ಹಿಂದೂ ರಾಷ್ಟ್ರಕ್ಕೆ ಕೆಟ್ಟದೆಂದು ಹೇಳುವುದು ಎಂದು ನಿಲ್ಲುವುದು ! – ನಟ ಶರದ ಪೋಂಕ್ಷೆ

ನಟ ಶರದ ಪೋಂಕ್ಷೆ

ಮುಂಬಯಿ – ವಿಭಜನೆಯ ಸಮಯದಲ್ಲಿ ಪಾಕಿಸ್ತಾನದಲ್ಲಿ ಶೇಕಡ ೧೫ ರಷ್ಟು ಇದ್ದ ಹಿಂದುಗಳು ಈಗ ಶೇಕಡಾ ಅರ್ಧದಷ್ಟು ಬಾಕಿ ಉಳಿದಿದ್ದಾರೆ. ತದ್ವಿರುದ್ಧ ಭಾರತದಲ್ಲಿ ಶೇಕಡ ೮ ರಷ್ಟು ಇರುವ ಮುಸಲ್ಮಾನರು ಶೇಕಡಾ ೨೩ ರಷ್ಟು ಆಗಿದ್ದಾರೆ, ಆದರೂ ಹಿಂದೂ ರಾಷ್ಟ್ರ ಕೆಟ್ಟದ್ದು ? ಇದೆಲ್ಲಾ ಎಂದು ನಿಲ್ಲುವುದು? ಎಂದು ಹಿರಿಯ ನಟ ಶರದ ಪೋಂಕ್ಷೆ ಇವರು ಪ್ರಶ್ನೆ ಉಪಸ್ಥಿತಗೊಳಿಸಿದ್ದಾರೆ. ಗಪ್ಪ ಮಸ್ತಿ ಹರಟೆ ಈ ಪಾಡ್ಕಾಸ್ಟ್ ನಲ್ಲಿ (ಆಕಾಶವಾಣಿಯ ರೀತಿಯಲ್ಲಿ ಆಡಿಯೋ ಪ್ರಸಾರದ ಒಂದು ಖಾಸಗಿ ಮಾಧ್ಯಮ) ಇತ್ತೀಚಿಗೆ ನೀಡಿರುವ ಒಂದು ಸಂದರ್ಶನದಲ್ಲಿ ಶರದ ಪೋಂಕ್ಷೆ ಇವರು ಈ ಪ್ರಶ್ನೆ ಉಪಸ್ಥಿತಗೊಳಿಸಿದರು. ಶರದ ಪೋಕ್ಷೆ ಇವರು ಮಾತು ಮುಂದುವರೆಸಿ, ”ಎಲ್ಲಿಯವರೆಗೆ ಈ ದೇಶದಲ್ಲಿ ಹಿಂದೂ ಬಹುಸಂಖ್ಯಾತರಿದ್ದಾರೆ, ಅಲ್ಲಿಯವರೆಗೆ ಇಲ್ಲಿ ಜಾತ್ಯತೀತ, ಸರ್ವಧರ್ಮ ಸಮಭಾವ ಇರುವುದು. ಯಾವ ದಿನ ಹಿಂದೂ ಶೇಕಡ ೪೯ ಆಗುವವರು ಮತ್ತು ಮುಸಲ್ಮಾನರು ಶೇಕಡಾ ೫೧ ರಷ್ಟು ಆಗುವವರು ಆ ದಿನ ಎಲ್ಲವೂ ಮುಗಿದಿರುತ್ತದೆ. ಜಗತ್ತಿನಾದ್ಯಂತ ಹಿಂದುಗಳು ಎಲ್ಲೇ ಹೋದರು, ವೀಸಾ ಪಡೆಯುವದಕ್ಕಾಗಿ ಅಡಚಣೆ ಬರುವುದಿಲ್ಲ: ಆದರೆ ‘ಖಾನ್’, ‘ಸಯ್ಯದ್’ ಎಂದು ಮುಸಲ್ಮಾನ ಹೆಸರಗಳು ಇರುವವರನ್ನು ತಡೆಯಲಾಗುತ್ತದೆ. ‘ಶಾಂತಿಯಲ್ಲಿ ಧರ್ಮ ಎಂದು ಒಂದು ಕಡೆ ಹೇಳುತ್ತಾರೆ, ಹಾಗಾದರೆ ಒಂದು ಇಸ್ಲಾಮಿ ದೇಶ ಕೂಡ ಶಾಂತ ಏಕೆ ಇಲ್ಲ ? ಅಲ್ಲಿ ಅವರನ್ನು ಹೊಡೆಯಲು ಹಿಂದುಗಳು ಹೋಗುವುದಿಲ್ಲ ಅಲ್ಲವೇ , ಹಾಗಾದರೆ ಪಾಕಿಸ್ತಾನ ಇಷ್ಟೊಂದು ಏಕೆ ದಹಿಸುತ್ತಿದೆ ?” ಎಂದು ಹೇಳಿದರು.

