ಹಿಜಬುಲ್ಲಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ನಸರುಲ್ಲಾ ಸಾವಿಗೆ ಸಂತಾಪ ವ್ಯಕ್ತ ಉತ್ತರಪ್ರದೇಶದ ಮುಸಲ್ಮಾನರು

  • ಲಕ್ಷ್ಮಣಪುರಿ (ಉತ್ತರ ಪ್ರದೇಶ)ಯಲ್ಲಿ 10 ಸಾವಿರ ಶಿಯಾ ಮುಸ್ಲಿಮರಿಂದ ಮೇಣದಬತ್ತಿಯ ಮೆರವಣಿಗೆ

  • ಶಿಯಾ ಮುಸ್ಲಿಮರಿಂದ 3 ದಿನಗಳ ಶೋಕಾಚರಣೆ

  • 300 ಅಂಗಡಿಗಳನ್ನು ಕೂಡ ಬಂದ್

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಇಸ್ರೇಲ್ ಲೆಬನಾನ್ ರಾಜಧಾನಿ ಬೈರುತ್‌ನಲ್ಲಿ ಹಿಜಬುಲ್ಲಾ ಈ ಜಿಹಾದಿ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹಸನ್ ನಸ್ರುಲ್ಲಾನನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಲಕ್ಷ್ಮಣಪುರಿಯಲ್ಲಿ 10 ಸಾವಿರ ಮುಸ್ಲಿಮರು ಸೆಪ್ಟೆಂಬರ್ 29 ರ ರಾತ್ರಿ 1 ಕಿಲೋಮೀಟರ್ ಮೇಣದಬತ್ತಿ ಮೆರವಣಿಗೆ ನಡೆಸಿದರು. ಅದೇ ರೀತಿ ಮುಸ್ಲಿಮರು ತಮ್ಮ ಮನೆಗಳ ಮೇಲೆ ಕಪ್ಪು ಬಾವುಟವನ್ನು ಹಾರಿಸಿದ್ದರು. ಮೆರವಣಿಗೆಯಲ್ಲಿ ಮುಸ್ಲಿಮರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಛಾಯಾಚಿತ್ರವನ್ನು ಸುಟ್ಟರು ಮತ್ತು ‘ಹಸನ್ ನಸ್ರುಲ್ಲಾ ಜಿಂದಾಬಾದ್’, ‘ಅಮೇರಿಕೆಗೆ ಬೆಂಕಿ ಹಚ್ಚಿ’ ಎಂಬ ಘೋಷಣೆಗಳನ್ನು ಕೂಗಿದರು. ಇಲ್ಲಿ ಶಿಯಾ ಮುಸ್ಲಿಮರು 3 ದಿನಗಳ ಶೋಕಾಚರಣೆ ಘೋಷಿಸಿದ್ದಾರೆ. ಈ ಅವಧಿಯಲ್ಲಿ, ಬಡಾ ಇಮಾಮಬಾಡಾದಿಂದ ಛೋಟಾ ಇಮಾಮಬಾಡಾ ಈ ಪ್ರದೇಶದ 300 ಅಂಗಡಿಗಳನ್ನು ಮುಚ್ಚಲಾಗುತ್ತದೆ. ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ಶಿಯಾ ಮುಸ್ಲಿಮರು ಪ್ರತಿಭಟನೆ ನಡೆಸಿದರು. ನಸ್ರುಲ್ಲಾ ಇಸ್ರೇಲ್‌ನ ಮಾರ್ಗದಲ್ಲಿ ಅಡ್ಡಿಯಾಗಿದ್ದನು. ಅಮಾಯಕರ ರಕ್ತ ಚೆಲ್ಲಿದ್ದಕ್ಕಾಗಿ ಇಸ್ರೇಲ್ ನಸ್ರುಲ್ಲಾನನ್ನು ಹತ್ಯೆ ಮಾಡಿದೆ.

ಒಬ್ಬ ಮುಸಲ್ಮಾನ ವ್ಯಾಪಾರಿಯು, ನಮಗೆ ಭಾವನೆಗಳಿಗಿಂತ ವ್ಯಾಪಾರ ಮುಖ್ಯವಲ್ಲ. ಸತ್ಯವನ್ನು ಬೆಂಬಲಿಸಲು ನಾವು ಯಾವುದೇ ಬೆಲೆ ತೆರಲು ಸಿದ್ಧರಿದ್ದೇವೆ ಎಂದು ಹೇಳಿದನು.

‘ಹುಸೈನಿ ಟೈಗರ್ಸ್’ ಸಂಘಟನೆಯ ಸದಸ್ಯ ಜರಿ ಝೈದಿ ಮಾತನಾಡಿ, ಇದು ನಮಗೆ ಬಹಳ ಕಷ್ಟದ ಸಮಯವಾಗಿದೆ. ನಾವು ನಮ್ಮ ಕುಟುಂಬದ ಒಬ್ಬ ಸದಸ್ಯನನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಯಾವ ರೀತಿ ನಾವು ನಮ್ಮ ಕುಟುಂಬ ಸದಸ್ಯರ ಸಾವಿನ ನಂತರ ದುಃಖ ವ್ಯಕ್ತಪಡಿಸುತ್ತೇವೆಯೋ, ಅದೇ ರೀತಿಯ ದುಃಖ ನಮಗೆ ಆಗಿದೆ. ಇಸ್ರೇಲ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಇದು ನನ್ನ ಬೇಡಿಕೆ ಎಂದು ಹೇಳಿದರು.

