‘ಒಂದು ದೇಶ, ಒಂದು ಚುನಾವಣೆ’ ಇದು ಭಾಜಪದ ರಾಜಕೀಯ ನೀತಿ ! – ಶಾಸಕ ಸಂಜಯ ರಾವುತ

ಶಾಸಕ ಸಂಜಯ ರಾವುತ

ಮುಂಬಯಿ – ಇಂಡಿಯಾ ಮೈತ್ರೀಕೂಟಕ್ಕೆ ಭಾಜಪ ಹೆದರಿದೆ. ಚುನಾವಣಾ ಆಯೋಗ ಕೇಂದ್ರ ಸರಕಾರದ ಒತ್ತಡದಲ್ಲಿ ಕೆಲಸ ಮಾಡುತ್ತದೆ. ದೇಶದಲ್ಲಿ ಎಲ್ಲಿಯವರೆಗೆ ಭ್ರಷ್ಟ ಚುನಾವಣಾ ಆಯೋಗ ಕಾರ್ಯನಿರ್ವಹಿಸುತ್ತಿದೆ, ಅಲ್ಲಿಯವರೆಗೆ ಚುನಾವಣೆಯಲ್ಲಿ ರಾಜಕಾರಣ ನಡೆಯುತ್ತಿರುತ್ತದೆ. ‘ಒಂದು ದೇಶ, ಒಂದು ಚುನಾವಣೆ’ ಇದು ಭಾಜಪದ ರಾಜಕೀಯ ನೀತಿ ಆಗಿದೆ, ಎಂದು ಶಿವಸೇನೆಯ ಶಾಸಕ ಸಂಜಯ ರಾವುತ ಟೀಕೆಸಿದ್ದಾರೆ. ಸಪ್ಟೆಂಬರ್ ಒಂದರಂದು ಮುಂಬಯಿಯಲ್ಲಿ ನಡೆದಿರುವ ಎಲ್ಲಾ ವಿರೋಧಿ ಪಕ್ಷದ ಇಂಡಿಯಾ ಈ ಮೈತ್ರಿಕೂಟದ ಸಭೆಯ ಸ್ಥಳದಲ್ಲಿ ಅವರು ಪ್ರಸಾರ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದರು.