ಒಡಿಶಾದಲ್ಲಿನ ರೈಲು ಅಪಘಾತದ ಘಟನೆಗೆ ಧಾರ್ಮಿಕ ಬಣ್ಣ ಕೊಡಬೇಡಿ ! – ಒಡಿಶಾ ಪೊಲೀಸರ ಮನವಿ

ಭುವನೇಶ್ವರ (ಒಡಿಶಾ) – ಬಾಲಸೋರ್‌ನಲ್ಲಿ ನಡೆದ ಭೀಕರ ಅಪಘಾತಕ್ಕೆ ಕೆಲವು ಸಾಮಾಜಿಕ ಕಂಟಕರು ಧಾರ್ಮಿಕ ಬಣ್ಣ ಹಚ್ಚುತ್ತಿದ್ದಾರೆಂದು ಒಡಿಶಾ ಪೊಲೀಸರು ಆರೋಪಿಸಿದ್ದಾರೆ, ಈ ರೀತಿ ಮಾಡುವುದು ಅತ್ಯಂತ ದುರದೃಷ್ಟಕರವಾಗಿದೆ ಎಂದು ಪೊಲೀಸರು ಮನವಿ ಮೂಲಕ ಜನರಿಗೆ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಪಘಾತದ ಸುದ್ದಿಗೆ ಧಾರ್ಮಿಕ ಬಣ್ಣ ಹಚ್ಚಬೇಡಿ ಮತ್ತು ಇಂತಹ ಪೋಸ್ಟ್‌ಗಳನ್ನು ಪ್ರಸಾರ ಮಾಡಬೇಡಿ ಎಂದು ನಾವು ಎಲ್ಲರಿಗೂ ವಿನಂತಿಸುತ್ತೇವೆ. ಇದರಿಂದ ಎರಡು ಧರ್ಮಗಳ ನಡುವೆ ವಿವಾದ ಸೃಷ್ಟಿಸಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಸಹ ಹೇಳಿದ್ದಾರೆ.