ಭಾವನೆಗಳಿಗೆ ನೋವನ್ನುಂಟುಮಾಡುವ ಅಧಿಕಾರ ಯಾರಿಗೂ ಇಲ್ಲ ! – ಕೇಂದ್ರ ಸಚಿವ ಅನುರಾಗ ಠಾಕೂರ್

ಮುಂಬಯಿ – ಆದಿಪುರುಷ ಚಲನಚಿತ್ರದಲ್ಲಿನ ಸಂವಾದ ಬದಲಾಯಿಸುವುದಾಗಿ ಲೇಖಕ ಮತ್ತು ನಿರ್ದೇಶಕರು ಆಶ್ವಾಸನೆ ನೀಡಿದ್ದಾರೆ . ಕೇಂದ್ರ ಚಲನಚಿತ್ರ ನಿರೀಕ್ಷಣಾ ಮಂಡಳಿ ಚಲನಚಿತ್ರಕ್ಕೆ ಪ್ರಮಾಣ ಪತ್ರ ನೀಡಿದೆ. ಜನರ ಭಾವನೆ ನೋಯಿಸುವ ಅಧಿಕಾರ ಯಾರಿಗೂ ಇಲ್ಲ, ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ ಠಾಕೂರ್ ಇವರು ಪತ್ರಕರ್ತರ ಜೊತೆಗೆ ಮಾತನಾಡುವಾಗ ಪ್ರತಿಕ್ರಿಯೆ ನೀಡಿದರು.