ವೆಲ್ಲೂರು (ತಮಿಳುನಾಡು) – ಜಿಲ್ಲೆಯ ವಿರಂಚಿಪುರಂ ಪ್ರದೇಶದ ಕಟ್ಟು ಕೊಲಾಯಿ ಗ್ರಾಮದಲ್ಲಿ ಕಳೆದ 4 ತಲೆಮಾರುಗಳಿಂದ ವಾಸಿಸುತ್ತಿರುವ 150 ಕುಟುಂಬಗಳು ಇದ್ದಕ್ಕಿದ್ದಂತೆ ನಿರಾಶ್ರಿತರಾಗುವ ಪರಿಸ್ಥಿತಿ ಎದುರಾಗಿದೆ. ಅವರು ವಾಸಿಸುತ್ತಿರುವ ಭೂಮಿ ವಕ್ಫ್ ಮಂಡಳಿಗೆ ಸೇರಿದ್ದು ಎಂದು ಹೇಳಲಾಗಿದೆ. ಈ ಭೂಮಿಯು ನವಾಬ್ ಮಸೀದಿ ಮತ್ತು ಹಜರತ್ ಸೈಯದ್ ಅಲಿ ಸುಲ್ತಾನ್ ಶಾ ದರ್ಗಾಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳಲ್ಲಿ ಆಕ್ರೋಶ ಭುಗಿಲೆದ್ದಿದೆ. ತಮ್ಮ ಬಳಿ ದಾಖಲೆಗಳಿದ್ದು, ಅದರ ಪ್ರಕಾರ ಭೂಮಿ ತಮ್ಮ ಮಾಲೀಕತ್ವಕ್ಕೆ ಸೇರಿದ್ದು ಎಂದು ನಿವಾಸಿಗಳು ಹೇಳುತ್ತಿದ್ದಾರೆ.
1. ಹಜರತ್ ಸೈಯದ್ ಅಲಿ ಸುಲ್ತಾನ್ ಶಾ ದರ್ಗಾಕ್ಕೆ ಸಂಬಂಧಿಸಿದ ಸೈಯದ್ ಸದಾಮ್ ಅವರು ಗ್ರಾಮದ ನಿವಾಸಿಗಳಿಗೆ ತೆರಿಗೆ ಪಾವತಿಸುವಂತೆ ನೋಟಿಸ್ ಕಳುಹಿಸಿದ್ದಾರೆ. ಈ ಭೂಮಿ ವಕ್ಫ್ ಮಂಡಳಿಯ ಆಸ್ತಿಯಾಗಿದ್ದು, ದರ್ಗಾ ಅದರ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ ಎಂದು ನೋಟಿಸ್ನಲ್ಲಿ ಹೇಳಲಾಗಿದೆ.
2. ಮಸೀದಿಯ ಮುಖ್ಯ ಮುತವಲ್ಲಿ (ವ್ಯವಸ್ಥಾಪಕರು) ಮಾತನಾಡಿ, ಈ ಭೂಮಿ ವಕ್ಫ್ ಗೆ ಸೇರಿದ್ದು ಎಂದು ಗ್ರಾಮಸ್ಥರಿಗೆ ಮೊದಲಿನಿಂದಲೂ ತಿಳಿದಿದೆ. ಸರಕಾರಿ ದಾಖಲೆಗಳು ಈ ಭೂಮಿ 1954 ರಲ್ಲಿಯೂ ವಕ್ಫ್ ಗೆ ಸೇರಿತ್ತು ಎಂದು ತೋರಿಸುತ್ತವೆ, ಎಂದು ಹೇಳಿದ್ದಾರೆ.
ಹಿಂದೂ ಸಂಘಟನೆಗಳಿಂದ ಪ್ರತಿಭಟನೆ
ಹಿಂದೂ ಮುನ್ನಾನಿ (ಹಿಂದೂ ಮುಂಚೂಣಿ) ಸಂಘಟನೆಯು ಗ್ರಾಮಸ್ಥರನ್ನು ಒಗ್ಗೂಡಿಸಿತು. ಅವರು ಈ ನೋಟಿಸ್ ವಿರುದ್ಧ ವೆಲ್ಲೂರು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ವಿ.ಆರ್. ಸುಬ್ಬುಲಕ್ಷ್ಮಿ ಅವರು ಈ ವಿಷಯದ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. “ಯಾರನ್ನೂ ನಿರಾಶ್ರಿತರನ್ನಾಗಿ ಮಾಡುವುದಿಲ್ಲ” ಎಂದು ಅವರು ಭರವಸೆ ನೀಡಿದ್ದಾರೆ.
ಭಾಜಪ ಶಾಸಕಿ ಸಿ. ಸರಸ್ವತಿ ಮಾತನಾಡಿ, ವಕ್ಫ್ ಮಂಡಳಿಯ ಬಳಿ ಸೂಕ್ತ ದಾಖಲೆಗಳಿಲ್ಲ. ಅವರು ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆಂದು ಹೇಳಿದರು.
Waqf Board claims land of 150 homes in a village in Vellore, Tamil Nadu! ⚠️
Even after Waqf Act reforms, such land-grab claims continue — totally unacceptable!
The government must act now and use the full force of the law! ⚖️
VC: @SADigestOnline pic.twitter.com/YMygKKdUgZ
— Sanatan Prabhat (@SanatanPrabhat) April 16, 2025
ಸಂಪಾದಕೀಯ ನಿಲುವುದೇಶದಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದ ನಂತರವೂ ಇಂತಹ ಘಟನೆಗಳು ನಡೆಯುವುದು ಸರಿಯಲ್ಲ. ಸರಕಾರವು ಇಂತಹವರ ವಿರುದ್ಧ ತಕ್ಷಣ ಕ್ರಮ ಕೈಗೊಂಡು ಕಾನೂನಿನ ಬಲವನ್ನು ತೋರಿಸಬೇಕು! |