ಝಾರಖಂಡ ಉಚ್ಚ ನ್ಯಾಯಾಲಯವು ರಾಹುಲ ಗಾಂಧಿ ವಿರುದ್ಧದ ಕ್ರಿಮಿನಲ್ ಕ್ರಮಕ್ಕೆ ತಾತ್ಕಾಲಿಕ ತಡೆ !

ಪ್ರಧಾನಮಂತ್ರಿ ಮೋದಿಯವರ ಅವಮಾನ ಮಾಡಿದ ಪ್ರಕರಣ

ರಾಂಚಿ (ಝಾರಖಂಡ) – ಝಾರಖಂಡ ಉಚ್ಚ ನ್ಯಾಯಾಲಯವು ಜುಲೈ 4 ರಂದು ಕಾಂಗ್ರೆಸ್ ಮುಖಂಡ ರಾಹುಲ ಗಾಂಧಿ ವಿರುದ್ಧದ ಕ್ರಿಮಿನಲ್ ಕ್ರಮಕ್ಕೆ ತಾತ್ಕಾಲಿಕ ತಡೆ ನೀಡಿದೆ. ಅಗಸ್ಟ 16 ರಂದು ಈ ಸಂದರ್ಭದಲ್ಲಿ ಮುಂದಿನ ವಿಚಾರಣೆ ನಡೆಯಲಿದೆ. 2019 ರಲ್ಲಿ ಕರ್ನಾಟಕದಲ್ಲಿ ನಡೆದ ಒಂದು ಸಾರ್ವಜನಿಕ ಸಭೆಯಲ್ಲಿ ಎಲ್ಲ ಕಳ್ಳರ ಅಡ್ಡಹೆಸರು ಮೋದಿ ಎಂದೇಕೆ ಇರುತ್ತದೆ ? ಎಂದು ಹೇಳಿದ್ದರು. ಗಾಂಧಿಯವರು ಪ್ರಧಾನಮಂತ್ರಿಯವರನ್ನು ಅವಮಾನಿಸುವ ಈ ಹೇಳಿಕೆಯ ವಿರುದ್ಧ ದೇಶಾದ್ಯಂತ ದೂರನ್ನು ದಾಖಲಿಸಲಾಗಿತ್ತು. ಸೂರತನ ನ್ಯಾಯಾಲಯವು ಈ ಮೊದಲು ಗಾಂಧಿಯವರನ್ನು ಈ ಪ್ರಕರಣದಲ್ಲಿ 2 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಇದರಿಂದ ಅವರು ಸಂಸತ್ತಿನ ಸದಸ್ಯತ್ವ ಸ್ಥಾನವನ್ನು ಕಳೆದುಕೊಂಡಿದ್ದಾರೆ.