ಕರ್ಣಾವತಿಯಿಂದ 3 ಬಾಂಗ್ಲಾದೇಶಿ ಯುವಕರ ಬಂಧನ

ಜಗನ್ನಾಥ ರಥಯಾತ್ರೆಯಲ್ಲಿ ರಕ್ತಪಾತ ಮಾಡುವ ಸಂಚಾಗಿತ್ತೇ ? ಎಂದು ವಿಚಾರಣೆಯನ್ನು ನಡೆಸಲಾಗುವುದು !

ಕರ್ಣಾವತಿ (ಗುಜರಾತ) – ಗುಜರಾತ ಉಗ್ರ ನಿಗ್ರಹ ದಳವು ಇಲ್ಲಿನ ನರೋಲ ಪ್ರದೇಶದಿಂದ 3 ಯುವಕರನ್ನು ಬಂಧಿಸಿದೆ. ಆ ಮೂವರೂ ಬಾಂಗ್ಲಾದೇಶಿಯರೆಂದು ಹೇಳಲಾಗುತ್ತಿದೆ. ಪಾಕಿಸ್ತಾನದವರೊಂದಿಗೆ ಅವರ ಸಂಬಂಧ ಇದೆಯೇ ? ಎಂದೂ ತನಿಖೆಯನ್ನು ಮಾಡಲಾಗುತ್ತಿದೆ. ಇದರೊಂದಿಗೆ ಗುಜರಾತ್ ನಲ್ಲಿ ಇವರು ಹೇಗೆ ಬಂದರು ? ಮತ್ತು ಇಲ್ಲಿಗೆ ಬರುವುದರ ಹಿಂದಿನ ಉದ್ದೇಶವೇನು ? ಎಂದೂ ವಿಚಾರಣೆಯನ್ನು ನಡೆಸಲಾಗುತ್ತಿದೆ. ಮುಂದಿನ ತಿಂಗಳು ಇಲ್ಲಿ ನಡೆಯಲಿರುವ ಭಗವಾನ ಜಗನ್ನಾಥನ ರಥಯಾತ್ರೆಯ ಮೊದಲು ಅವರನ್ನು ಬಂಧಿಸಿರುವುದರಿಂದ ಜಗನ್ನಾಥ ರಥ ಯಾತ್ರೆಯಲ್ಲಿ ರಕ್ತಪಾತ ಮಾಡುವ ಸಂಚಾಗಿತ್ತೇ? ಎಂದೂ ವಿಚಾರಣೆಯನ್ನು ನಡೆಸಲಿದ್ದಾರೆ.