ಡೆಹ್ರಾಡೂನ್ (ಉತ್ತರಾಖಂಡ): ಮುಸ್ಲಿಮ್ ಗುಂಪಿನಿಂದ ಬಿಜೆಪಿ ನಾಯಕನ ಹತ್ಯೆ!

  • ನೀರಿನ ವಿವಾದದ ಹಿನ್ನೆಲೆಯಲ್ಲಿ ಹತ್ಯೆ

  • ಹಿಂದುತ್ವನಿಷ್ಠ ಕಾರ್ಯಕರ್ತರಿಂದ ಮುಸ್ಲಿಮರ ಮನೆಗಳ ಮೇಲೆ ಕಲ್ಲು ತೂರಾಟ

  • ಆರೋಪಿ ಮುಸ್ಲಿಮರ ಅಕ್ರಮ ಮನೆಗಳನ್ನು ಧ್ವಂಸ ಮಾಡಿದ ಸರ್ಕಾರ, 12 ಜನರ ವಿರುದ್ಧ ಪ್ರಕರಣ ದಾಖಲು

ಡೆಹ್ರಾಡೂನ್ (ಉತ್ತರಾಖಂಡ) – ಇಲ್ಲಿನ ಸಹಸ್ಪುರ ಭಾಗದ ಬೈರಾಗಿವಾಲಾದಲ್ಲಿ ಬಿಜೆಪಿ ಯುವ ನಾಯಕ ವಿನೋದ್ ಕುಮಾರ್ ಅವರನ್ನು ಮುಸ್ಲಿಮರ ಗುಂಪೊಂದು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದೆ. ಜೂನ್ 13 ರ ಸಂಜೆ ನಡೆದ ಈ ಘಟನೆಯ ನಂತರ, ಹಿಂದುತ್ವನಿಷ್ಠ ಕಾರ್ಯಕರ್ತರು ತೀವ್ರವಾಗಿ ಖಂಡಿಸಿ ಮುಸ್ಲಿಮರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 12 ಮುಸ್ಲಿಮರ ಹೆಸರಿನಲ್ಲಿ ಪ್ರಕರಣ ದಾಖಲಿಸಿದ್ದಾರೆ, ಹಾಗೂ ಆರೋಪಿ ಮುಸ್ಲಿಮರ ಅಕ್ರಮ ಮನೆಗಳನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ವಿನೋದ್ ಕುಮಾರ್ ಅವರು ಬಿಜೆಪಿಯ ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೋರ್ಚಾದ ಜಿಲ್ಲಾ ಸಾಮಾಜಿಕ ಮಾಧ್ಯಮ ಸಂಯೋಜಕರಾಗಿದ್ದರು.

1. ನೆರೆಹೊರೆಯಲ್ಲಿ ವಾಸಿಸುವ ಇಮ್ತಿಯಾಜ್ ಮತ್ತು ವಿನೋದ್ ಕುಮಾರ್ ಹಾಗೂ ಅವರ ಕುಟುಂಬದವರ ನಡುವೆ ನೀರಿಗೆ ಸಂಬಂಧಿಸಿ ಹಳೆಯ ವಿವಾದವಿತ್ತು. ಜೂನ್ 13 ರಂದು ನೀರು ಬಿಡುವ ಬಗ್ಗೆ ಮತ್ತೆ ಜಗಳ ನಡೆಯಿತು. ಇದಾದ ಕೂಡಲೇ ಸಶಸ್ತ್ರ ಮುಸ್ಲಿಮರ ಗುಂಪು ವಿನೋದ್ ಕುಮಾರ್ ಅವರ ಮನೆಯ ಮೇಲೆ ದಾಳಿ ಮಾಡಿತು.

