ಮುರ್ಷಿದಾಬಾದ್ ನಲ್ಲಿ ನಡೆದ ಹಿಂದೂಗಳ ವಿರುದ್ಧದ ಗಲಭೆಗಳ ತನಿಖೆಗೆ ಆದೇಶ!

ಅಗ್ನಿ ಸಮಾಜ ಸಲ್ಲಿಸಿದ ದೂರನ್ನು ಗಣೆನೆಗೆ ತೆಗೆದುಕೊಂಡ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ

ನವದೆಹಲಿ – ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ವಕ್ಫ್ ಕಾನೂನನ್ನು ವಿರೋಧಿಸುತ್ತಿದ್ದಾಗ ಮುಸ್ಲಿಂ ಗುಂಪೊಂದು ಹಿಂದೂಗಳ ಮೇಲೆ ನಡೆಸಿದ ದಾಳಿ ಮತ್ತು ಪೊಲೀಸರ ನಿಷ್ಕ್ರಿಯತೆಯ ಬಗ್ಗೆ ಅಗ್ನಿ ಸಮಾಜದ ಸ್ವಾತಿ ಗೋಯಲ್ ಶರ್ಮಾ ಅವರು ಸಲ್ಲಿಸಿದ ದೂರಿನ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಗಮನಹರಿಸಿದೆ ಮತ್ತು ಈ ಪ್ರಕರಣದ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಲು ಆದೇಶಿಸಿದೆ. ಆಯೋಗದ ತನಿಖಾ ವಿಭಾಗದ ತಂಡವು ಈ ತನಿಖೆ ನಡೆಸಲಿದ್ದು, 3 ವಾರಗಳಲ್ಲಿ ವರದಿ ಸಲ್ಲಿಸಲಿದೆ. ಇದರೊಂದಿಗೆ, ಆಯೋಗವು ಈ ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿರುವ ಹಾಗೂ ಆಯೋಗದ ಸದಸ್ಯರಾದ ಪ್ರಿಯಾಂಕ ಕಾನೂಂಗೊ ಅವರ ಸಚಿವಾಲಯಕ್ಕೆ ಮುಂದಿನ ಕ್ರಮಕ್ಕಾಗಿ ತಂಡದೊಂದಿಗೆ ಸಮನ್ವಯ ಸಾಧಿಸುವಂತೆ ನಿರ್ದೇಶಿಸಿದೆ.

ಏಪ್ರಿಲ್ 13, 2025 ರಂದು ದಾಖಲಿಸಲಾದ ಈ ದೂರಿನಲ್ಲಿ ಹಿಂದೂಗಳ ಮೇಲೆ ನಡೆಸಲಾದ ದಾಳಿ, ಅವರ ಆಸ್ತಿ-ಪಾಸ್ತಿಗಳ ನಾಶ, ಈ ಭಯಾನಕ ಘಟನೆಯಲ್ಲಿ ಹರ ಗೋವಿಂದ ದಾಸ ಮತ್ತು ಚಂದನ ದಾಸ ಎಂಬ ತಂದೆ-ಮಗನನ್ನು ಮುಸ್ಲಿಂ ಗುಂಪು ಹತ್ಯೆ ಮಾಡಿದ್ದು ಮುಂತಾದ ಘಟನೆಗಳು ಸೇರಿವೆ. ಈ ಗಲಭೆಯಲ್ಲಿ ಪೊಲೀಸರ ನಿರ್ಲಕ್ಷ್ಯದ ಆರೋಪಗಳು ಸಹ ಕೇಳಿಬಂದಿವೆ.

ಸಂಪಾದಕೀಯ ನಿಲುವು

ಇಂತಹ ಗಲಭೆಗಳ ಬಗ್ಗೆ ದೂರು ಏಕೆ ನೀಡಬೇಕು? ಮಾನವ ಹಕ್ಕುಗಳ ಆಯೋಗವು ಸ್ವಯಂಪ್ರೇರಿತವಾಗಿ ಇಂತಹ ಘಟನೆಗಳಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಏಕೆ ಕೈಗೊಳ್ಳುವುದಿಲ್ಲ?