ಮುಸಲ್ಮಾನ ಹುಡುಗಿಯ ಸಹೋದರನಿಂದ ಆಕೆಯ ಹಿಂದೂ ಪ್ರಿಯಕರನ ಬರ್ಬರ ಹತ್ಯೆ !

  • ಶವವನ್ನು ೮ ತುಂಡುಗಳಾಗಿ ಕತ್ತರಿಸಿ ಗೋಣಿಚೀಲಕ್ಕೆ ತುಂಬಿಸಿ ಚರಂಡಿಗೆ ಎಸೆದ !

  • ಹುಡುಗಿಯ ಸಹೋದರ ಶಬೀರನ ಬಂಧನ !

ಶಿಮ್ಲಾ (ಹಿಮಾಚಲಪ್ರದೇಶ) – ರುಕ್ಸಾನ ಎಂಬ ಓರ್ವ ಮುಸಲ್ಮಾನ ಹುಡುಗಿಯನ್ನು ಪ್ರೀತಿಸುತ್ತದ್ದ ೨೧ ವರ್ಷದ ಮನೋಹರನನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ರುಕ್ಸಾನಾಳ ಸಹೋದರ ಶಬೀರ್ ನನ್ನು ಬಂಧಿಸಲಾಗಿದೆ. ಶಬೀರನು ಮನೋಹರನ ಹತ್ಯೆ ಮಾಡಿ ಶವವನ್ನು ೮ ತುಂಡಾಗಿ ಕತ್ತರಿಸಿ ಗೋಣಿಚೀಲದಲ್ಲಿ ಕಟ್ಟಿದನು. ಆ ಗೋಣಿಚೀಲ ಜೂನ್ ೯ ರಂದು ಚರಂಡಿಯಲ್ಲಿ ಸಿಕ್ಕಿದೆ. ಈ ಘಟನೆಯನ್ನು ಖಂಡಿಸುತ್ತ ಸ್ಥಳೀಯ ಮುಸಲ್ಮಾನರು ರುಕ್ಸಾನಾಳ ಕುಟುಂಬವನ್ನು ಬಹಿಷ್ಕಾರ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

(ಸೌಜನ್ಯ – News18 Virals)

೧. ರಾಜ್ಯದ ಚಂಬ ಇಲ್ಲಿಯ ಸಲೂನಿ ಪ್ರದೇಶದಲ್ಲಿರುವ ಬಾಂದಲ ಗ್ರಾಮದ ನಿವಾಸಿಯಾಗಿರುವ ಮನೋಹರ ಜೂನ್ ೬ ರಿಂದ ನಾಪತ್ತೆಯಾಗಿದ್ದನು. ಅನಿರೀಕ್ಷಿತವಾಗಿ ಜೂನ್ ೯ ರಂದು ಅಲ್ಲಿಯ ಒಂದು ಚರಂಡಿಯಿಂದ ದುರ್ವಾಸನೆ ಬರುತ್ತಿತ್ತು. ಜನರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಚರಂಡಿಯಲ್ಲಿ ಗೋಣಿಚೀಲ ಹೊರ ತೆಗೆದಾಗ ಅದರಲ್ಲಿ ಒಂದು ಶವದ ೮ ತುಂಡುಗಳು ದೊರೆತವು. ವಿಚಾರಣೆಯಲ್ಲಿ ಹತ್ಯೆಯಾಗಿರುವ ವ್ಯಕ್ತಿಯ ಹೆಸರು ಮನೋಹರ ಎಂದು ತಿಳಿದುಬಂದಿತು.

(ಸೌಜನ್ಯ – News 4 Himalayan)

೨. ಮನೋಹರ ಮತ್ತು ರುಕ್ಸಾನ ಇವರಲ್ಲಿ ಪ್ರೇಮ ಸಂಬಂಧ ಇತ್ತು, ರುಕ್ಸಾನಾಳ ಕುಟುಂಬದವರಿಗೆ ಇದು ಒಪ್ಪಿಗೆ ಇರಲಿಲ್ಲ.

೩. ಮನೋಹರನ ತಾಯಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿದ್ದಾರೆ. ಆಕೆ ರುಕ್ಸಾನಾಳ ಕಾಕಾ ಮುಸಾಫಿರ್ ಕೂಡ ಶಬೀರಗೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

೪. ಈ ಪ್ರಕರಣದಲ್ಲಿ ಬಜರಂಗದಳದ ಜೊತೆಗೆ ಸ್ಥಳೀಯ ಹಿಂದುತ್ವನಿಷ್ಠ ಸಂಘಟನೆಗಳಿಂದ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಲಾಗುತ್ತಿದೆ. ಹಾಗೆ ಏನಾದರೂ ನಡೆಯದೇ ಇದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ಕೂಡ ನೀಡಿದ್ದಾರೆ.

ರುಕ್ಸಾನಾಳ ಕುಟುಂಬದವರ ಮೇಲೆ ಸ್ಥಳೀಯ ಮುಸಲ್ಮಾನರು ಹಾಕಿರುವ ಬಹಿಷ್ಕಾರ ನಾಟಕ ! – ಭಾಜಪ

ಸ್ಥಳೀಯ ಪ್ರಸಾರ ಮಾಧ್ಯಮಗಳಿಂದ ನೀಡಿರುವ ಮಾಹಿತಿಯ ಪ್ರಕಾರ ರುಕ್ಸಾನಾಳ ಕುಟುಂಬದವರೇ ಮನೋಹರನ ಹತ್ಯೆ ಮಾಡಿರುವುದರಿಂದ ಸ್ಥಳೀಯ ಮುಸಲ್ಮಾನರು ಕುಟುಂಬವನ್ನು ಬಹಿಷ್ಕರಿಸಿದ್ದಾರೆ. ಭಾಜಪದ ಸ್ಥಳೀಯ ನಾಯಕ ಅಜಯ ತಂಡನ ಇವರ ಅಭಿಪ್ರಾಯ ಮುಸಲ್ಮಾನರ ನಾಟಕವಾಗಿದ್ದು ಕಾಲ ಕಳೆದಂತೆ ಇವರೆಲ್ಲರೂ ಒಂದಾಗುವವರು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

‘ಲವ್ ಜಿಹಾದ್’ ಮೂಲಕ ಹಿಂದೂ ಹುಡುಗಿಯ ಜೀವನ ಹಾಳು ಮಾಡುವುದರ ಜೊತೆಗೆ ಮುಸಲ್ಮಾನ ಹುಡುಗಿಯರನ್ನು ಪ್ರೀತಿಸುವ ಹಿಂದೂ ಹುಡುಗರ ಜೀವನವನ್ನೂ ಕೂಡ ಕೊನೆಗೊಳಿಸಲಾಗುತ್ತದೆ. ಇಂತಹ ಘಟನೆ ತಡೆಯಲು ಹಿಂದೂ ರಾಷ್ಟ್ರ ಸ್ಥಾಪನೆ ಆಗದೆ ಬೇರೆ ಪರ್ಯಾಯವಿಲ್ಲ, ಇದನ್ನು ತಿಳಿಯಿರಿ !

ಸಾಮಾನ್ಯವಾಗಿ ಹಿಂದುತ್ವನಿಷ್ಠರಿಗೆ ‘ಪ್ರೀತಿಗೆ ಧರ್ಮದೊಂದಿಗೆ ಜೋಡಿಸದಿರಿ’, ಎಂದು ಉಪದೇಶ ನೀಡುವ ಕಥಿತ ಜಾತ್ಯತೀತರು ಈಗ ಮೌನ ಏಕೆ ?