ಚಿಕ್ಕಬಳ್ಳಾಪುರದಲ್ಲಿ ಮುಸಲ್ಮಾನ ಸ್ನೇಹಿತೆಯೊಂದಿಗೆ ಉಪಹಾರ ಸೇವಿಸಿದ್ದರಿಂದ ಹಿಂದೂ ಯುವಕನಿಗೆ ಥಳಿತ

ಯುವತಿಯ ಕುಟುಂಬದವರು ಯುವತಿಗೆ ಆರೋಪಿ ಮುಸಲ್ಮಾನ ಯುವಕನ ಕ್ಷಮೆ ಕೋರುವಂತೆ ಅನಿವಾರ್ಯ ಪಡಿಸಿದರು !

ಚಿಕ್ಕಬಳ್ಳಾಪುರ – ಇತ್ತೀಚಿನ ಕಾಲದಲ್ಲಿ ಹಿಂದೂ ಯುವಕ ಮುಸಲ್ಮಾನ ಯುವತಿಯೊಂದಿಗೆ ಕಂಡು ಬರುತ್ತಲೇ, ಅವರನ್ನು ಮುಸಲ್ಮಾನ ಗುಂಪಿನವರು ಗುರಿ ಮಾಡುತ್ತಿರುವ ಅನೇಕ ಘಟನೆಗಳು ನಡೆಯುತ್ತಿವೆ. ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ಮುಸಲ್ಮಾನ ಸ್ನೇಹಿತೆಯೊಂದಿಗೆ ಉಪಹಾರ ಮಾಡಿದ್ದರಿಂದ ಹಿಂದೂ ಯುವಕನನ್ನು ಮುಸಲ್ಮಾನರ ಗುಂಪು ಅಮಾನುಷವಾಗಿ ಥಳಿಸಿದೆ. ಈ ವಿಷಯದ ಒಂದು ವಿಡಿಯೋ ಪ್ರಸಾರವಾಗಿದೆ. ಈ ವಿಡಿಯೋ ಆಧಾರದಲ್ಲಿ ಪೊಲೀಸರು ಆರೋಪಿ ಮುಸಲ್ಮಾನರನ್ನು ಹುಡುಕುತ್ತಿದ್ದಾರೆ.

ಒಂದು ವಾರ್ತಾ ವಾಹಿನಿಯು ನೀಡಿರುವ ಮಾಹಿತಿಯನುಸಾರ, ಮುಸಲ್ಮಾನ ಯುವತಿ ಅವಳ ಓರ್ವ ಹಿಂದೂ ಸ್ನೇಹಿತನೊಂದಿಗೆ ಉಪಹಾರ ಮಾಡಲು `ಗೋಪಿಕಾ ಚಾಟರ’ ಹೆಸರಿನ `ಫುಡ್ ಸ್ಟಾಲ್’ ಗೆ ಹೋಗಿದ್ದಳು. ಅಲ್ಲಿ ಮುಸಲ್ಮಾನ ಯುವಕರ ಒಂದು ಗುಂಪು ಅವರಿಬ್ಬರನ್ನು ಗುರಿ ಮಾಡಿತು. ಯುವಕ ಹಿಂದೂ ಆಗಿರುವುದು ತಿಳಿಯುತ್ತಲೇ ಅವರು ಅವನಿಗೆ ಅಮಾನುಷವಾಗಿ ಥಳಿಸಿದರು. ಯುವತಿಯ ಕುಟುಂಬದವರು ಅವಳಿಗೆ ಆ ಆರೋಪಿ ಮುಸಲ್ಮಾನ ಯುವಕನ ಕ್ಷಮೆ ಕೋರುವಂತೆ ಮಾಡಿದರು.

ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧ ಪ್ರದೇಶಗಳಲ್ಲಿ ಇಂತಹ ಅನೇಕ ಘಟನೆಗಳು ನಡೆದಿವೆ. ಮೇ 21, 2023 ರಂದು ಉತ್ತರಪ್ರದೇಶದ ಮುರಾದಾಬಾದನಲ್ಲಿ ಓರ್ವ ಮುಸಲ್ಮಾನ ಯುವತಿಗೆ ಹಿಂದೂ ಯುವಕನೊಂದಿಗೆ ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿಸುತ್ತಿರುವುದುನ್ನು ನೋಡಿ ಮುಸಲ್ಮಾನ ಯುವಕನ ಒಂದು ಗುಂಪು ಹಿಂದೂ ಯುವಕನಿಗೆ ಅಮಾನುಷವಾಗಿ ಥಳಿಸಿದ್ದರು. ಇತ್ತೀಚೆಗೆ ಬಿಜನೌರನಲ್ಲಿ ಪೊಲೀಸರು ಇಂತಹುದೇ ಒಂದು ಪ್ರಕರಣದಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿರುವ ಕಾರಣದಿಂದ 4 ಮುಸಲ್ಮಾನ ಯುವಕರನ್ನು ಬಂಧಿಸಿದೆ.

ಸಂಪಾದಕರ ನಿಲುವು

ಮುಸಲ್ಮಾನ ಯುವಕನ ಈ ಕೃತ್ಯದ ಕುರಿತು ಅವನ ಇತರ ಮುಸಲ್ಮಾನ ಸಹೋದರರು ಎಂದಿಗೂ ಆಕ್ಷೇಪವನ್ನು ವ್ಯಕ್ತಪಡಿಸಿ ಅವನನ್ನು ನಿಷೇಧಿಸುವುದಿಲ್ಲ ಎನ್ನುವುದನ್ನು ಗಮನಿಸಬೇಕು ! ಬದಲಾಗಿ ಈ ರೀತಿ ಹಿಂದೂಗಳು ಹಿಂದೂ ಯುವತಿ ಮತ್ತು ಮುಸಲ್ಮಾನ ಯುವಕನ ಸಂದರ್ಭದಲ್ಲಿ ಮಾಡಿದ್ದರೆ, ಪ್ರಗತಿಪರರು ಹಿಂದೂಗಳನ್ನು `ತಾಲಿಬಾನಿ’ ಎಂದು ನಿರ್ಧರಿಸುತ್ತಿದ್ದರು ! ಈಗ ಅವರೂ ಸುಮ್ಮನಿದ್ದಾರೆ !