ನಾನು ರಾಜೀನಾಮೆ ನೀಡುವುದು ಇದು ವದಂತಿ ! – ಮುಖ್ಯಮಂತ್ರಿ

ಮುಖ್ಯಮಂತ್ರಿ ಏಕನಾಥ ಶಿಂದೆ

ಮುಂಬಯಿ – ನಾನು ರಾಜೀನಾಮೆ ನೀಡುತ್ತೇನೆ, ಇದು ವದಂತಿ ಆಗಿದೆ. ವಿರೋಧಿಗಳಿಂದ ಅದನ್ನು ಪಸರಿಸಲಾಗುತ್ತಿದೆ. ಸಾಮಾನ್ಯ ಮನುಷ್ಯನು ಮುಖ್ಯಮಂತ್ರಿಯಾದರೆ, ಅದು ವಿರೋಧಿಗಳಿಗೆ ಹೊಟ್ಟೆ ನೋವು ಆಗಿದೆ. ಸರಕಾರದ ಶಪಥ ಗ್ರಹಣದಿಂದ ‘ಈ ಸರಕಾರ ಬೀಳುತ್ತದೆ’ ಎಂದೇ ಹೇಳುತ್ತಿದ್ದಾರೆ.

ಅವರ ವದಂತಿಗಳು ಮಿತಿಮೀರಿವೆ. ವಿರೋಧಿಗಳು ಮೊದಲು ಅವರವರ ಮನೆಗಳನ್ನು ರಕ್ಷಿಸಲಿ, ಎಂದು ಮುಖ್ಯಮಂತ್ರಿ ಏಕನಾಥ ಶಿಂದೆ ಇವರು ಒಂದು ವಾರ್ತಾ ವಾಹಿನಿಯ ಜೊತೆಗೆ ಮಾತನಾಡುವಾಗ ಹೇಳಿದರು. ಅವರು ಮಾತು ಮುಂದುವರೆಸುತ್ತಾ, ಶಿವಸೇನೆಯಲ್ಲಿ ಯಾರೂ ಅಸಮಾಧಾನವಿಲ್ಲ. ನಾವು ವಿಕಾಸದ ಜೊತೆಗೆ ಇದ್ದೇವೆ. ಅಜಿತ ಪವಾರ ಇವರು ಕೂಡ ವಿಕಾಸ ನೋಡಿ ಸರಕಾರಕ್ಕೆ ಸಹಕಾರ ನೀಡಿದ್ದಾರೆ. ಈಗ ನಮ್ಮದು ದೃಢವಾದ ಸರಕಾರವಾಗಿದೆ. ಹಿಂದಿನ ಸರಕಾರಗಳು ನಿಲ್ಲಿಸಿರುವ ಎಲ್ಲಾ ಪ್ರಕಲ್ಪಗಳು ನಾವು ಆರಂಭಿಸಿದ್ದೇವೆ. ಸಾಮಾನ್ಯ ಮನುಷ್ಯನನ್ನು ಪ್ರಗತಿಯತ್ತ ಕರೆದುಕೊಂಡು ಹೋಗುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.