ಭಾಗಲಪುರ (ಬಿಹಾರ)ದ ಗಂಗಾನದಿಯ ಮೇಲೆ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದ ಪ್ರಕರಣ

ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ ಇವರ ಹೇಳಿಕೆ :

  • ‘ಸೇತುವೆಯ ಕಾಮಗಾರಿಯಲ್ಲಿ ಕುಂದುಕೊರತೆಗಳು ಕಂಡು ಬಂದಿದ್ದರಿಂದ ಅದನ್ನು ಕೆಡವಲಾಯಿತಂತೆ !’

  • 1 ಸಾವಿರದ 750 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿತ್ತು !

  • ಕಳೆದ 11 ವರ್ಷಗಳಿಂದ ಕಾಮಗಾರಿ ನಡೆಯುತ್ತಿತ್ತು !

 

ರಚನಾತ್ಮಕ ದೋಷಗಳಿಂದಾಗಿ ಬಿಹಾರ ಸರ್ಕಾರ ಸೇತುವೆಯನ್ನು ನೆಲಸಮ ಮಾಡಲು ಯೋಜಿಸುತ್ತಿದೆ

ಭಾಗಲಪುರ (ಬಿಹಾರ) – ಇಲ್ಲಿಯ ಸುಲ್ತಾನಗಂಜ – ಅಗುವಾನಿ ಪ್ರದೇಶದಲ್ಲಿ ಗಂಗಾನದಿಗೆ ಕಟ್ಟಲಾಗುತ್ತಿದ್ದ ಸೇತುವೆಯು ಜೂನ 4 ರಂದು ಸಂಜೆ ಕುಸಿದು ಬಿದ್ದಿತು. ಈ ಸಮಯದಲ್ಲಿ ಕೆಲಸ ಮಾಡುತ್ತಿದ್ದ 2 ಭದ್ರತಾಸಿಬ್ಬಂದಿಯವರು ನಾಪತ್ತೆಯಾಗಿದ್ದಾರೆ. ರಾಜ್ಯದ ವಿಪತ್ತು ನಿರ್ವಹಣಾ ಪಡೆಯವರು ಅವರನ್ನು ಹುಡುಕುತ್ತಿದ್ದಾರೆ. ಈ ಘಟನೆಯ ವಿಷಯದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ ಇವರು ಮಾತನಾಡುತ್ತಾ, ‘ನಿಮಗೆ ಗೊತ್ತಿರಬೇಕು, ಕಳೆದ ವರ್ಷ ಸೇತುವೆಯ ಕೆಲವು ಭಾಗ ಕುಸಿದ ಬಳಿಕ ನಾವು ವಿಚಾರಣೆ ನಡೆಸುವಂತೆ ಕೋರಿದ್ದೆವು’. ತದನಂತರ ‘ಐ.ಐ.ಟಿ. ರೂರ್ಕಿ’ ಅಧ್ಯಯನ ನಡೆಸಿದ ಬಳಿಕ ಸೇತುವೆಯ ಕಾಮಗಾರಿ ದೋಷಪೂರಿತವಾಗಿರುವುದು ಕಂಡು ಬಂದಿತು. ಆಗ ನಾವು ಸೇತುವೆಯನ್ನು ಕೆಡವಬೇಕೆಂದು ಹೇಳಿದೆವು. ರಸ್ತೆ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಸಚಿವರಾಗಿರುವ ಪ್ರತ್ಯಯ ಅಮೃತ ಇವರು ಸೇತುವೆಯ ಕಾಮಗಾರಿ ನಡೆಸಿರುವ ಸಂಸ್ಥೆಯನ್ನು ಕಪ್ಪುಪಟ್ಟಿಯಲ್ಲಿ ಹಾಕಲಾಗಿದ್ದು, ದೂರನ್ನು ದಾಖಲಿಸಲಾಗುವುದು ಎಂದು ಹೇಳಿದ್ದರು.

ಈ ಸೇತುವೆಯನ್ನು ‘ಎಸ್.ಪಿ. ಸಿಂಗಲಾ’ ಹೆಸರಿನ ಸಂಸ್ಥೆ ನಿರ್ಮಾಣ ಮಾಡುತ್ತಿತ್ತು. ಈ ಸೇತುವೆ ಖಗಡಿಯಾ ಮತ್ತು ಭಾಗಲಪುರ ಜಿಲ್ಲೆಯನ್ನು ಸಂಪರ್ಕಿಸಲು ನಿರ್ಮಿಸಲಾಗುತ್ತಿದ್ದು, ಕಳೆದ ವರ್ಷ ಎಪ್ರಿಲ್ 27 ರಂದು ಸೇತುವೆಯ ಕೆಲವು ಭಾಗ ನದಿಯಲ್ಲಿ ಕುಸಿದು ಬಿದ್ದಿತ್ತು. 3 ಕಿಲೋಮೀಟರ ಉದ್ದದ ಈ ಸೇತುವೆ 1 ಸಾವಿರದ 750 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿತ್ತು. 2012 ರಿಂದ ಇದರ ಕಾಮಗಾರಿ ಪ್ರಾರಂಭವಾಗಿದೆಯೆಂದು ಹೇಳಲಾಗುತ್ತಿದೆ. ಭಾಜಪ ಈ ಪ್ರಕರಣದಲ್ಲಿ ಮುಖ್ಯಮಂತ್ರಿ ನಿತೀಶ ಕುಮಾರ ಇವರ ತ್ಯಾಗಪತ್ರವನ್ನು ಕೋರಿದೆ.

ಸಂಪಾದಕರ ನಿಲುವು

  • ನೂರಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿ ನಿರ್ಮಾಣ ಮಾಡಲಾಗುತ್ತಿದ್ದ ಸೇತುವೆಯ ಕಾಮಗಾರಿ ಕಳಪೆ ದರ್ಜೆ ಆಗುವವರೆಗೆ ಬಿಹಾರ ರಾಜದ ಮತ್ತು ಜನತಾದಳ(ಸಂಯುಕ್ತ) ಇವರ ಸರಕಾರ ನಿದ್ರಿಸಿತ್ತೇ ?
  • ಸಂಬಂಧಿಸಿದ ಸರಕಾರಿ ಅಧಿಕಾರಿಗಳು, ಸಚಿವರು ಮತ್ತು ಕಾಮಗಾರಿ ಸಂಸ್ಥೆಯವರಿಂದ ಇಲ್ಲಿಯವರೆಗೆ ಆಗಿರುವ ಎಲ್ಲ ವೆಚ್ಚಗಳನ್ನು ವಸೂಲು ಮಾಡಿಕೊಳ್ಳಬೇಕು. ಇದಕ್ಕಾಗಿ ಬಿಹಾರ ಜನತೆ ಸಂಘಟಿತರಾಗಿ ಒತ್ತಾಯಿಸಬೇಕು !