ರೇಶನ ಹಗರಣದ ಪ್ರಕರಣದಲ್ಲಿ ಬಂಗಾಲದ ಅರಣ್ಯ ಸಚಿವರ ಬಂಧನ

ಕೋಲಕಾತ್ತಾ (ಬಂಗಾಲ) – ರೇಶನ ಹಗರಣದ ಪ್ರಕರಣಕ್ಕೆ ಸಂಬಂಧೀಸಿದಂತೆ ಈಡಿಯು ಬಂಗಾಲದ ಅರಣ್ಯ ಸಚಿವರಾದ ಜ್ಯೋತಿಪ್ರಿಯ ಮಲಿಕ ಇವರನ್ನು ಬೆಳಗ್ಗಿನ ಜಾವ 3:30ಗೆ ಅವರ ನಿವಾಸದಿಂದ ಬಂದಿಸಲಾಗಿದೆ. ಈ ಹಿಂದೆ ೨೦ ಗಂಟೆಗಳ ಕಾಲ ಈಡಿಯಿಂದ ಮಲಿಕ ಇವರ ವಿಚಾರಣೆ ನಡೆದಿತ್ತು. ಅರಣ್ಯ ಸಚಿವ ಸ್ಥಾನದ ಮೊದಲು ಮಲಿಕ್ ಇವರ ಬಳಿ ಆಹಾರ ಪೂರೈಕೆ ಸಚಿವಾಲಯದ ಜವಾಬ್ದಾರಿ ಇತ್ತು. ಮಲಿಕ್ ಇವರು ಉದ್ಯಮಿ ಬಕೀಬುರ್ ರೆಹಮಾನ್ ಇವರ ಜೊತೆ ಕೂಡ ಸಂಬಂಧ ಇತ್ತೆ ? ಇದರ ಬಗ್ಗೆ ಈಡಿ ತನಿಖೆ ಮಾಡುತ್ತಿದೆ. ರೆಹಮಾನ್ ಇವರನ್ನು ಇತ್ತೀಚಿಗೆ ಈ ಹಗರಣದ ಪ್ರಕರಣದಲ್ಲಿ ಬಂಧಿಸಲಾಗಿದೆ. ಬಂಧನದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ ಜ್ಯೋತಿ ಪ್ರಿಯ ಮಲಿಕ್ ಇವರು ಇದೊಂದು ದೊಡ್ಡ ಷಡ್ಯಂತ್ರವಾಗಿದೆ ಎಂದು ಆರೋಪಿಸಿದ್ದಾರೆ.

(ಸೌಜನ್ಯ – india Today)