ಪ್ರಮೋದ ಮುತಾಲಿಕ ಇವರಿಗೆ ಶಿವಮೊಗ್ಗ ನಗರದಲ್ಲಿ ೩೦ ದಿನಕ್ಕಾಗಿ ಪ್ರವೇಶ ನಿಷೇಧ !

ಶಿವಮೊಗ್ಗ – ನಗರದಲ್ಲಿ ಗಲಭೆ ಪಿಡಿತ ಪ್ರದೇಶವಾಗಿರುವ ರಾಗಿಗುಡ್ಡ ಇಲ್ಲಿ ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಇವರಿಗೆ ಭೇಟಿ ನೀಡಲು ನಿಷೇಧಿಸಲಾಗಿದೆ. ಮುಂದಿನ ೩೦ ದಿನಗಳ ಕಾಲ ಮುತಾಲಿಕ ಇವರು ಶಿವಮೊಗ್ಗ ನಗರಕ್ಕೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ. ಅಕ್ಟೊಬರ್ ೧೭ ರಂದು ರಾತ್ರಿ ಮುತಾಲಿಕ ಶಿವಮೊಗ್ಗಕ್ಕೆ ಹೋಗುವಾಗ ಅವರನ್ನು ತಡೆಯಲಾಯಿತು. ನಗರಕ್ಕೆ ಹೋಗಲು ನಿಷೇಧಿಸಿರುವ ಲಿಖಿತ ಪತ್ರ ಅವರಿಗೆ ಈ ಸಮಯದಲ್ಲಿ ನೀಡಲಾಯಿತು. ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಮುತಾಲಿಕ ಪ್ರಚೋದಿಸುವ ಭಾಷಣ ಮಾಡುವರು, ಈ ಅನುಮಾನದಿಂದ ಮುಂಜಾಗ್ರತೆ ಕ್ರಮವಾಗಿ ನಿಷೇದ ಹೇರಲಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ರಾಗಿಗುಡ್ದು ಇಲ್ಲಿ ೧೪೪ ಕಲಾಂ ಜಾರಿಗೊಳಿಸಲಾಗಿದೆ.

ಸಂಪಾದಕೀಯ ನಿಲುವು

ಪ್ರಮೋದ ಮುತಾಲಿಕ ಇವರಿಗೆ ಕಳೆದ ಅನೇಕ ವರ್ಷಗಳಿಂದ ಗೋವಾ ರಾಜ್ಯ ಪ್ರವೇಶಿಸಲು ನಿಷೇಧಿಸಲಾಗಿತ್ತು. ಹಿಂದುತ್ವನಿಷ್ಠರಿಗೆ ಹಿಂದುಗಳ ದೇಶದಲ್ಲಿಯೇ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಲು ಬಿಡುವುದಿಲ್ಲ, ಇದು ಪ್ರಭಾವಿ ಹಿಂದೂ ಸಂಘಟನೆಯ ಅಭಾವದ ಕೊರತೆ ಆಗಿದೆ !