ಬರೇಲಿಯಲ್ಲಿ ಮತಾಂಧರಿಂದ ಹಿಂದೂ ಯುವಕನಿಗೆ ಮಾರಣಾಂತಿಕ ಹಲ್ಲೆ !

ಈ ಸ್ಥಿತಿಯನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು !

ಬರೇಲಿ (ಉತ್ತರಪ್ರದೇಶ) – ಇಲ್ಲಿಯ ಮುಸಲ್ಮಾನ ಬಹುಸಂಖ್ಯಾತ ಕರೇಲಿ ಗ್ರಾಮದಲ್ಲಿ ಓರ್ವ ಹಿಂದೂ ಯುವಕನ ಕಾರು ಮತ್ತು ಮತಾಂಧ ಯುವಕನ ಬೈಕ್ ನಡುವೆ ಸಣ್ಣ ಅಪಘಾತವಾಯಿತು. ಈ ಅಪಘಾತದ ನೆಪವೊಡ್ಡಿ ಅಲ್ಲಿಯ ಮುಸಲ್ಮಾನರ ಗುಂಪು ಹಿಂದೂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದರು. ರಕ್ತಸಿಕ್ತನಾಗಿದ್ದ ಹಿಂದೂ ಯುವಕನನ್ನು ರಕ್ಷಿಸಲು ಅವನ ಪರಿಚಯದ ಜನರು ಬಂದಾಗ ಅವರ ಮೇಲೆಯೂ ಆಕ್ರಮಣ ನಡೆಸಿದರು. ಗುಂಪು ಅವನ ಕಾರನ್ನು ಕೂಡ ಧ್ವಂಸ ಮಾಡಿದರು. ಹಿಂದೂ ಯುವಕನನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಭರ್ತಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಮೋನಿಸ, ಜಾವೇದ, ಸಾಜಿದ, ಯುನೂಸ, ಪರವೇಝ ಸಹಿತ ಇತರೆ 30-40 ಆಕ್ರಮಣಕಾರಿಗಳ ವಿರುದ್ಧ ದೂರನ್ನು ದಾಖಲಿಸಲಾಗಿದ್ದು, ಕೆಲವು ಜನರನ್ನು ವಶಕ್ಕೆ ಪಡೆಯಲಾಗಿದೆ.

ಮತಾಂಧರ ಗುಂಪು ಆಕ್ರಮಣ ನಡೆಸಿದ ಈ ಹಿಂದೂ ಯುವಕನ ಹೆಸರು ಹ್ಯಾಪಿ ತಾರಾಚಂದ್ರ ಆಗಿದ್ದೂ ಆತ ಬುಖಾರಾ ಗ್ರಾಮದ ನಿವಾಸಿಯಾಗಿದ್ದಾನೆ. ತಾರಾಚಂದ್ರನು ಪೊಲೀಸರಿಗೆ, ತಾನು ಕಾರಿನ ಮೂಲಕ ಕಾರಲಿ ಗ್ರಾಮದಿಂದ ಹೋಗುತ್ತಿರುವಾಗ ಎದುರಿನಿಂದ ಬಂದ ಬೈಕ್ ಕಾರಿಗೆ ಗುದ್ದಿತು. ಇದರಲ್ಲಿ ಯಾರಿಗೂ ಪೆಟ್ಟಾಗಿಲ್ಲ ಮತ್ತು ಬೈಕ್ ಗೂ ಯಾವುದೇ ಹಾನಿಯಾಗಿಲ್ಲ. ತದನಂತರ ಬೈಕ್ ಸವಾರ ಯುವಕನು ಗ್ರಾಮದ ಜನರನ್ನು ಕರೆಸಿ ಅವನ ಮೇಲೆ ಹಲ್ಲೆ ನಡೆಸಲು ಪ್ರಾರಂಭಿಸಿದರು. ಗುಂಪು ಹೆಚ್ಚುತ್ತಲೇ ಹೋಯಿತು ಮತ್ತು ಒದ್ದು – ಗುದ್ದಿ ಹೊಡೆಯಲು ಪ್ರಾರಂಭಿಸಿದರು. ನಾನು ರಕ್ತಸಿಕ್ತನಾಗಿದೆನು. ನಾನು ಗುಂಪಿನವರಲ್ಲಿ ದಯೆಯ ಯಾಚನೆ ಮಾಡಿದೆನು. ಆದರೆ ರಕ್ತಪೀಪಾಸು ಮತಾಂಧರು ನನ್ನನ್ನು ಹತ್ಯೆ ಮಾಡಲು ದೃಢನಿಶ್ಚಯ ಮಾಡಿದ್ದರು. ಈ ಮಾಹಿತಿ ಸಿಗುತ್ತಲೇ ಪೊಲೀಸರು ಘಟನಾಸ್ಥಳಕ್ಕೆ ಧಾವಿಸಿದರು. ಅವರು ನನ್ನ ಜೀವವನ್ನು ರಕ್ಷಿಸಿದರು ಮತ್ತು ನನ್ನನ್ನು ಆಸ್ಪತ್ರೆಗೆ ಸೇರಿಸಿದರು. ಈ ಪ್ರಕರಣದಲ್ಲಿ ಪೊಲೀಸರು ತನಿಖೆಯನ್ನು ಪ್ರಾರಂಭಿಸಿರುವುದಾಗಿ ಪೊಲೀಸ ಅಧೀಕ್ಷಕ ರಾಹುಲ ಭಾಟಿಯವರು ಹೇಳಿದರು.