ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿನಿತ ಜಿಂದಾಲ್ ಇವರಿಗೆ ಈ ಹಿಜಬುಲ್ ಮುಜಾಹಿದೀನನಿಂದ ಜೀವ ಬೆದರಿಕೆ !

ಪಾಕಿಸ್ತಾನಿ ಕ್ರಿಕೆಟ್ ಆಟಗಾರ ಮಹಮ್ಮದ್ ರಿಜ್ವಾನ್ ನ (Mohammad Rizwan) ವಿರುದ್ಧ ದೂರು ದಾಖಲಿಸಿರುವ ಪ್ರಕರಣ

ನವದೆಹಲಿ – ಭಾಗ್ಯನಗರದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ಇವರಲ್ಲಿ ನಡೆದಿರುವ ಆಟದ ಸಮಯದಲ್ಲಿ ಆಟಗಾರ ಮಹಮ್ಮದ್ ರಿಜ್ವಾನ್ ಇವನು ಮೈದಾನದಲ್ಲಿ ನಮಾಜ ಮಾಡಿದ್ದನು. ಈ ಕೃತ್ಯದ ವಿರುದ್ಧ ಇಲ್ಲಿಯ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿನೀತ ಜಿಂದಾಲ Vineet Jindal ಇವರು ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ಅವರಿಗೆ ಹಿಜುಬುಲ್ ಮುಜಾಹಿದಿನ್ ಈ ಜಿಹಾದಿ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕನ ಮೊಬೈಲ್ ಮೂಲಕ ಜೀವ ಬೆದರಿಕೆ ಹಾಕಿದೆ. ನ್ಯಾಯವಾದಿ ಜಿಂದಾಲ್ ಇವರು ‘ಸನಾತನ ಪ್ರಭಾತ’ಗೆ ನೀಡಿರುವ ಮಾಹಿತಿಯ ಪ್ರಕಾರ ಅವರು ಇದರ ವಿರುದ್ಧ ದೆಹಲಿಯಲ್ಲಿ ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ, ಇದರ ಮಾಹಿತಿ ಅವರೇ ಎಕ್ಸ್ ಮೂಲಕ ಪ್ರಸಾರ ಮಾಡಿದ್ದಾರೆ.

ಸಂಪಾದಕೀಯ ನಿಲುವು

ಸರ್ವೋಚ್ಚ ನ್ಯಾಯಾಲಯದ ಓರ್ವ ಹಿಂದೂ ನ್ಯಾಯವಾದಿ ಇಷ್ಟೊಂದು ಅಸುರಕ್ಷಿತವಾಗಿದ್ದರೆ, ಹಿಂದೂ ಬಹುಸಂಖ್ಯಾತ ಇರುವ ಭಾರತದಲ್ಲಿನ ಸಾಮಾನ್ಯ ಹಿಂದುಗಳ ಕಥೆ ಏನು !