ಧನತ್ರಯೋದಶಿ ನಿಮಿತ್ತ ಧರ್ಮಪ್ರಸಾರದ ಕಾರ್ಯಗಳಲ್ಲಿ ‘ಸತ್ಪಾತ್ರೆ ದಾನ’ ಮಾಡಿ ಶ್ರೀ ಲಕ್ಷ್ಮೀಯ ಕೃಪೆ ಸಂಪಾದಿಸಿ !

ಎಲ್ಲ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ !

೧. ಧನತ್ರಯೋದಶಿಯ ಮಹತ್ವ : ‘೧೦.೧೧.೨೦೨೩ ರಂದು ‘ಧನತ್ರಯೋದಶಿ’ ಇದೆ. ‘ಧನ’ ಅಂದರೆ ಶುದ್ಧ ಲಕ್ಷ್ಮೀ ! ಈ ದಿನ ಮನುಷ್ಯನ ಪೋಷಣೆಯು ಸುಗಮವಾಗಲು ಸಹಾಯ ಮಾಡುವ ಧನದ (ಸಂಪತ್ತುಗಳ) ಪೂಜೆ ಮಾಡಲಾಗುತ್ತದೆ. ವ್ಯಾಪಾರಿ ಜನರ ದೃಷ್ಟಿಯಿಂದ ಧನತ್ರಯೋದಶಿಯಂದು ಹೊಸವರ್ಷವು ಆರಂಭ ವಾಗುವುದರಿಂದ ಅವರು ಈ ದಿನ ಕೋಶಾಗಾರದ ಪೂಜೆಯನ್ನು ಮಾಡುತ್ತಾರೆ. ಸತ್ಕಾರ್ಯಕ್ಕೆ ಧನ ಅರ್ಪಣೆ ಮಾಡುವುದು, ಇದೇ ಲಕ್ಷ್ಮೀಯ ನಿಜವಾದ ಪೂಜೆಯಾಗಿದೆ. ಧರ್ಮಶಾಸ್ತ್ರಕ್ಕನುಸಾರ ‘ಮನುಷ್ಯನು ತಾನು ಗಳಿಸಿದ ೧/೬ ಪಾಲು ಸಂಪತ್ತನ್ನು ಈಶ್ವರನ ಕಾರ್ಯಕ್ಕಾಗಿ ವಿನಿಯೋಗಿಸಬೇಕು’, ಎಂದು ಹೇಳಲಾಗುತ್ತದೆ.

ಧನತ್ರಯೋದಶಿಯ ಶುಭಮುಹೂರ್ತದಲ್ಲಿ ಪ್ರಭು ಕಾರ್ಯಕ್ಕಾಗಿ, ಅಂದರೆ ಭಗವಂತನ ಧರ್ಮಸಂಸ್ಥಾಪನೆಯ ಕಾರ್ಯಕ್ಕಾಗಿ ಧನ ಅರ್ಪಣೆ ಮಾಡಬೇಕು. ಸತ್ಕಾರ್ಯಕ್ಕಾಗಿ ಧನದ ವಿನಿಯೋಗವಾಗುವುದರಿಂದ ಧನಲಕ್ಷ್ಮೀಯು ಲಕ್ಷ್ಮೀರೂಪದಿಂದ ಸದಾಕಾಲ ಜೊತೆಯಲ್ಲಿ ಇರುತ್ತಾಳೆ !

೨. ಸತ್ಕಾರ್ಯಕ್ಕಾಗಿ, ಅಂದರೆ ಧರ್ಮಪ್ರಸಾರದ ಕಾರ್ಯಕ್ಕಾಗಿ ಧನದ ಉಪಯೋಗವಾಗಬೇಕು, ಅದಕ್ಕಾಗಿ ‘ಸತ್ಪಾತ್ರೆ ದಾನ’ ಮಾಡಿ ! : ಸದ್ಯ ಧರ್ಮದ ಸ್ಥಿತಿ ಹದಗೆಟ್ಟಿದೆ. ಧರ್ಮಶಿಕ್ಷಣದ ಅಭಾವದಿಂದಾಗಿ ಹಿಂದೂಗಳಲ್ಲಿ ಧರ್ಮದ ಅಭಿಮಾನ ಇಲ್ಲವಾಗಿದೆ. ಆದುದರಿಂದ ಧರ್ಮದ ಪುನರ್‌ ಸ್ಥಾಪನೆಯ ಕಾರ್ಯ ಮಾಡುವುದು ಪ್ರಸ್ತುತ ಕಾಲದ ಪ್ರಭು ಕಾರ್ಯವಾಗಿದ್ದು ಅದಕ್ಕೆ ಆದ್ಯತೆ ನೀಡುವುದು ಆವಶ್ಯಕವಿದೆ. ಆದುದರಿಂದ ಧರ್ಮಪ್ರಸಾರ ಮಾಡುವ ಸಂತರು, ಹಾಗೆಯೇ ರಾಷ್ಟ್ರ ಮತ್ತು ಧರ್ಮ ಇವುಗಳ ರಕ್ಷಣೆಗಾಗಿ ಕಾರ್ಯ ಮಾಡುವ ಸಂಸ್ಥೆ ಅಥವಾ ಸಂಘಟನೆ ಇವುಗಳ ಕಾರ್ಯಕ್ಕಾಗಿ ದಾನ ಮಾಡುವುದು ಕಾಲಾನುಸಾರ ಎಲ್ಲಕ್ಕಿಂತ ಶ್ರೇಷ್ಠವಾದ ದಾನವಾಗಿದೆ. ಕಳೆದ ಅನೇಕ ವರ್ಷಗಳಿಂದ ಸನಾತನ ಸಂಸ್ಥೆಯು ಧರ್ಮಜಾಗೃತಿಯ ಕಾರ್ಯವನ್ನು ನಿರಪೇಕ್ಷವಾಗಿ ಮಾಡುತ್ತಿದೆ. ಆದ್ದರಿಂದ ಅರ್ಪಣೆದಾರರು ಸನಾತನ ಸಂಸ್ಥೆಗೆ ಮಾಡಿದ ದಾನವು (ಅರ್ಪಣೆಯ) ಧರ್ಮದ ಪುನರ್‌ಸ್ಥಾಪನೆಗಾಗಿಯೇ ಉಪಯೋಗವಾಗುತ್ತದೆ, ಎಂಬುದು ಖಚಿತವಾಗಿದೆ !

ಧನತ್ರಯೋದಶಿಯ ನಿಮಿತ್ತ ಧನವನ್ನು ದಾನ ಮಾಡಲು ಇಚ್ಛಿಸುವ ದಾನಿಗಳು ತಮ್ಮ ಮಾಹಿತಿಯನ್ನು ತಿಳಿಸಿರಿ.

ಸೌ. ಭಾಗ್ಯಶ್ರೀ ಸಾವಂತ – ೭೦೫೮೮೮೫೬೧೦

– ಶ್ರೀ. ವೀರೇಂದ್ರ ಮರಾಠೆ, ಆಡಳಿತಾತ್ಮಕ ವಿಶ್ವಸ್ಥರು, ಸನಾತನ ಸಂಸ್ಥೆ. (೧೪.೧೦.೨೦೨೩)