Indian Men Killed Dubai : ದುಬೈನಲ್ಲಿ ಪಾಕಿಸ್ತಾನಿ ವ್ಯಕ್ತಿಯು ನಡೆಸಿದ ದಾಳಿಯಲ್ಲಿ 2 ಹಿಂದೂಗಳ ಹತ್ಯೆ, ಒಬ್ಬ ಗಾಯ

ಮೃತರ ಹೆಸರು ಅಷ್ಟಪು ಪ್ರೇಮಸಾಗರ ಮತ್ತು ಶ್ರೀನಿವಾಸ

ದುಬೈ (ಸಂಯುಕ್ತ ಅರಬ ಎಮಿರಾಟ್) – ಇಲ್ಲಿ ಪಾಕಿಸ್ತಾನದ ಮುಸ್ಲಿಂ ವ್ಯಕ್ತಿಯೊಬ್ಬ ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ 3 ಭಾರತೀಯ ಹಿಂದೂ ಕಾರ್ಮಿಕರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ಇದರಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಮತ್ತು ಮೂರನೆಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಏಪ್ರಿಲ್ 11 ರಂದು ಇಲ್ಲಿನ ಬೇಕರಿಯಲ್ಲಿ ನಡೆದಿದೆ. ಮೃತ ಭಾರತೀಯರ ಹೆಸರು ಅಷ್ಟಪು ಪ್ರೇಮಸಾಗರ ಮತ್ತು ಶ್ರೀನಿವಾಸ ಆಗಿದೆ. ಇಬ್ಬರೂ ತೆಲಂಗಾಣ ರಾಜ್ಯದವರು. ಗಾಯಗೊಂಡ ವ್ಯಕ್ತಿಯ ಹೆಸರು ಸಾಗರ ಆಗಿದೆ. ಈ ಕೊಲೆಗಳ ಹಿಂದೆ ಧಾರ್ಮಿಕ ವಿವಾದವಿದೆ ಎಂದು ಹೇಳಲಾಗುತ್ತಿದೆ. ಕೊಲೆ ಮಾಡಿದ ಪಾಕಿಸ್ತಾನಿ ಈ ಭಾರತೀಯರ ಸಹೋದ್ಯೋಗಿಯಾಗಿದ್ದನು. ‘ಈ ಪ್ರಕರಣದಲ್ಲಿ ಆತನ ಮೇಲೆ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂಬುದರ ಕುರಿತು ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಈ ಬಗ್ಗೆ ಭಾಜಪ ನಾಯಕ ಮತ್ತು ಕೇಂದ್ರ ಸಚಿವ ಜಿ. ಕಿಶನ ರೆಡ್ಡಿ ಅವರು ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ, ಹಾಗೂ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ. ವಿದೇಶಾಂಗ ಸಚಿವಾಲಯವು ಇಬ್ಬರ ಮೃತದೇಹಗಳನ್ನು ಭಾರತಕ್ಕೆ ತರಲು ಪ್ರಯತ್ನಿಸುತ್ತಿದೆ ಎಂದು ರೆಡ್ಡಿ ಹೇಳಿದ್ದಾರೆ.

https://twitter.com/SanatanPrabhat/status/1912506030077903343

ಸಂಪಾದಕೀಯ ನಿಲುವು

ಹಿಂದೂ ಬಹುಸಂಖ್ಯಾತ ಭಾರತದಲ್ಲಿಯೇ ಹಿಂದೂಗಳು ಸುರಕ್ಷಿತವಾಗಿಲ್ಲ . ಹೀಗಿರುವಾಗ, ದುಬೈನಂತಹ ಮುಸ್ಲಿಂ ನಗರದಲ್ಲಿ ಅವರು ಹೇಗೆ ಸುರಕ್ಷಿತವಾಗಿರಲು ಸಾಧ್ಯ?