ಭಾರತ ಸಹಾಯ ಮಾಡದಿದ್ದರೆ ಮತ್ತೂಂದು ರಕ್ತಪಾತವಾಗುತ್ತಿತ್ತು !

ನವ ದೆಹಲಿ – ಭಾರತವು ಶ್ರೀಲಂಕಾಕ್ಕೆ ಮಾಡಿದಷ್ಟು ಸಹಾಯವನ್ನು ಬೇರೆಯಾವುದೇ ದೇಶಗಳುಮಾಡಲಿಲ್ಲ. ಆರ್ಥಿಕ ಸಂಕಷ್ಟದ ಕಾಲದಲ್ಲಿ ಭಾರತವು ನಮ್ಮನ್ನು ಕಾಪಾಡಿತು ಇಲ್ಲದಿದ್ದರೆ, ನಾವೆಲ್ಲರೂ ಮತ್ತೂಂದು ರಕ್ತಪಾತವನ್ನು ಎದುರಿಸಬೇಕಾಗಿತ್ತು ಎಂದು ಶ್ರೀ ಲಂಕಾದ ಸಂಸತ್ತಿನ ಅಧ್ಯಕ್ಷ ಮಹಿಂದಾ ಯಾಪ ಅಭಯವರ್ಧನೆ ಇವರು ಹೇಳಿದರು. ಶ್ರೀ ಲಂಕಾವು ಆರ್ಥಿಕ ಸಂಕಷ್ಟದಲ್ಲಿದ್ದಾಗ ಭಾರತವು ಮಾಡಿದ ಸಹಾಯಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಕಳೆದ ವರ್ಷ ಶ್ರೀಲಂಕಾವು ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾಗಿ ಬಂತು. ಈ ಸಂದರ್ಭದಲ್ಲಿ, ಭಾರತವು ಶ್ರೀಲಂಕಾಕ್ಕೆ ತನ್ನದೇ ಆದ ವಿವಿಧ ಮಾಧ್ಯಮಗಳ ಮೂಲಕ ಸುಮಾರು ೫ ಬಿಲಿಯನ್ ಡಾಲರ್ಸ (ಸುಮಾರು ೩೩ ಸಾವಿರ ಕೋಟಿ ೪೬ ರೂಪಾಯಿಗಳು) ಸಹಾಯ ಮಾಡಿತ್ತು.
ಮಹಿಂದಾ ಯಾಪ ಅಭಯವರ್ಧನೆಯವರು ಶ್ರೀ ಲಂಕಾದಲ್ಲಿನ ಭಾರತೀಯ ಹೈ ಕಮೀಷನರ್ ರ್ಗೋಪಾಲ ಬಾಗಲೆ ಮತ್ತು ಇತರ ಅಧಿಕಾರಿಗಳ ಸಮ್ಮುಖದಲ್ಲಿ, ಇಲ್ಲಿ ನಿಮ್ಮ ರಾಯಭಾರಿ (ಭಾರತದ) ನಮ್ಮ ಅತ್ಯಂತ ಆತ್ಮೀಯ ಸ್ನೇಹಿತ ಎಂದು ಹೇಳಿದರು. ನಾವು ಅವರನ್ನು ಪ್ರೀತಿಸುತ್ತೇವೆ ಮತ್ತು ಗೌರವಿಸುತ್ತೇವೆ ಎಂದರು.
Sri Lankan Parliament Speaker Mahinda Yapa Abeywardena expressed gratitude to India for its unwavering support during Sri Lanka’s economic crisis, highlighting that no other nation has provided such substantial assistance to Colombo as New Delhi did.#SriLanka #India…
— IndiaToday (@IndiaToday) July 8, 2023
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation