ಬೆಂಗಳೂರು – ಕೇಂದ್ರ ಸರಕಾರ ಜಾರಿಗೊಳಿಸಿರುವ ವಕ್ಫ್ ಸುಧಾರಣಾ ಕಾಯ್ದೆಯನ್ನು ನಮ್ಮ ಸರಕಾರ ವಿರೋಧಿಸುತ್ತದೆ. ರಾಜ್ಯದಲ್ಲಿ ಅದನ್ನು ಜಾರಿಗೊಳಿಸುವುದಿಲ್ಲ ಎಂದು ಕರ್ನಾಟಕದ ಕಾಂಗ್ರೆಸ್ ಸರಕಾರದ ಗೃಹ ನಿರ್ಮಾಣ ಸಚಿವ ಜಮೀರ್ ಅಹ್ಮದ್ ಖಾನ್ ಘೋಷಿಸಿದ್ದಾರೆ. ಈ ಕಾನೂನನ್ನು ಬಂಗಾಳ, ಕೇರಳ ಮತ್ತು ತಮಿಳುನಾಡು ಸರಕಾರಗಳು ಕೂಡ ಜಾರಿಗೊಳಿಸದಿರಲು ನಿರ್ಧರಿಸಿವೆ ಎಂದೂ ಅವರು ತಿಳಿಸಿದ್ದಾರೆ. (ಸಂಸತ್ತಿನ ಕಾನೂನುಗಳನ್ನು ಜಾರಿಗೊಳಿಸದಿರಲು ರಾಜ್ಯಗಳಿಗೆ ಧೈರ್ಯ ಹೇಗೆ ಬರುತ್ತದೆ? ಕೇಂದ್ರ ಸರಕಾರ ಇಂತಹ ಸಂವಿಧಾನ ದ್ರೋಹಿ ರಾಜ್ಯ ಸರಕಾರಗಳನ್ನು ತಕ್ಷಣ ವಿಸರ್ಜಿಸಿ, ಅಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬೇಕು! – ಸಂಪಾದಕರು)
ಸಂಪಾದಕೀಯ ನಿಲುವುಭಾರತೀಯ ಸಂವಿಧಾನವನ್ನು ಜೇಬಿನಲ್ಲಿಟ್ಟುಕೊಂಡು, ಆಗಾಗ ಅದನ್ನು ತೋರಿಸಿ ‘ನಾವು ಸಂವಿಧಾನದ ರಕ್ಷಕರು’ ಎಂದು ಹೇಳುವ ಕಾಂಗ್ರೆಸ್, ಭಾರತೀಯ ಸಂಸತ್ತು ಬಹುಮತದಿಂದ ಅಂಗೀಕರಿಸಿದ ಕಾನೂನನ್ನು ಜಾರಿಗೊಳಿಸುವುದಿಲ್ಲ ಎಂದು ಘೋಷಿಸುವ ಮೂಲಕ ತಾನು ಸಂವಿಧಾನದ ದ್ರೋಹಿಯೆಂದು ತೋರಿಸಿಕೊಳ್ಳುತ್ತಿದೆ! |