ಆಗಸ್ಟ್ 8 ರಿಂದ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚೆ

ನವ ದೆಹಲಿ – ಮಣಿಪುರದಲ್ಲಿನ ಹಿಂಸಾಚಾರದ ಬಗ್ಗೆ ಆಗಸ್ಟ್‌ ೧ ರಂದು ಸಹ ವಿರೋಧಿ ಪಕ್ಷಗಳು ಗದ್ದಲ ಮಾಡಿದ್ದರಿಂದ ರಾಜ್ಯಸಭೆ ಮತ್ತು ಲೋಕಸಭೆಯನ್ನು ಮಧ್ಯಾಹ್ನ ೨ ಗಂಟೆಯ ವರೆಗೆ ಮುಂದೂಡಲಾಯಿತು. ಮಣಿಪುರ ಸೂತ್ರದ ಮೇಲೆ ಸರಕಾರದ ವಿರುದ್ಧ ವಿರೋಧ ಪಕ್ಷಗಳು ತಂದಿರುವ ಅವಿಶ್ವಾಸ ಪ್ರಸ್ತಾವದ ಕುರಿತು ಆಗಸ್ಟ್ 8 ರಿಂದ 10 ರವರೆಗೆ ಚರ್ಚೆ ನಡೆಯಲಿದೆ. ಈ ಚರ್ಚೆಗೆ ಆಗಸ್ಟ್ 10 ರಂದು ಪ್ರಧಾನಿ ಮೋದಿ ಉತ್ತರ ನೀಡಲಿದ್ದಾರೆ ಎಂದು ಹೇಳಲಾಗಿದೆ.