ಮೋತಿಹಾರಿ (ಬಿಹಾರ) ಇಲ್ಲಿ ಗಣಪತಿ ವಿಸರ್ಜನೆಯ ಶೋಭಾಯಾತ್ರೆಯಲ್ಲಿ ಮುತಾಂಧ ಮುಸಲ್ಮಾನರಿಂದ ಆಸಿಡ್ ದಾಳಿ !

೩ ಹಿಂದುಗಳಿಗೆ ಗಾಯ !

ಮೋತಿಹಾರಿ (ಬಿಹಾರ) – ಇಲ್ಲಿ ಗಣಪತಿ ವಿಸರ್ಜನೆಯ ಶೋಭಾಯಾತ್ರೆಯ ಮೇಲೆ ಕೆಲವು ಮತಾಂಧ ಮುಸಲ್ಮಾನರು ಆಸಿಡ ಎರಚಿದ್ದರಿಂದ ೩ ಹಿಂದುಗಳು ಗಾಯಗೊಂಡರು. ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆ. ಸಪ್ಟೆಂಬರ್ ೨೮ ರಂದು ವಿಸರ್ಜನೆಯ ಶೋಭಾಯಾತ್ರೆ ನಗರದಲ್ಲಿನ ಮಧುಬನ ವೃತ್ತಕ್ಕೆ ತಲುಪಿದಾಗ ಈ ಘಟನೆ ಘಟಿಸಿರುವ ಸಮಾಚಾರವಿದೆ. ಈ ಘಟನೆಯಿಂದ ಸ್ಥಳೀಯ ಹಿಂದೂಗಳು ಅಸಮಾಧಾನಗೊಂಡಿದ್ದು ಅವರು ಸಂಬಂಧಿತ ಮತಾಂಧರಿಗೆ ಬಂದಿಸಲು ಒತ್ತಾಯಿಸುತ್ತಿದ್ದಾರೆ.

ಪೊಲೀಸರು ಇಲ್ಲಿಯವರೆಗೆ ಯಾರನ್ನು ಬಂಧಿಸಿಲ್ಲ, ಸಿಸಿಟಿವಿ ದೃಶ್ಯಾವಳಿಯ ಮೂಲಕ ದಾಳಿಕಾರರನ್ನು ಗುರುತಿಸುವ ಪ್ರಯತ್ನ ಮಾಡಲಾಗುತ್ತಿದೆ. ಮೋತಿಹಾರಿ ಅಂತಹ ಘಟನೆ ಉತ್ತರಪ್ರದೇಶದ ಕುಶಿನಗರ ಮತ್ತು ಬದಾಯುದಲ್ಲಿ ಕೂಡ ನಡೆದಿವೆ. ಮಹಮ್ಮದ್ ಪೈಗಂಬರ್ ಇವರ ಜನ್ಮದಿನದ ಪ್ರಯುಕ್ತ ಸೆಪ್ಟೆಂಬರ್ ೨೮ ರಂದು ಕುಶಿ ನಗರದಲ್ಲಿ ನಡೆಸಲಾದ ಮೆರವಣಿಗೆಯಲ್ಲಿ ಕೆಲವು ಮತಾಂಧ ಮುಸಲ್ಮಾನರಿಂದ ಓರ್ವ ಹಿಂದೂವಿನ ಮನೆಯ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಹಾಗೂ ಸುಲ್ತಾನಪುರದಲ್ಲಿ ರಾಷ್ಟ್ರಧ್ವಜದ ಅವಮಾನ ಆಗಿರುವುದು ಬೆಳಕಿಗೆ ಬಂದಿದೆ. ಬದಾಯು ಇಲ್ಲಿಯ ಮೆರವಣಿಗೆಯಲ್ಲಿ ‘ಸರ್ ತನ ಸೇ ಜುದಾ’ ಘೋಷಣೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಿಂದ ಪ್ರಸಾರವಾಗಿತ್ತು.

ಸಂಪಾದಕೀಯ ನಿಲುವು

ಹಿಂದೂಗಳ ಶೋಭಾಯಾತ್ರೆಯ ಮೇಲೆ ಈ ರೀತಿ ನಿರಂತರ ದಾಳಿಗಳು ನಡೆಯುತ್ತಿರುವುದು ಇದು ‘ದೇಶ ಮುಸಲ್ಮಾನರಿಗಾಗಿ ಅಲ್ಲ, ಹಿಂದುಗಳಿಗಾಗಿ ಅಸುರಕ್ಷಿತವಾಗಿದೆ’, ಇದೆ ಇದು ತೋರಿಸುತ್ತದೆ. ಈಗ ಇದನ್ನು ಜಗತ್ತಿಗೆ ಸಾರಿ ಹೇಳುವುದು ಹಾಗೂ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಒತ್ತಡ ಹೇರುವ ಗುಂಪು ನಿರ್ಮಾಣ ಮಾಡುವ ಸಮಯ ಬಂದಿದೆ, ಇದನ್ನು ತಿಳಿಯಿರಿ !