ್ನು ಬಗೆಹರಿಸಲು ರಾಜತಾಂತ್ರಿಕ ಮಾತುಕತೆಗೆ ಇನ್ನೂ ಅವಕಾಶವಿದೆ. ಸಾರ್ವಭೌಮತ್ವ ಮತ್ತು ಸೂಕ್ಷ್ಮತೆಯು ಏಕಪಕ್ಷೀಯವಾಗಿದ್ದರೆ ನಡೆಯುವುದಿಲ್ಲ. ಎರಡೂ ದೇಶಗಳು ಪರಸ್ಪರ ಸಂಪರ್ಕದಲ್ಲಿದ್ದು ಸೂಕ್ತ ಪರಿಹಾರ ಕಂಡುಕೊಳ್ಳುವ ಭರವಸೆ ಇದೆ’, ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.

ಡಾ. ಜೈ ಶಂಕರ್ ಮುಂದೆ ಮಾತನಾಡುತ್ತಾ, ಕೆನಡಾದ ವಿದೇಶಾಂಗ ಸಚಿವರ ಪಾತ್ರವೂ ನನ್ನಂತೆಯೇ ಇದೆ ಎಂದು ನನಗೆ ಅನಿಸುತ್ತಿದೆ ಎಂದು ಹೇಳಿದರು. ‘ನನಗೆ ಅವರ ವಸ್ತುನಿಷ್ಠ ಕಾಳಜಿಗಳ ಬಗ್ಗೆ ಮಾತನಾಡಲು ಬಯಸುವುದಿಲ್ಲ’, ಎಂದು ನಾನು ಹೇಳಿಲ್ಲ; ಎಂದು ಸ್ಪಷ್ಟಪಡಿಸುತ್ತೇನೆ. ಆದರೆ ‘ನಮ್ಮ ಸಂಭಾಷಣೆಯು ನನ್ನ ಚಿಂತೆ ಮತ್ತು ಭಾವನೆಗಳನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ,’ ಇದು ಸಹ ಸಾಧ್ಯವಿಲ್ಲ ಎಂದರು.