ಪ್ರಧಾನಿ ಮತ್ತು ಗೃಹ ಸಚಿವರನ್ನು ಗುಂಡಿಕ್ಕಿ ಕೊಲ್ಲುವ ಹೇಳಿಕೆ ನೀಡಿದ ಮೌಲಾನ ವಿರುದ್ಧ ಕಾನೂನು ಕ್ರಮಕೈಗೊಳ್ಳಿ !

ಭಾಗ್ಯನಗರ (ತೆಲಂಗಾಣ) ಇಲ್ಲಿಯ ಹಿಂದುತ್ವನಿಷ್ಠರಿಂದ ಪೊಲೀಸರಿಗೆ ದೂರು !

(ಮೌಲಾನಾ ಎಂದರೆ ಇಸ್ಲಾಂನ ಅಭ್ಯಾಸಕ)

ನೆಲ್ಲೂರು (ಆಂಧ್ರಪ್ರದೇಶ) – ಇಲ್ಲಿ ಜುಲೈ ೨ ರಂದು ಮುಸಲ್ಮಾನರು ಏಕರೂಪ ನಾಗರೀಕ ಸಂಹಿತೆಯ ವಿರುದ್ಧ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಒಬ್ಬ ಮೌಲ್ವಿಯು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ ಶಾಹ ಇವರನ್ನು ಕೊಲ್ಲುವಂತೆ ಕರೆ ನೀಡಿದನು. ಹಾಗೆಯೇ ಕಾನೂನಿನ ವಿರುದ್ಧವಾಗಿ ರಸ್ತೆಗಿಳಿಯುವಂತೆಯೂ ಕರೆ ನೀಡಿದನು. ಈ ಪ್ರಕರಣದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಮೌಲಾನ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳುವಂತೆ ಜುಲೈ೭ ರಂದು ಭಾಗ್ಯ ನಗರದಲ್ಲಿ ಹಿಂದುತ್ವನಿಷ್ಠ ಸಂಘಟನೆಗಳಿಂದ ದೂರು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಏಕತಾ ಮಂಚ್, ಭಜರಂಗ ಸೇನೆ, ಭಾವಸಾರ ಕ್ಷತ್ರಿಯ ಸಮಾಜ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

ಸಂಪಾದಕೀಯ ನಿಲುವು

ಇಂತಹ ಬೇಡಿಕೆ ಏಕೆ ಮಾಡಬೇಕಾಗುತ್ತದೆ ? ಪೊಲೀಸರಿಗೆ ಇದು ತಿಳಿಯುವುದಿಲ್ಲವೇ ?