ಸಂಸತ್ತಿನ ವಿಶೇಷ ಅಧಿವೇಶನದ ವಿಷಯ ಪ್ರಸ್ತಾಪಿಸದಿದ್ದರಿಂದ ಪ್ರಧಾನಿ ಮೋದಿಗೆ ಸೋನಿಯಾ ಗಾಂಧಿ ಪತ್ರ

ನವದೆಹಲಿ – ಸೆಪ್ಟೆಂಬರ್ 18 ರಿಂದ 23 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ‘ಈ ಅಧಿವೇಶನದ ವಿಷಯ ಏನೆಂದು ಸರಕಾರ ಹೇಳಿಲ್ಲ. ಈ ಕುರಿತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅವರು, ಮೊದಲ ಬಾರಿಗೆ ಅಧಿವೇಶನದ ವಿಷಯವನ್ನು ವಿರೋಧ ಪಕ್ಷಗಳಿಗೆ ಹೇಳಿಲ್ಲ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ನೀವು ದೇಶದ ಹಿತದೃಷ್ಟಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಯಸಿದರೆ, ‘ಇಂಡಿಯಾ’ ಮೈತ್ರಿಕೂಟದಲ್ಲಿರುವ ಪಕ್ಷಗಳು ನಿಮಗೆ ಸಹಕರಿಸಲು ಬಯಸುತ್ತವೆ; ಆದರೆ ‘ಈ ವಿಶೇಷ ಅಧಿವೇಶನಕ್ಕೆ ಕಾರಣವೇನು’ ಎಂಬ ಕಲ್ಪನೆಯನ್ನು ವಿರೋಧ ಪಕ್ಷಗಳಿಗೆ ನೀಡಬೇಕು, ನಂತರ ನಾವು ಅದರ ಬಗ್ಗೆ ನಿರ್ಧರಿಸಬಹುದು ಎಂದು ಹೇಳಿದ್ದಾರೆ.