ಸತತ ಕೃತಜ್ಞತಾಭಾವದಲ್ಲಿರುವ ಸನಾತನದ ಸಂತ ಪೂ. (ಶ್ರೀಮತಿ) ಆಶಾ ಭಾಸ್ಕರ ದರ್ಭೆಅಜ್ಜಿಯವರ ಕೊಲ್ಲಾಪುರದಲ್ಲಿ ದೇಹತ್ಯಾಗ !

ಪೂ. (ಶ್ರೀಮತಿ) ಆಶಾ ದರ್ಭೆಅಜ್ಜಿ

ಕೊಲ್ಲಾಪುರ – ಧರ್ಮಾಚರಣೆ ಮತ್ತು ಪ್ರೇಮಮಯಿಯಾಗಿರುವ ಕೊಲ್ಲಾಪುರದ ಸನಾತನದ ೭೧ ನೇ ಸಂತರಾದ ಪೂ. (ಶ್ರೀಮತಿ) ಆಶಾ ಭಾಸ್ಕರ ದರ್ಭೆಅಜ್ಜಿಯವರು (ವಯಸ್ಸು ೯೪ ವರ್ಷಗಳು) ಜುಲೈ ೨೨ ರಂದು ರಾತ್ರಿ ೯.೧೫ ಗಂಟೆಗೆ ದೇಹತ್ಯಾಗ ಮಾಡಿದರು. ಅವರು ೨ ಪುತ್ರರು, ೨ ಸೊಸೆಯಂದಿರು, ೧ ಪುತ್ರಿ (ಶ್ರೀಮತಿ ಅಂಜಲಿ ಅನಂತ ಕುಲಕರ್ಣಿ), ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ. ಅವರು ಗೋವಾದ, ಫೋಂಡಾದಲ್ಲಿನ ಅಶ್ವಿನಿ ಕುಲಕರ್ಣಿ ಇವರ ಅಜ್ಜಿಯಾಗಿದ್ದರು.

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಪೂ. ಅಜ್ಜಿಯವರ ಬಗ್ಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು, “ಪೂ. ಅಜ್ಜಿಯವರು ಯಾವಾಗಲೂ ಶ್ರೀ ಗುರುಗಳ ಅನುಸಂಧಾನದಲ್ಲಿದ್ದು ಅವರ ಅಖಂಡ ನಾಮಜಪ ನಡೆಯುತ್ತಿದೆ. ಅವರ ಮುಂದಿನ ಸಾಧನಾಪ್ರವಾಸವೂ ಒಳ್ಳೆಯದಾಗಿ ನಡೆಯಲಿದೆ”, ಎಂದು ಹೇಳಿದರು.

ಈ ಬಗ್ಗೆ ಅಶ್ವಿನಿ ಕುಲಕರ್ಣಿ ಇವರು, “ಪೂ. ಅಜ್ಜಿಯವರು ಯಾವಾಗಲೂ ಕೃತಜ್ಞತಾಭಾವದಲ್ಲಿರುತ್ತಿದ್ದರು. “ಶ್ರೀ ಗುರುಗಳು ನನಗಾಗಿ ಎಷ್ಟು ಮಾಡುತ್ತಾರೆ, ನಾನು ಅವರಿಗಾಗಿ ಏನೂ ಮಾಡಲಿಲ್ಲ’, ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ‘ಜೀವನದಲ್ಲಿನ ಎಲ್ಲ ಕಹಿ ಪ್ರಸಂಗಗಳಲ್ಲಿ ದೇವರು ಜೊತೆಗಿದ್ದರು. ಇದೆಲ್ಲವೂ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಕೃಪೆಯಾಗಿದ್ದು ಅವರು ಎಲ್ಲರನ್ನೂ ಕಾಪಾಡುತ್ತಿದ್ದಾರೆ’, ಎಂಬ ಅವರ ಭಾವವಿತ್ತು. ದೇಹತ್ಯಾಗ ಮಾಡುವ ಸುಮಾರು ೧೫ ದಿನಗಳ ಮುನ್ನ ಅವರ ತಿನ್ನುವುದು-ಕುಡಿಯುವುದು ತುಂಬಾ ಕಡಿಮೆಯಾಗಿತ್ತು; ಆದರೆ ಆ ಸ್ಥಿತಿಯಲ್ಲಿಯೂ ಅವರು ಬಹಳ ಶಾಂತವಾಗಿದ್ದರು. ದೇಹತ್ಯಾಗದ ನಂತರ ಅವರ ಕೋಣೆ ಮತ್ತು ಮನೆಯಲ್ಲಿ ಚೈತನ್ಯ ಮತ್ತು ಪ್ರಕಾಶದಲ್ಲಿ ಹೆಚ್ಚಳವಾಗಿತ್ತು. ಅವರ ಕೋಣೆಗೆ ಹೋದಾಗ ಟೊಳ್ಳಿನಲ್ಲಿ ಕುಳಿತಂತೆ ಅನಿಸಿ ಶಾಂತಿಯ ಸ್ಪಂದನಗಳ ಅರಿವಾಗುತ್ತಿತ್ತು. ಅಲ್ಲಿ ಏಕಾಗ್ರತೆಯಿಂದ ನಾಮಜಪ ನಡೆಯುತ್ತಿತ್ತು”, ಎಂದು ಹೇಳಿದರು.

ಇಲ್ಲಿ ಪ್ರಕಾಶಿಸಲಾದ ಅನುಭೂತಿ ‘ಭಾವ ಇದ್ದಲ್ಲಿ ದೇವ’ ಈ ಉಕ್ತಿಯಂತೆ ಸಾಧಕರ ವೈಯಕ್ತಿಕ ಅನುಭೂತಿಯಾಗಿದೆ. ಇದು ಎಲ್ಲರಿಗೂ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. – ಸಂಪಾದಕರು