
ಅಂಡಮಾನ್ – ಸರಕಾರದ ಸ್ವಾಮ್ಯದ ‘ಆಯಿಲ್ ಇಂಡಿಯಾ ಲಿಮಿಟೆಡ್’ ಈ ಸಂಸ್ಥೆಗೆ ಅಂಡಮಾನ್ ದ್ವೀಪಗಳ ಪೂರ್ವ ಕರಾವಳಿಯಿಂದ ಅಂದಾಜು ೧೫ ಕಿ.ಮೀ. ದೂರದಲ್ಲಿ ಮತ್ತು ೩೫೫ ಮೀಟರ್ ನೀರಿನ ಆಳದಲ್ಲಿರುವ ‘ಶ್ರೀ ವಿಜಯಪುರಂ-೩’ ಎಂಬ ಅನ್ವೇಷಣಾ ಬಾವಿಯಲ್ಲಿ ನೈಸರ್ಗಿಕ ಅನಿಲದ ನಿಕ್ಷೇಪ ಪತ್ತೆಯಾಗಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಈ ಘಟನೆಯನ್ನು ‘ಇಂಧನ ಅವಕಾಶಗಳ ಮಹಾಸಾಗರ’ ಎಂದು ಬಣ್ಣಿಸಿದ್ದಾರೆ. ‘ಇಓಸಿನ್’ ಪದರದಲ್ಲಿ ೧ ಸಾವಿರದ ೯೦೦ ಮೀಟರ್ಗಿಂತಲೂ ಹೆಚ್ಚಿನ ಆಳದಲ್ಲಿ ನಡೆಸಿದ ಪ್ರಾಥಮಿಕ ಪರೀಕ್ಷೆಯಲ್ಲಿ ನಿರಂತರ ‘ಫ್ಲೇರಿಂಗ್’ (ಅನಿಲ ಜ್ವಾಲೆ) ಮೂಲಕ ಅನಿಲದ ಅಸ್ತಿತ್ವವು ಸಾಬೀತಾಗಿದೆ.
‘ಶ್ರೀ ವಿಜಯಪುರಂ-೨’ ರ ನಂತರ ಈ ಬ್ಲಾಕ್ನಲ್ಲಿ ಪತ್ತೆಯಾದ ಎರಡನೇ ಖಚಿತ ಹೈಡ್ರೋಕಾರ್ಬನ್ ನಿಕ್ಷೇಪ ಇದಾಗಿದ್ದು, ಒಟ್ಟು ೩ ಅನ್ವೇಷಣಾ ಬಾವಿಗಳಲ್ಲಿ ಎರಡರಲ್ಲಿ ಯಶಸ್ಸು ಸಿಕ್ಕಿದೆ. ಈ ಆವಿಷ್ಕಾರದಿಂದಾಗಿ ಅಂಡಮಾನ್-ನಿಕೋಬಾರ್ ಜಲಾನಯನ ಪ್ರದೇಶದಲ್ಲಿರುವ ಹೈಡ್ರೋಕಾರ್ಬನ್ ಸಾಮರ್ಥ್ಯದ ಮೇಲಿನ ನಿರೀಕ್ಷೆಗಳು ಹೆಚ್ಚಾಗಿದ್ದು, ದೇಶದ ಇಂಧನ ಸ್ವಾವಲಂಬನೆ ಸಾಧಿಸುವ ದಿಕ್ಕಿನಲ್ಲಿ ಇದೊಂದು ಪ್ರಮುಖ ಹೆಜ್ಜೆಯೆಂದು ಪರಿಗಣಿಸಲಾಗಿದೆ.
ಅಮೆರಿಕದ ‘ಬ್ಲೂಮ್ ಬರ್ಗ್’ ಸುದ್ದಿ ಸಂಸ್ಥೆಯು ತನ್ನ ಭಾರತ ವಿರೋಧಿ ಲೇಖನ ಹಿಂಪಡೆಯಿತು!
ಭಾರತೀಯರು ಜಗತ್ತಿನ ಅತ್ಯಂತ ಪ್ರತಿಭಾವಂತ ಜನರಲ್ಲಿ ಒಬ್ಬರಾಗಿದ್ದಾರೆ! – ವ್ಲಾದಿಮಿರ್ ಪುಟಿನ್, ಅಧ್ಯಕ್ಷರು, ರಷ್ಯಾ
ಇರಾನ್ನ ಕ್ಷಿಪಣಿ ಸಾಮರ್ಥ್ಯಕ್ಕೆ ಭಾರಿ ಪ್ರಮಾಣದ ಹಾನಿ! – ಡೊನಾಲ್ಡ್ ಟ್ರಂಪ್
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ
ಭಾರತದ ಮೇಲೆ ಒತ್ತಡ ಹೇರುವುದು ಜಾಗತಿಕ ಸ್ಥಿರತೆಗೆ ಅತ್ಯಂತ ಅಪಾಯಕಾರಿ!
ನಮ್ಮ ಸೈನಿಕರ ಮೈ ಮುಟ್ಟಿದರೂ ಯುದ್ಧ ಭುಗಿಲೇಳುವುದು!