ಯಾರನ್ನು ಆರ್ಯರೆಂದು ಉಲ್ಲೇಖಿಸಬೇಕು ?

ವಾಸನೆಯ ಅಧೀನರಾಗದ ಮತ್ತು ಶಾಸ್ತ್ರಗಳು ಅಯೋಗ್ಯವೆಂದು ಹೇಳಿದ ಕರ್ಮಗಳನ್ನು ಮಾಡದ, ಪ್ರಕೃತಿಯ ಮತ್ತು ಶಾಸ್ತ್ರಗಳ ನಿಯಮಗಳಂತೆ ಯೋಗ್ಯ ಕರ್ತವ್ಯಗಳನ್ನು ಪಾಲಿಸುವ ಮನುಷ್ಯನಿಗೆ ‘ಆರ್ಯ ಎಂದು ಕರೆಯುತ್ತಾರೆ.

೧೦೩ ರ ಇಳಿ ವಯಸ್ಸಿನಲ್ಲಿ ಕೊರೋನಾವನ್ನು ಗೆದ್ದ ಮಹಾರಾಷ್ಟ್ರ ಡೊಂಬಿವಿಲಿಯ ಸನಾತನದ ಸಂತರಾದ ಪೂ. ಆನಂದಿ ಪಾಟೀಲ ಅಜ್ಜಿ ಸೂಕ್ಷ್ಮದಿಂದ ನಿರಂತರ ಪರಾತ್ಪರ ಗುರು ಡಾ. ಆಠವಲೆಯವರ ಅಸ್ತಿತ್ವವನ್ನು ಅನುಭವಿಸುತ್ತಿದೆ ! –  ಪೂ. ಪಾಟೀಲ ಅಜ್ಜಿ

ಮುಖ್ಯಮಂತ್ರಿ ಕಾರ್ಯಾಲಯದಿಂದ ‘ಫೇಸಬುಕ್ ಖಾತೆಯಲ್ಲಿ ಈ ವಿಷಯದಲ್ಲಿ ಪ್ರಕಟಿಸಲಾಗಿರುವ ಸುದ್ದಿಯಲ್ಲಿ ಅನೇಕ ಜನರು ಪೂ. ಆನಂದಿ ಪಾಟೀಲ ಅಜ್ಜಿಯವರನ್ನು ‘ಕೊರೋನಾ ಯೋಧೆ ಎಂದು ಉಲ್ಲೇಖಿಸಿ ಅವರಿಂದ ಪ್ರೇರಣೆ ದೊರಕಿದೆಯೆಂದು ಹೇಳಿದರು ಮತ್ತು ಅವರಿಗೆ ಅಭಿನಂದನೆಯನ್ನು ಕೂಡ ವ್ಯಕ್ತಪಡಿಸಿದರು.

ಎಲ್ಲ ಅರ್ಪಣೆದಾರರಿಗೆ ಅನ್ನದಾನ ಮಾಡುವ ಅಮೂಲ್ಯ ಅವಕಾಶ !

ಸದ್ಯ ಧರ್ಮಗ್ಲಾನಿಯ ಕಾಲವಾಗಿರುವುದರಿಂದ ‘ಧರ್ಮಪ್ರಸಾರ ಮಾಡುವುದು ಕಾಲಾನುಸಾರ ಆವಶ್ಯಕವಾಗಿದೆ. ಧರ್ಮಪ್ರಸಾರವನ್ನು ಮಾಡುವ ಸಂತರು, ಸಂಸ್ಥೆಗಳು ಮತ್ತು ಸಂಘಟನೆಗಳಿಗೆ ಅನ್ನದಾನ ಮಾಡುವುದು ಸರ್ವಶ್ರೇಷ್ಠ ದಾನವಾಗುತ್ತದೆ. ಸನಾತನ ಸಂಸ್ಥೆಯು ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಗಾಗಿ ಕಟಿಬದ್ಧವಾಗಿದೆ. ಸನಾತನ ಸಂಸ್ಥೆಯ ಆಶ್ರಮ ಮತ್ತು ಸೇವಾಕೇಂದ್ರಗಳಲ್ಲಿ ಧರ್ಮಪ್ರಸಾರದ ಕಾರ್ಯವನ್ನು ಮಾಡಲಾಗುತ್ತದೆ.

