ಬಿಹಾರದಲ್ಲಿ ಪತ್ರಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರ ಬಂಧನ !

ಪಾಟಲಿಪುತ್ರ (ಬಿಹಾರ ) – ಬಿಹಾರದ ಅರರಿಯಾಮದಲ್ಲಿಯ ದಿನಪತ್ರಿಕೆ ‘ಅಕಬಾರ’ನ ಪತ್ರಕರ್ತ ವಿಮಲ ಯಾದವ ಇವರ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ನಾಲ್ಕು ಜನರನ್ನು ಬಂಧಿಸಿದ್ದಾರೆ. ಈ ಕೊಲೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೂ ಎಂಟು ಜನರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಪ್ರಕರಣದ ತನಿಖೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಪೊಲೀಸರು, ವಿಮಲ ಯಾದವ ತನ್ನ ನೆರೆಹೊರೆಯವರೊಂದಿಗೆ ಹಳೆಯ ವಿವಾದಗಳೂ ಇತ್ತು. ಆದ್ದರಿಂದ ಈ ಕೊಲೆಯಾಗಿರಬಹುದು ಎಂಬ ಸಂಶಯವನ್ನು ವ್ಯಕ್ತಪಡಿಸಿದ್ದಾರೆ.