ಉಜ್ವಲಾ ಯೋಜನೆಯಲ್ಲಿ ಗ್ಯಾಸ್‌ ಸಿಲಿಂಡರಿನ ಬೆಲೆಯಲ್ಲಿ 200 ರೂಪಾಯಿಗಳ ಕುಸಿತ

ನವ ದೆಹಲಿ – ಉಜ್ವಲಾ ಯೋಜನೆಯ ಅಡಿಯಲ್ಲಿ 14 ಕೆಜಿಯ ಗ್ಯಾಸ್‌ ಸಿಲಿಂಡರಿನ ಬೆಲೆಯಲ್ಲಿ 200 ರೂಪಾಯಿಗಳನ್ನು ಕಡಿಮೆ ಮಾಡುವುದಾಗಿ ಕೇಂದ್ರ ಸಚಿವ ಅನುರಾಗ ಠಾಕೂರ ಇವರು ಘೋಷಿಸಿದರು. ಸರಕಾರದಿಂದ ಇದಕ್ಕಾಗಿ ರಿಯಾಯತಿಯನ್ನು ಕೊಡಲಾಗುವುದು. ಇದರಿಂದಾಗಿ ಸರಕಾರದ ಬೊಕ್ಕಸದಮೇಲೆ 7 ಸಾವಿರ 500 ಕೋಟಿ ರೂಪಾಯಿಗಳ ಹೆಚ್ಚಿನ ಭಾರ ಬೀಳಲಿದೆ.