ಪಿತೃಗಳ ಶಾಂತಿಗಾಗಿ ವಿವಿಧ ದೇಶಗಳಲ್ಲಿ ಮಾಡಲಾಗುವ ಪಾರಂಪರಿಕ ಕೃತಿಗಳು ! – ಶ್ರೀ ರಮೇಶ ಶಿಂದೆ

ಕೇವಲ ಭಾರತದಲ್ಲಿ ಮಾತ್ರ ಪೂರ್ವಜರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಸಂಕಲ್ಪನೆ ಇದೆ ಎಂದೇನಿಲ್ಲ, ವಿದೇಶಗಳಲ್ಲಿಯೂ ಪಿತೃಗಳ ಶಾಂತಿಗಾಗಿ ವಿವಿಧ ಪಾರಂಪರಿಕ ಕೃತಿಗಳನ್ನು ಮಾಡಲಾಗುತ್ತದೆ. ಅದರಲ್ಲಿ ಪೂರ್ವಜರ ಮುಕ್ತಿಗಾಗಿ ಶಾಸ್ತ್ರೋಕ್ತ ಸಂಕಲ್ಪನೆ ಇಲ್ಲದಿದ್ದರೂ, ಕನಿಷ್ಟ ‘ಪೂರ್ವಜರ ಬಗ್ಗೆ ಕೃತಜ್ಞತೆಯಿರಬೇಕು, ಎನ್ನುವ ಭಾವನೆಯಂತೂ ಖಂಡಿತವಾಗಿ ಇದೆ.

ಪೂ. ರಮಾನಂದಣ್ಣ ಇವರು ಮೋಕ್ಷಗುರು ಗುರುದೇವರ ಬಗ್ಗೆ ವ್ಯಕ್ತಪಡಿಸಿದ ಭಾವಪೂರ್ಣ ಕೃತಜ್ಞತೆ !

ನೀವು ಮಾಡಿದ ಕೃಪೆಗಾಗಿ ನಾನು ಇನ್ನೆಷ್ಟೋ ಜನ್ಮ ತೆಗೆದುಕೊಂಡು ಬಂದರೂ, ನಿಮ್ಮ ಋಣದಿಂದ ಮುಕ್ತನಾಗಲು ಸಾಧ್ಯವಿಲ್ಲ. ಈ ಕಲಿಯುಗದ ಘೋರ ಅಂಧಕಾರದ ಸುಳಿವಿನಲ್ಲಿ ಈ ಜೀವ ಸಿಲುಕಿ ಹಾಕಿಕೊಂಡಿತು. ಅಜ್ಞಾನದ ತುತ್ತ ತುದಿಯಲ್ಲಿ ಇದ್ದಂತಹ ಈ ಪಾಪಿ ಜೀವವನ್ನು, ಅನಂತ ಅಪರಾಧಗಳನ್ನು ಮಾಡಿದ ನನ್ನನ್ನು ಇದೆಲ್ಲದರಿಂದ ಹೊರತೆಗೆದು, ಅಷ್ಟು ಮಾತ್ರವಲ್ಲ ಅವೆಲ್ಲವನ್ನು ಕ್ಷಮಿಸಿ, ಜನ್ಮ-ಮೃತ್ಯು ಚಕ್ರದಿಂದ ಕೇವಲ ನೀವೇ ಪಾರು ಮಾಡಿದ್ದೀರಿ.

ಅಧಿಕ ಮಾಸದಲ್ಲಿನ ಶುಭ-ಅಶುಭ ದಿನಗಳು ಮತ್ತು ಆ ದಿನಗಳ ಆಧ್ಯಾತ್ಮಿಕ ಮಹತ್ವ

ಪ್ರತಿಯೊಂದು ಮಾಸದ ಅಮಾವಾಸ್ಯೆಯ ನಂತರ ಬರುವ ಶುಕ್ಲ ಪಕ್ಷದಲ್ಲಿನ ಅಷ್ಟಮಿ ತಿಥಿಗೆ ‘ದುರ್ಗಾಷ್ಟಮಿ’ ಎನ್ನುತ್ತಾರೆ. ಈ ದಿನ ಶ್ರೀ ದುರ್ಗಾದೇವಿಯ ವ್ರತವನ್ನು ಮಾಡುತ್ತಾರೆ. ಅಸುರ ಶಕ್ತಿಗಳ ನಾಶವಾಗಿ ಭಯಮುಕ್ತವಾಗಲು ಈ ವ್ರತವನ್ನು ಮಾಡುತ್ತಾರೆ. ಈ ದಿನ ದುರ್ಗಾಸಪ್ತಶತಿ ಸ್ತೋತ್ರ, ಕವಚ, ಅರ್ಗಲಾ ಸ್ತೋತ್ರ ಮುಂತಾದ ದೇವಿ ಸ್ತೋತ್ರಗಳನ್ನು ಪಠಿಸುತ್ತಾರೆ.

ಆಧ್ಯಾತ್ಮಿಕ ತೊಂದರೆ ಕಡಿಮೆಯಾಗದಿರುವುದರ ಹಿಂದಿರುವ ಕಾರಣಗಳ ಚಿಂತನೆಯನ್ನು ಮಾಡಿರಿ !

ಆಧ್ಯಾತ್ಮಿಕ ತೊಂದರೆಯಿರುವ ಬಹಳಷ್ಟು ಸಾಧಕರು ‘ತೊಂದರೆ ಇದೆ; ಎಂದು ಕೇವಲ ಉಪಾಯವನ್ನು ಮಾಡುವುದಕ್ಕೆ ಮಾತ್ರ ಹೆಚ್ಚು ಒತ್ತು ಕೊಡುತ್ತಾರೆ; ಆದರೆ ‘ಉಪಾಯವು ಗುಣಾತ್ಮಕವಾಗಿ ಆಗುತ್ತಿದೆಯೇ ? ತೊಂದರೆ ಹೆಚ್ಚಾಗಲು ಕಾರಣವಾಗಿರುವ ಹಿಂದಿರುವ ಸ್ವಭಾವದೋಷವನ್ನು ದೂರಗೊಳಿಸಲು ತಳಮಳದಿಂದ ಪ್ರಯತ್ನಗಳಾಗುತ್ತಿವೆಯೇ ? ಇತ್ಯಾದಿ ವಿಷಯಗಳ ವಿಚಾರವನ್ನು ಹೆಚ್ಚು ಮಾಡುವುದಿಲ್ಲ ಇದರಿಂದ ಅವರ ತೊಂದರೆ ಬೇಗ ಕಡಿಮೆಯಾಗುವುದಿಲ್ಲ.

ಸಾಧಕರೇ, ‘ಇತರರ ಬಗ್ಗೆ ಮತ್ಸರವೆನಿಸುವುದು’, ಸಾಧನೆಯಲ್ಲಿ ಎಲ್ಲಕ್ಕಿಂತ ದೊಡ್ಡ ಅಡಚಣೆ ಆಗಿರುವುದರಿಂದ ಅದನ್ನು ದೂರಗೊಳಿಸಿರಿ !

