ಮುಂಬಯಿ – ದೆಹಲಿಯಲ್ಲಿ ಏಪ್ರಿಲ್ 30 ಮತ್ತು ಮೇ 1 ರಂದು ಮಾವಿನ ಹಬ್ಬವನ್ನು ಆಯೋಜಿಸಲಾಗಿದೆ. ಉತ್ತರ-ಪಶ್ಚಿಮ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ರವೀಂದ್ರ ವೈಕರ್ ಅವರ ಸಂಕಲ್ಪದ ಮೇರೆಗೆ ಈ ಮಾವಿನ ಹಬ್ಬ ನಡೆಯಲಿದೆ. ದೇವಗಡ ಮತ್ತು ರತ್ನಾಗಿರಿಯಿಂದ ಹಾಪೂಸ್ ಮಾವಿನ ಹಣ್ಣುಗಳು, ಹಾಗೆಯೇ ಕೊಂಕಣದ ವಿವಿಧ ಉತ್ಪನ್ನಗಳು ಈ ಪ್ರದರ್ಶನದಲ್ಲಿ ಇರಲಿವೆ. ಏಪ್ರಿಲ್ 30 ರಂದು ಸಂಜೆ 6 ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಈ ಹಬ್ಬದ ಉದ್ಘಾಟನೆ ನೆರವೇರಲಿದೆ.