`ಹಿಜಬುಲ್ಲಾ’ ಶಿಯಾ ಮುಸ್ಲಿಮರ ಭಯೋತ್ಪಾದಕ ಸಂಘಟನೆ !

‘ಹಿಜಬುಲ್ಲಾ’ ಈ ಭಯೋತ್ಪಾದಕ ಸಂಘಟನೆಯು ಶಿಯಾ ಮುಸ್ಲಿಮರದಾಗಿದ್ದು, ಇದನ್ನು ಸುನ್ನಿ ಮುಸ್ಲಿಮರು ಬೆಂಬಲಿಸುವುದಿಲ್ಲ. ಪ್ರಪಂಚದಲ್ಲಿ ಬಹುತೇಕ ಸುನ್ನಿ ಮುಸ್ಲಿಮರಲ್ಲಿ ಭಯೋತ್ಪಾದಕ ಸಂಘಟನೆಗಳಿವೆ ಮತ್ತು ಸುನ್ನಿ ಮುಸ್ಲಿಮರು ಅವರನ್ನು ಬೆಂಬಲಿಸುತ್ತದೆ. ಪಾಕಿಸ್ತಾನದಲ್ಲಿನ ಭಯೋತ್ಪಾದಕ ಸಂಘಟನೆ ಸುನ್ನಿ ಮುಸಲ್ಮಾನರದ್ದಾಗಿದೆ. ಗಾಜಾದಲ್ಲಿ ‘ಹಾಮಾಸ್’ ಇದು ಸುನ್ನಿ ಭಯೋತ್ಪಾದಕ ಸಂಘಟನೆಯಾಗಿದ್ದರಿಂದ ಅದಕ್ಕೆ ಹೆಚ್ಚಿನ ಬೆಂಬಲ ಸಿಗುತ್ತದೆ. ಅದರ ತುಲನೆಯಲ್ಲಿ ಹಿಜಬುಲ್ಲಾಗೆ ಬೆಂಬಲ ಸಿಗುವುದಿಲ್ಲ; ಆದರೆ ಇದೇ ಹಿಜಬುಲ್ಲಾ ಹಮಾಸಗೆ ಸಹಾಯ ಮಾಡುತ್ತಿತ್ತು; ಹಿಜಬುಲ್ಲಾಗೆ ಶಿಯಾ ಮುಸಲ್ಮಾನರ ದೇಶವಿರುವ ಇರಾನ ಸಹಾಯ ಮಾಡುತ್ತದೆ.

ಸಂಪಾದಕೀಯ ನಿಲುವು

  • ‘ಭಯೋತ್ಪಾದನೆಗೆ ಧರ್ಮವಿರುತ್ತದೆ ಮತ್ತು ಹೆಚ್ಚಿನ ಭಯೋತ್ಪಾದಕರು ಮುಸಲ್ಮಾನರಾಗಿರುತ್ತಾರೆ ಮತ್ತು ಅವರಿಗೆ ಪ್ರಪಂಚದಾದ್ಯಂತದ ಮತಾಂಧ ಮುಸ್ಲಿಮರ ಯಾವಾಗಲೂ ಬಹಿರಂಗವಾಗಿ ಮತ್ತು ಪರೋಕ್ಷವಾಗಿ ಬೆಂಬಲಿಸುತ್ತಾರೆ’, ಎನ್ನುವುದನ್ನು ಪುನಃ ಬಹಿರಂಗಗೊಳಿಸುವ ಘಟನೆ !
  • ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಈ ಮುಸ್ಲಿಂ ದೇಶಗಳಲ್ಲಿ ಸಾವಿರಾರು ಅಮಾಯಕ ಹಿಂದೂಗಳನ್ನು ಕೊಲ್ಲಲಾಗಿದ್ದರೂ, ಭಾರತದಲ್ಲಿ 100 ಹಿಂದೂಗಳಿಂದಲೂ ಎಂದೂ ಮೆರವಣಿಗೆ ನಡೆಸಲಾಗಿಲ್ಲ ಮತ್ತು ಭವಿಷ್ಯದಲ್ಲಿಯೂ ನಡೆಸುವ ಸಾಧ್ಯತೆಯಿಲ್ಲ, ಇದು ಹಿಂದೂಗಳಿಗೆ ನಾಚಿಕೆಗೇಡು !
  • ಭಯೋತ್ಪಾದಕರನ್ನು ಬೆಂಬಲಿಸುವವರು ಭವಿಷ್ಯದಲ್ಲಿ ಭಾರತದಲ್ಲಿ ಹಿಂದೂಗಳ ವಿರುದ್ಧ ಭಯೋತ್ಪಾದಕ ಕೃತ್ಯಗಳನ್ನು ಮಾಡಲು ಪ್ರಾರಂಭಿಸಿದರೆ ಆಶ್ಚರ್ಯ ಪಡಬಾರದು !