‘ಕೆಲವು ಸಾಧಕರಿಗೆ ಸಹ ಸಾಧಕರನ್ನು ಹೊಗಳಿದರೆ ಅಥವಾ ಅವರ ಆಧ್ಯಾತ್ಮಿಕ ಉನ್ನತಿಯಾದರೆ ಮತ್ಸರವೆನಿಸುತ್ತದೆ. ‘ಇತರರ ಬಗ್ಗೆ ಮತ್ಸರವೆನಿಸುವುದು’, ಸಾಧನೆಯ ಅತ್ಯಂತ ದೊಡ್ಡ ಅಡಚಣೆಯಾಗಿದೆ. ಅದನ್ನು ದೂರಗೊಳಿಸಲು ತಳಮಳದಿಂದ ಪ್ರಯತ್ನಿಸಬೇಕು. ‘ಇತರ ಸಾಧಕರ ಪ್ರಶಂಸೆಯ ಅಥವಾ ಆಧ್ಯಾತ್ಮಿಕ ಪ್ರಗತಿಯ ಆನಂದವನ್ನು ಪಡೆಯಲು ಸಾಧ್ಯವಾದಾಗ ಅಥವಾ ಇತರರ ಪ್ರಯತ್ನ ಮತ್ತು ಗುಣಗಳಿಂದ ಕಲಿಯುವಂತಹ ಸಾಧಕರ ಸಾಧನೆಯ ಮಾರ್ಗಕ್ರಮಣವು ಯೋಗ್ಯ ದಿಶೆಯಿಂದ ಆಗುತ್ತಿದೆ’, ಎಂಬುದನ್ನು ಗಮನದಲ್ಲಿಡಬೇಕು !’

ಸೇವೆಯ ಮಧ್ಯದಲ್ಲಿ ಸ್ವಲ್ಪ ವಿಶ್ರಾಂತಿಯ ಅವಶ್ಯಕತೆಯಿದ್ದಾಗ ಸಾತ್ತ್ವಿಕ ಕೃತಿಗಳನ್ನು ಮಾಡಬೇಕು !

ಸಾಧಕರು ಸೇವೆಯಲ್ಲಿ ವಿಶ್ರಾಂತಿ ಸಿಗಲೆಂದು ಸಹಸಾಧಕರೊಂದಿಗೆ ಹರಟೆ ಹೊಡೆಯುವುದು, ಚೇಷ್ಟೆ-ತಮಾಷೆ ಮಾಡುವುದು ಹಾಗೂ ಸಂಚಾರವಾಣಿಯಲ್ಲಿ ಅನಾವಶ್ಯಕ ಮಾತನಾಡುವುದು, ಮನೋರಂಜನಾತ್ಮಕ ಕಾರ್ಯಕ್ರಮಗಳನ್ನು ನೋಡುವುದು ಇಂತಹ ಅಸಾತ್ತ್ವಿಕ ಕೃತಿಗಳನ್ನು ಮಾಡುತ್ತಾರೆ.

ಅಶಾಂತಿ ಮತ್ತು ವಿನಾಶದತ್ತ ಸಾಗುತ್ತಿರುವ ಪಾಶ್ಚಾತ್ಯ ರಾಷ್ಟ್ರಗಳು !

‘ಪಾಶ್ಚಾತ್ಯ ರಾಷ್ಟ್ರಗಳಲ್ಲಿನ ಜನರ ಪರಿಸ್ಥಿತಿ ತುಂಬಾ ಕರುಣಾಜನಕವಾಗಿದೆ. ಆ ಜನರು ಯಾವಾಗಲೂ ‘ಫ್ಯಾಶನ್ ಬದಲಾಯಿಸುತ್ತಾರೆ, ‘ಬಟ್ಟೆ, ಫರ್ನಿಚರ್, ಮನೆ, ಕಾರುಗಳನ್ನು ಬದಲಾಯಿಸುತ್ತಾರೆ, ಅಷ್ಟೇ ಅಲ್ಲದೇ ಪತ್ನಿಯನ್ನೂ ಬದಲಾಯಿಸುತ್ತಾರೆ ! ‘ಕೆಲವಡೆಗಳಲ್ಲಿಯಂತೂ ಜನರು ತಮ್ಮ ತಮ್ಮ ಪತ್ನಿಯನ್ನು ಕರೆದೊಯ್ಯುತ್ತಾರೆ, ಎಲ್ಲ ಜನರು ನೃತ್ಯ ಮಾಡುತ್ತಾರೆ, ಕುಡಿಯುತ್ತಾರೆ ಮತ್ತು ತಮ್ಮ ಪತ್ನಿಯರನ್ನು ಆನಂದಿಸಲು ಬಿಡುತ್ತಾರೆ.