Hindu Rashtra : ಹಿಂದೂರಾಷ್ಟ್ರ ನಿರ್ಮಾಣವಾದ ಬಳಿಕ ರಾಷ್ಟ್ರದ್ರೋಹಿಗಳನ್ನು ಪಂಜರದಲ್ಲಿ ಬಂಧಿಸಿ ಪಾಕಿಸ್ತಾನಕ್ಕೆ ಕಳಿಸುತ್ತೇವೆ !

ತೇಲಂಗಾಣದ ಹಿಂದುತ್ವನಿಷ್ಠ ಟಿ. ರಾಜಾಸಿಂಹ T. Raja Singh ಇವರ ಹೇಳಿಕೆ

ಟಿ.ರಾಜಾ ಸಿಂಹ

ನಗರ – ಹಿಂದೂ ರಾಷ್ಟ್ರ ನಿರ್ಮಾಣವಾಗಲಿ. ತದನಂತರ ನಾವು ಇಂತಹವರನ್ನು (ಪಾಲೆಸ್ಟೈನ್ ಬೆಂಬಲಿಸುವವರನ್ನು) ಪಂಜರದಲ್ಲಿ ಬಂಧಿಸಿ ಪಾಕಿಸ್ತಾನಕ್ಕೆ ಕಳುಹಿಸುತ್ತೇವೆ ಎಂದು ತೇಲಂಗಾಣದ ಭಾಜಪದಿಂದ ಅಮಾನತ್ತುಗೊಂಡಿರುವ ಶಾಸಕ ಟಿ. ರಾಜಾಸಿಂಹ ಇವರು ಹೇಳಿದರು. ನಗರದಲ್ಲಿ ಒಂದು ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಇಸ್ರೈಲ್- ಹಮಾಸ ಯುದ್ಧದಲ್ಲಿ ಪಾಲೆಸ್ಟೈನ ಬೆಂಬಲಿಸುವಾಗ ಎಂ.ಐ.ಎಂ. ಪಕ್ಷದ ಶಾಸಕ ಅಸದುದ್ದೀನ ಓವೈಸಿ ಇವರು ಅಲ್ಲಿಯ ಹಿಂಸಾಚಾರಕ್ಕೆ ಇಸ್ರೈಲನ್ನು ಹೊಣೆಗಾರರನ್ನಾಗಿ ಮಾಡಿತ್ತು. ಇದಕ್ಕೆ ಪ್ರತ್ಯುತ್ತರವನ್ನು ನೀಡುವಾಗ ರಾಜಾಸಿಂಹ ಅವರು ಭಾರತ ಮತ್ತು ಇಸ್ರೈಲ ಬಾವುಟವನ್ನು ಹಾರಿಸುತ್ತಾ ಇಸ್ರೈಲನ್ನು ಬೆಂಬಲಿಸಿದರು.

ಅವರು ತಮ್ಮ ಮಾತನ್ನು ಮುಂದುವರಿಸಿ, `ನನಗೆ ಜೈಲಿಗೆ ಹೋಗಲು ಭಯವಿಲ್ಲ. ಇಲ್ಲಿಯವರೆಗೆ ನಾನು ಸುಮ್ಮನಿದ್ದೆ; ಕಾರಣ ನಾವು ಶಾಸಕನಾಗಿದ್ದೆನು. ನಾನು ಸೋತರೆ ನಾನು ಲವ್ ಜಿಹಾದಿಗಳ ಮೇಲೆ ಬಹಿರಂಗವಾಗಿ ಆಕ್ರಮಣ ಮಾಡುತ್ತೇನೆ’. ಎಂದು ಹೇಳಿದರು.