Kerala Salim Musliyar Rape : ಮಾಟ ಮಂತ್ರದ ನೆಪದಲ್ಲಿ ಸಲೀಂ ಮುಸಲಿಯಾರನಿಂದ ಅಸಹಾಯಕ ಮಹಿಳೆಯ ಮೇಲೆ ಬಲಾತ್ಕಾರ !

ಮಹಿಳೆ ಕೋಪವನ್ನು ನಿಯಂತ್ರಿಸಲು ಉಪಾಯ ಹುಡುಕುತ್ತಿದ್ದಳು !

ತಿರುವನಂತಪುರಂ (ಕೇರಳ) – ರಾಜ್ಯದಲ್ಲಿ ಮಾಟ ಮಂತ್ರದ ಹೆಸರಿನಲ್ಲಿ ಓರ್ವ ಅಸಹಾಯಕ ಮಹಿಳೆಯ ಮೇಲೆ ಬಲಾತ್ಕಾರ ಮಾಡಿರುವ ಘಟನೆ ಬಹಿರಂಗವಾಗಿದೆ. ಬಲಾತ್ಕಾರಿಸಲೀಂ ಮುಸಲಿಯಾರ ಎಂದು ಗುರುತಿಸಲಾಗಿದ್ದು, ಮಹಿಳೆಗೆ ತಾನು ಹೇಳಿದಂತೆ ಕೇಳಿದರೆ ಆಕೆಯ ಸಮಸ್ಯೆ ದೂರವಾಗುವುದು ಎಂದು ಹೇಳಿದ್ದಾನೆ. ಅದರ ನಂತರ ಅವನು ಅವಳನ್ನು ತನ್ನ ಮನೆಗೆ ಕರೆಸಿ ಅವಳ ಮೇಲೆ ಅತ್ಯಾಚಾರ ಮಾಡಿದನು. ಮಹಿಳೆಯು ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ಸಲೀಮನನ್ನು ಮನ್ನಾದಿ ಮುಸ್ಲಿಂ ಜಮಾತ್ ದ ಹತ್ತಿರ ಇರುವ ದಾರುಲ ಫಾತಿಯಾ ಪೆರೆಥ ಹೌಸ್ ನಿಂದ ಬಂಧಿಸಿದರು. ಈ ಘಟನೆ ರಾಜ್ಯದಲ್ಲಿನ ಅಲ್ಲಪ್ಪುಳಾ ಜಿಲ್ಲೆಯಲ್ಲಿರುವ ಕಾಯಮಕುಲಂ ಪ್ರದೇಶದಲ್ಲಿ ನಡೆದಿದೆ, ಸಲೀಂ ಮುಸಲಿಯಾರ ಇವನು, ‘ನಾನು ಮಾಟ ಮಂತ್ರ ಮತ್ತು ಮೃತ ಆತ್ಮದ ಮೂಲಕ ಜನರ ಸಮಸ್ಯೆಗಳನ್ನು ದೂರಗೊಳಿಸುತ್ತೇನೆ ಎಂದು ದಾವೇ ಮಾಡುತ್ತಿದ್ದನು. ಇದರಿಂದ ಸಂಬಂಧಿತ ಸಂತ್ರಸ್ತ ಮಹಿಳೆಗೆ ಆಕೆಯ ಓರ್ವ ಸಂಬಂಧಿಕರು ಅವನ ಬಳಿ ಕರೆದುಕೊಂಡು ಹೋಗಿದ್ದರು. ಅತಿಯಾದ ಸಿಟ್ಟಿನ ಮೇಲೆ ಆಕೆಗೆ ಉಪಾಯ ಬೇಕಿತ್ತು. ಅದರ ಬಗ್ಗೆ ಸಲಿಮನು ಆಕೆಗೆ, ಇದಕ್ಕಾಗಿ ಒಂದು ಅನುಷ್ಠಾನ ಮಾಡಬೇಕಾಗುತ್ತದೆ ಎಂದು ಹೇಳಿದ. ಆಕೆ ಸಲೀಮನ ಬಲೆಗೆ ಸಿಲುಕಿದಳು ಮತ್ತು ಅದರ ದುರುಪಯೋಗ ಪಡಿಸಿಕೊಂಡು ಅವನು ಆಕೆಯ ಮೇಲೆ ಬಲತ್ಕಾರ ಮಾಡಿದನು.

ಸಂಪಾದಕೀಯ ನಿಲುವು

ಈಗ ಈ ಘಟನೆಯಿಂದ ಯಾರಾದರೂ ಶರಿಯತ್ ಕಾನೂನಿನ ಪ್ರಕಾರ ಸಲೀಮನಿಗೆ ಕೈಕಾಲು ಕಟ್ಟಿ ಅಥವಾ ಭೂಮಿಯಲ್ಲಿ ಸೊಂಟದವರೆಗೆ ಹುಗಿದು ಕಲ್ಲಿನಿಂದ ಜಜ್ಜಿ ಕೊಲ್ಲುವ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರೆ ಯಾರೂ ಆಶ್ಚರ್ಯ ಪಡಬಾರದು !