2. ಈ ದಾಳಿಯಲ್ಲಿ ವಿನೋದ್ ಅವರನ್ನು ಹತ್ಯೆ ಮಾಡಲಾಯಿತು. ಅಲ್ಲದೇ ಅವರ ಸಹೋದರರಾದ ಅಶೋಕ್, ರಾಜೇಶ್ ಮತ್ತು ಅತ್ತಿಗೆ ಸುಷ್ಮಾ ಅವರು ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

3. ವಿನೋದ್ ಅವರ ಗಾಯಾಳು ಸಹೋದರ ಅಶೋಕ್ ತಮ್ಮ ಪೊಲೀಸ್ ದೂರಿನಲ್ಲಿ, “ನೆರೆಯ ಹೊಲದ ನೀರಿನ ವಿಷಯವಾಗಿ ಈ ಹಿಂದೆ ವಿವಾದ ನಡೆದಿತ್ತು. ಈ ಹೊಲ ಇಮ್ತಿಯಾಜ್‌ಗೆ ಸೇರಿದ್ದಾಗಿದೆ. ಜೂನ್ 13 ರ ಸಂಜೆ 6 ಗಂಟೆಗೆ ರಜ್ಜಾಕ್, ಇಮ್ತಿಯಾಜ್, ಅಮನ್, ಯೂನುಸ್, ಶಾಹಬಾಜ್, ಶರಾಫತ್ ಅಲಿ, ಮಾಸೂಮ್, ಆದಿಲ್, ಶಾಮೂನ್, ಸಲ್ಮಾನ್, ಜಾವೇದ್, ಇಂತೆಜಾರ್ ಮತ್ತು ಬೈರಾಗಿವಾಲಾದ ಸುಮಾರು 35-40 ಇತರ ನಿವಾಸಿಗಳು ಲಾಠಿ, ಮರದ ಹಲಗೆ, ಸುತ್ತಿಗೆ ಮತ್ತು ಹಾರೆಗಳನ್ನು ಹಿಡಿದುಕೊಂಡು ನಮ್ಮ ಮನೆಗೆ ನುಗ್ಗಿದರು ಮತ್ತು ನಮ್ಮ ಕುಟುಂಬದವರ ಮೇಲೆ ದಾಳಿ ಮಾಡಿದರು. ವಿನೋದ್ ಅವರನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಲಾಯಿತು” ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

  • ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದರೂ, ಅಲ್ಲಿನ ಮತಾಂಧ ಮುಸ್ಲಿಮರು ಆಡಳಿತ ಪಕ್ಷದ ನಾಯಕರನ್ನೇ ಹತ್ಯೆ ಮಾಡುತ್ತಾರೆಂದರೆ ಅವರಿಗೆ ಸರಕಾರದ ಬಗ್ಗೆ ಯಾವುದೇ ಭಯ ಉಳಿದಿಲ್ಲ ಎಂದರ್ಥ. ಇಂತವರನ್ನು ಮಟ್ಟ ಹಾಕುವುದು ಅಗತ್ಯವಾಗಿದೆ!
  • ನೀರಿಗಾಗಿ ನಡೆದ ಸಣ್ಣ ಜಗಳದ ಕಾರಣಕ್ಕೆ ಮುಸ್ಲಿಮರ ಗುಂಪು ಆಯುಧಗಳೊಂದಿಗೆ ದಾಳಿ ಮಾಡುತ್ತದೆ ಎಂದರೆ, ಈ ದಾಳಿಯು ಮೊದಲೇ ಯೋಜಿತವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಇಂತವರನ್ನು ಎದುರಿಸಲು ಹಿಂದೂಗಳು ಇನ್ನೂ ತಯಾರಾಗಿಲ್ಲ ಎಂಬುದೇ ಇಂತಹ ಘಟನೆಗಳು ತೋರಿಸುತ್ತವೆ. ಬಹುಸಂಖ್ಯಾತ ಹಿಂದೂಗಳಿಗೆ ಇದು ನಾಚಿಕೆಗೇಡಿನ ಸಂಗತಿ!