ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ದುಷ್ಪರಿಣಾಮವನ್ನು ತಿಳಿಯಿರಿ  !

೧. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ದುಷ್ಪರಿಣಾಮವನ್ನು ತಿಳಿಯಿರಿ  !

‘ಕರ್ನಾಟಕ ರಾಜ್ಯದ ಮುಸಲ್ಮಾನರು ಕಾಂಗ್ರೆಸ್‌ಗೆ ಮತದಾನ ಮಾಡಿದ್ದರಿಂದ ಅದು ಗೆಲುವು ಸಾಧಿಸಿದೆ. ಅದಕ್ಕಾಗಿ ಕಾಂಗ್ರೆಸ್ ಮುಸಲ್ಮಾನನನ್ನು ಉಪಮುಖ್ಯಮಂತ್ರಿ ಮಾಡಬೇಕು ಮತ್ತು ೫ ಮಂತ್ರಿಸ್ಥಾನಗಳನ್ನು ಮುಸಲ್ಮಾನರಿಗೆ ನೀಡಬೇಕು ಎಂದು ರಾಜ್ಯದ ವಕ್ಫ್ ಬೋರ್ಡ್ ಆಗ್ರಹಿಸಿದೆ.

೨. ಹಿಂದೂದ್ವೇಷಿ ದ್ರಮುಕ ಸರಕಾರದ ಸುಳ್ಳುತನವನ್ನು ತಿಳಿಯಿರಿ  !

ನಾವು ರಾಜ್ಯದಲ್ಲಿ ಚಲನಚಿತ್ರವನ್ನು ನಿಷೇಧಿಸಿಲ್ಲ. ಚಿತ್ರಮಂದಿರದ ಮಾಲೀಕರೇ ಪ್ರೇಕ್ಷಕರಿಂದ ಕಡಿಮೆ ಪ್ರತಿಕ್ರಿಯೆ ಸಿಗುತ್ತಿರುವುದರಿಂದ ಚಲನಚಿತ್ರವನ್ನು ತೆಗೆದು ಹಾಕಿದ್ದಾರೆ ಎಂದು ತಮಿಳುನಾಡಿನ ದ್ರಮುಕ ಸರಕಾರವು ‘ದಿ ಕೇರಳ ಸ್ಟೋರಿ’ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾಪತ್ರವನ್ನು ಸಲ್ಲಿಸಿದೆ.

೩. ರಾಜಸ್ಥಾನದ ಕಾಂಗ್ರೆಸ್ ಸರಕಾರದ ಪಾಕಿಸ್ತಾನಿ ಆಡಳಿತವನ್ನು ತಿಳಿಯಿರಿ  !

ಜೈಸಲ್ಮೇರ್ (ರಾಜಸ್ಥಾನ) ದಲ್ಲಿನ ಅಮರ ಸಾಗರ ಪ್ರದೇಶದಲ್ಲಿ ಪಾಕಿಸ್ತಾನದ ನಿರಾಶ್ರಿತ ಹಿಂದೂ ಕುಟುಂಬಗಳ ೫೦ ಮನೆಗಳನ್ನು ಆಡಳಿತವು ಬುಲ್ಡೋಜರ್ ಮೂಲಕ ಕೆಡವಿ ಹಾಕಿದೆ. ಈ ಪಾಕಿಸ್ತಾನಿ ನಿರಾಶ್ರಿತ ಹಿಂದೂಗಳು  ಬಹಳ ಸಮಯದಿಂದ ಅಲ್ಲಿ ವಾಸಿಸುತ್ತಿದ್ದರು.

 ೪. ಹಿಂದೂದ್ವೇಷಿ ತೃಣಮೂಲ ಕಾಂಗ್ರೆಸ್ ಮೇಲೆ ಕ್ರಮ ಕೈಗೊಳ್ಳಿರಿ  !

ಬಂಗಾಲದಲ್ಲಿನ ತೃಣಮೂಲ ಕಾಂಗ್ರೆಸ್ ಸರಕಾರವು ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ಮುಂದೆ ಮಾಡಿ ‘ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ಪ್ರದರ್ಶಿಸಲು ಹೇರಿದ ನಿಷೇಧವನ್ನು ತೆಗೆದುಹಾಕಬೇಕೆಂದು ಸರ್ವೋಚ್ಚ ನ್ಯಾಯಾಲಯವು ಸರಕಾರಕ್ಕೆ ಕಟ್ಟುನಿಟ್ಟಾಗಿ ಆದೇಶಿಸಿದೆ.

೫. ಇಂತಹ ಮತಾಂಧರ ಮೇಲೆ ಕಠಿಣ ಕ್ರಮ ಕೈಗೊಳ್ಳಿ !

ಚಿಕಲಿ (ಮಹಾರಾಷ್ಟ್ರ)ಯಲ್ಲಿ ಮದುವೆಯೊಂದರ ಮೆರವಣಿಗೆಯಲ್ಲಿ ಡಿ.ಜೆ.ಯಲ್ಲಿ ಹಾಕಿದ ಭಗವಾನ ಶ್ರೀರಾಮನ ಹಾಡನ್ನು ನಿಲ್ಲಿಸಲು ಹೇಳಿದ ಮತಾಂಧರು ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದರು.

೬. ಬಾಂಗ್ಲಾದೇಶದಲ್ಲಿ ಹಿಂದೂಗಳು ಅಸುರಕ್ಷಿತ !

ಮತಾಂಧ ಮುಸಲ್ಮಾನರು ಮೇ ೧೭ ರ ರಾತ್ರಿ ಬಾಂಗ್ಲಾದೇಶದಲ್ಲಿನ ನೌಗಾವ ಜಿಲ್ಲೆಯ ಮಹಾದೇವಪುರ ಉಪಜಿಲ್ಲೆಯಲ್ಲಿರುವ ನೋಹಾಟಾ ಮೋರ, ಸರಕಾರ ಪಾರಾ ಇಲ್ಲಿನ ಕಾಳಿ ದೇವಸ್ಥಾನಕ್ಕೆ ಬೆಂಕಿ ಹಚ್ಚಿದರು.

೭. ಬಂಗಾಲದಲ್ಲಿನ ಸರ್ವಾಧಿಕಾರವನ್ನು ತಿಳಿಯಿರಿ  !

ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರವೂ ಬಂಗಾಲದಲ್ಲಿ ‘ದಿ ಕೇರಳ ಸ್ಟೋರಿ ಚಲನಚಿತ್ರದ ಮೇಲೆ ಕಾನೂನುಬಾಹಿರವಾಗಿ ನಿಷೇಧ ಹೇರಲಾಗಿದೆ. ಚಿತ್ರಮಂದಿರದ ಮಾಲೀಕರಿಗೆ ಪೊಲೀಸರು ಮತ್ತು ಆಡಳಿತದವರಿಂದ ಬೆದರಿಕೆ ಹಾಕಲಾಗುತ್ತಿದೆ.