ಮುಖ್ಯಮಂತ್ರಿ ಪುಷ್ಕರ ಸಿಂಹ ದಾಮಿ ಇವರಿಂದ ಉತ್ತರಖಂಡದಲ್ಲಿನ ಮದರಸಾಗಳ ಪರಿಶೀಲನೆಗೆ ಆದೇಶ

ನೈನಿತಾಲ (ಉತ್ತರಾಖಂಡ) – ಉತ್ತರಖಂಡದ ಮುಖ್ಯಮಂತ್ರಿ ಪುಷ್ಕರ ಸಿಂಹ ಧಾಮಿ ಇವರು ನೈನಿತಾಲ ಜಿಲ್ಲೆಯಲ್ಲಿನ ವೀರಭಟ್ಟಿ ಇಲ್ಲಿಯ ಒಂದು ಕಾನೂನ ಬಾಹಿರ ಮಸೀದಿಯಲ್ಲಿ ಓರ್ವ ಹುಡುಗನ ಮೇಲೆ ನಡೆದಿರುವ ದೌರ್ಜನ್ಯದ ಘಟನೆಯ ಬಗ್ಗೆ ಗಮನಹರಿಸುತ್ತಾ ರಾಜ್ಯದಲ್ಲಿನ ಎಲ್ಲಾ ಮದರಸಗಳ ಪರಿಶೀಲನೆ ನಡೆಸಿ ಅನೈತಿಕ ಕಾರ್ಯ ನಡೆಯುತ್ತಿದ್ದರೆ ಮದರಸಾಗಳ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದೆ. ಇದರ ನಂತರ ಗೃಹ ಇಲಾಖೆಯಿಂದ ಪ್ರತಿಯೊಂದು ಜಿಲ್ಲಾಧಿಕಾರಿಗಳಿಗೆ ಅದಕ್ಕನುಸಾರ ಕೃತಿ ಮಾಡುವ ಆದೇಶ ನೀಡಲಾಗಿದೆ.

ಸಂಪಾದಕೀಯ ನಿಲುವು

ಪ್ರತಿಯೊಂದು ರಾಜ್ಯಗಳಿಗೆ ಈ ರೀತಿಯ ಸ್ವತಂತ್ರವಾಗಿ ಆದೇಶ ನೀಡುವ ಬದಲು ಕೇಂದ್ರ ಸರಕಾರದಿಂದ ಸಂಪೂರ್ಣ ದೇಶಕ್ಕಾಗಿ ಈ ರೀತಿಯ ಆದೇಶ ನೀಡಿ ಪರಿಶೀಲನೆ ನಡೆಸಬೇಕು !