ಕಾಶಿ, ಅಯೋಧ್ಯೆ ಮತ್ತು ಉಜ್ಜಯಿನಿಯ ನಂತರ ಮಥುರಾದಲ್ಲಿ ಪರಿವರ್ತನೆ !

ಮಥುರೆಯನ್ನು ಧಾರ್ಮಿಕ ಪ್ರವಾಸೋದ್ಯಮ ನಗರವನ್ನಾಗಿ ಮಾಡಲಾಗುವುದು

ಮಥುರಾ (ಉತ್ತರ ಪ್ರದೇಶ) – ಕಾಶಿ, ಅಯೋಧ್ಯೆ ಮತ್ತು ಉಜ್ಜಯಿನಿಯ ನಂತರ ಈಗ ಮಥುರಾದಲ್ಲಿ ಪರಿವರ್ತನೆಯಾಗಲಿದೆ. ಮಥುರಾವನ್ನು ಧಾರ್ಮಿಕ ಪ್ರವಾಸೋದ್ಯಮ ನಗರವನ್ನಾಗಿ ಮಾಡುವ ಪ್ರಯತ್ನ ಮಾಡಲಾಗುವುದು. ಇದರ ಪ್ರಾರಂಭ ಇದೇ ವರ್ಷದಿಂದ ಆಗಲಿದೆ. ಹೇಗೆ ಕಾಶಿಯ ವಿಶ್ವೇಶ್ವರ ದೇವಸ್ಥಾನದ ಪರಿಸರವನ್ನು ಗಂಗೆಯವರೆಗೆ ವಿಸ್ತರಿಸಲಾಯಿತೋ, ಅದೇ ರೀತಿ ಮಥುರಾದ ಶ್ರೀ ಕೃಷ್ಣ ದೇವಾಲಯದ ಪರಿಸರವನ್ನು ಯಮುನಾ ನದಿಯವರೆಗೆ ವಿಸ್ತರಿಸಲಾಗುವುದು.

ಸಂಪಾದಕೀಯ ನಿಲುವು

ಹಿಂದೂ ಯಾತ್ರಾ ಸ್ಥಳಗಳನ್ನು ಧಾರ್ಮಿಕ ಪ್ರವಾಸೋದ್ಯಮ ಕೇಂದ್ರಗಳನ್ನಾಗಿ ಮಾಡದೆ ಹಿಂದೂಗಳ ಧರ್ಮಶಿಕ್ಷಣದ ಕೇಂದ್ರಗಳನ್ನಾಗಿಸುವ ಪ್ರಯತ್ನ ಮಾಡಬೇಕು ! ಭಾರತ ವಿಶ್ವಗುರುವಾಗಬೇಕಾದರೆ ಹಿಂದೂಗಳಿಗೆ ಧಾರ್ಮಿಕ ಶಿಕ್ಷಣ ನೀಡುವುದು ಅಗತ್ಯ !