ಭಗವದ್ಗೀತೆ ಅಥವಾ ಸಂವಿಧಾನ ?

ನನಗೆ ಯಾರಾದರೂ ‘ಭಗವದ್ಗೀತೆ ಅಥವಾ ಸಂವಿಧಾನ ?’ ಎಂದು ಪ್ರಶ್ನೆ ಕೇಳಿದರೆ ನಾನು ಒಂದು ಕ್ಷಣವೂ ತಡ ಮಾಡದೆ ನಾನು ‘ಸಂವಿಧಾನ’ ಎಂದು ಉತ್ತರಿಸುತ್ತೇನೆ. ನನ್ನ ‘ಭಗವದ್ಗೀತೆ’ ನಂತರ ಬರುತ್ತದೆ. ಸಂವಿಧಾನ ಮೊದಲು ಬರುತ್ತದೆ. ಇದೇ ಪ್ರಶ್ನೆ ಮುಸಲ್ಮಾನರಿಗೆ ಕೇಳಿದರೆ ಅವರು ಏನು ಹೇಳುವರು ಅದನ್ನು ನೋಡಿರಿ. ಭವಿಷ್ಯದಲ್ಲಿ ನನಗೆ ಅಮೇರಿಕಾದಲ್ಲಿ ನನ್ನ ಜೀವನ ನಡೆಸಬೇಕಾದರೆ, ಆಗ ಅಮೆರಿಕಾದ ಸಂವಿಧಾನ ಇದು ನನಗಾಗಿ ಆದ್ಯತೆಯದಾಗಿರುವುದು. ಮನೆಯಲ್ಲಿ ಭಗವದ್ಗೀತೆಯ ಪಠಣೆ ಮತ್ತು ‘ಜೈ ಶ್ರೀ ರಾಮ’ ಎಂದು ಹೇಳುವೆ; ಆದರೆ ಹೊರ ಬಂದರೆ ನಾನು ಅಮೆರಿಕನಾಗಿರುವೆ. (ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ ಪ್ರತಾಪ ಇವರ ಜೊತೆಗೆ ಅನೇಕ ರಾಷ್ಟ್ರ ಪುರುಷರು ಮತ್ತು ಕ್ರಾಂತಿಕಾರಿಗಳು ಹಿಂದೂ ಧರ್ಮದ ಆದರ್ಶ ಪಡೆದು ಆಕ್ರಮಣಕಾರಿಗಳ ವಿರುದ್ಧ ಹೋರಾಡಿದರು. ರಾಷ್ಟ್ರ ರಕ್ಷಣೆಗೆ ಪ್ರಾಧಾನ್ಯ ನೀಡುವ ಶಿಕ್ಷಣ ನೀಡುವ ಹಿಂದೂ ಧರ್ಮ ಜಗತ್ತಿನಲ್ಲಿ ಏಕೈಕವಾಗಿದೆ. ಪ್ರಾಚೀನ ಕಾಲದಿಂದ ಭಗವದ್ಗೀತೆ ಮತ್ತು ಇತರ ಹಿಂದೂ ಧರ್ಮಗ್ರಂಥಗಳ ಆಧಾರದಲ್ಲಿ ರಾಷ್ಟ್ರದ ಕಾರ್ಯಕಲಾಪ ನಡೆಯುತ್ತಿತ್ತು, ಇದು ಕೂಡ ಸಮಸ್ತ ಹಿಂದುಗಳು ತಿಳಿಯಬೇಕು ! – ಸಂಪಾದಕರು)