ಬೆಂಗಳೂರಿನಲ್ಲಿ ಪಟಾಕಿ ಅಂಗಡಿಯಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 14 ಜನರ ಸಾವು

ಬೆಂಗಳೂರು – ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ “ಬಾಲಾಜಿ ಕ್ರಾಕರ್ಸ್” ಈ ಪಟಾಕಿ ಅಂಗಡಿಯಲ್ಲಿ ಸಂಭವಿಸಿದ ಬೆಂಕಿಯಲ್ಲಿ 14 ಜನರು ಸಾವನ್ನಪ್ಪಿದ್ದಾರೆ. ಅಕ್ಟೋಬರ್ 7 ರಂದು ಸಂಜೆ ಸುಮಾರು 4.30 ರ ಸಮಯದಲ್ಲಿ ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಅಂಗಡಿಯ ಮಾಲೀಕ ಹಾಗೂ ಆತನ ಪುತ್ರನ ವಿರುದ್ಧ ದೂರು ದಾಖಲಿಸಿ ಬಂಧಿಸಲಾಗಿದೆ. ಈ ಅಂಗಡಿಯಲ್ಲಿ ದಸರಾ ಮತ್ತು ದೀಪಾವಳಿಗಾಗಿ ಪಟಾಕಿಯನ್ನು ಸಂಗ್ರಹಿಸಲಾಗುತ್ತಿತ್ತು. ವಾಹನದಿಂದ ಪೆಟ್ಟಿಗೆಯನ್ನು ಇಳಿಸುವಾಗ ಬೆಂಕಿ ಹತ್ತಿಕೊಂಡಿತು. ಸ್ವಲ್ಪ ಸಮಯದಲ್ಲಿಯೇ ಅಂಗಡಿ ಮತ್ತು ಗೋದಾಮು ಬೆಂಕಿಗೆ ಆಹುತಿಯಾಯಿತು. ಬೆಂಕಿ ಹತ್ತಿಕೊಂಡಾಗ 35 ಜನರು ಕೆಲಸ ಮಾಡುತ್ತಿದ್ದರು.