
ವಿಜಯನಗರ – ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಹಂಪಿಯಲ್ಲಿ ವಿರೂಪಾಕ್ಷ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದರು. ಆ ಸಮಯದಲ್ಲಿ ಶ್ರೀ ಭುವನೇಶ್ವರಿ ದೇವಿಯ ಪೂಜೆ ಕೂಡ ನಡೆಸಿದರು. ನಂತರ ವಿದ್ಯಾರಣ್ಯ ಭಾರತೀ ಸರಸ್ವತಿ ಸ್ವಾಮೀಜಿ ಇವರು ಸಿದ್ದರಾಮಯ್ಯ ಇವರಿಗೆ ರುದ್ರಾಕ್ಷಿಯ ಮಾಲೆ ಹಾಕಿದರು. ಅದರ ನಂತರ ಪತ್ರಕರ್ತರ ಜೊತೆಗೆ ಮಾತನಾಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು, ಮೂಢನಂಬಿಕೆಯ ಮೇಲೆ ನನಗೆ ವಿಶ್ವಾಸವಿಲ್ಲ; ಆದರೆ ದೇವರ ಮೇಲೆ ನನಗೆ ವಿಶ್ವಾಸವಿದೆ. ಸಮಾಜಕ್ಕೆ ಒಳ್ಳೆಯದಾಗುವುದು, ಎಂದು ನನಗೆ ವಿಶ್ವಾಸವಿದೆ. ಕೆಟ್ಟದ್ದು ಆಗುವುದರ ಬಗ್ಗೆ ಇಲ್ಲ. ಪ್ರತಿಯೊಬ್ಬರಲ್ಲಿಯು ಹೀಗೆ ಶ್ರದ್ದೆ ಇರುತ್ತದೆ. ಸಮಾಜಕ್ಕಾಗಿ ಒಳ್ಳೆಯದು ಇದ್ದರೆ ಶ್ರದ್ಧೆ ಇಡೋಣ, ಕೆಟ್ಟದ್ದಾಗಿದ್ದರೆ ವಿಶ್ವಾಸ ಇಡುವುದು ಬೇಡ ಎಂದು ಹೇಳಿದರು.
ಸಂಪಾದಕೀಯ ನಿಲುವುಕೇವಲ ‘ದೇವರ ಮೇಲೆ ನಂಬಿಕೆ ಇದೆ’ ಎಂದು ಹೇಳಿ ಉಪಯೋಗವಿಲ್ಲದೇ ಅದು ಪ್ರತ್ಯಕ್ಷ ಕಾಣಿಸಬೇಕು. ದೇವರ ಮೇಲೆ ಶ್ರದ್ಧೆ ಇರುವ ಹಿಂದೂಗಳಿಗಾಗಿ ಕಾರ್ಯವನ್ನೂ ಮಾಡಬೇಕು, ಅವರ ಅಡಚಣೆ ಬಗೆಹರಿಸಬೇಕು ಮತ್ತು ದೇವರ ಮೇಲಿನ ಶ್ರದ್ಧೆ ಹೆಚ್ಚಾಗಲು ಸಮಾಜಕ್ಕೆ ಸಾಧನೆ ಕಲಿಸುವ ವ್ಯವಸ್ಥೆ ಮಾಡಬೇಕು, ಹೀಗೆ ಮಾಡಿದರೆ ತಥಾಕಥಿತ ಮೌಢ್ಯವೂ ದೂರವಾಗುವುದು – ಸಂಪಾದಕರು |
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!